ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ ! ಐಎಂಎಫ್ ಹೇಳಿದ್ದೇನು?


Team Udayavani, Oct 14, 2020, 8:24 PM IST

GDP

ಮಣಿಪಾಲ: ಹಿಂದುಳಿದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಬಾಂಗ್ಲಾದೇಶದ ಜಿಡಿಪಿ ಈ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್ ವರೆಗೆ) ಭಾರತದ ಕ್ಯಾಪಿಟಾ ಜಿಡಿಪಿಗಿಂತ ಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮಾಹಿತಿಯನ್ನು ಸ್ವತಃ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈ ನೀಡಿದೆ. ಐಎಂಎಫ್ ಬಾಂಗ್ಲಾದೇಶದ ತಲಾ ಜಿಡಿಪಿ 1,888 ಡಾಲರ್‌ (ಸುಮಾರು 1,38,400 ರೂ.) ಆಗಿದ್ದರೆ, ಭಾರತದಲ್ಲಿ ಅದು 1,877 ಡಾಲರ್‌ (ಸುಮಾರು 1,37,594 ರೂ.) ಆಗಿರಬಹುದು ಎಂದು ಹೇಳಿದೆ.

2021ರ ವೇಳೆಗೆ ಭಾರತ ಇದರಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಐಎಂಎಫ್ ಹೇಳಿದೆ. 2021ರಲ್ಲಿ ಭಾರತದಲ್ಲಿ ತಲಾ ಜಿಡಿಪಿ 1,48,190 ರೂ. ಆಗಿರಲಿದ್ದು, ಬಾಂಗ್ಲಾದೇಶದ ಜಿಡಿಪಿ 1,45,270 ರೂಪಾಯಿಗಳಾಗಿರಲಿದೆ. ಇದೀಗ ಭಾರತವು 1,037,21 ರೂಪಾಯಿಗಳನ್ನು ಹೊಂದಿದ್ದರೆ, ಬಾಂಗ್ಲಾದೇಶವು ತಲಾ ಜಿಡಿಪಿಯಲ್ಲಿ 1,37,824 ರೂಪಾಯಿಗಳನ್ನು ಹೊಂದಿದೆ. ಈ ಅಂಕಿ ಅಂಶವು ಒಂದು ಡಾಲರ್‌ಗೆ 73 ರೂಪಾಯಿಗಳನ್ನು ಆಧರಿಸಿದೆ.

ಮೊದಲ ತ್ರೈಮಾಸಿಕದ ಕೆಲವು ಬೆಳವಣಿಗೆಗಳು ಭಾರತದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಐಎಂಎಫ್ ಹೇಳಿದೆ. ಮುಂದಿನ ದಿನಗಳಲ್ಲಿ ಅವುಗಳು ಕಡಿಮೆಯಾಗುವ ಯಾವುದೇ ಸಾಧ್ಯತೆ ಕಾಣುತ್ತಿಲ್ಲ ಎಂದು ಹೇಳಿದೆ. ಭಾರತದ ಆರ್ಥಿಕತೆಗೆ ಮುಂದಿನ ಹಾದಿ ಸಾಕಷ್ಟು ಸವಾಲಿನದ್ದಾಗಿದೆ. ಐಎಂಎಫ್ ವರದಿಯ ಪ್ರಕಾರ ದೇಶದ ಸ್ಥಿತಿ ಬಾಂಗ್ಲಾದೇಶಕ್ಕಿಂತ ಕೆಟ್ಟದಾಗಿದ್ದು, ತಲಾ ಜಿಡಿಪಿಯೂ ಬಾಂಗ್ಲಾದೇಶಕ್ಕಿಂತ ಕೆಳಗೆ ಇದೆ ಎಂದಿದೆ. ಇದಕ್ಕೆ ಲಾಕ್‌ಡೌನ್‌ ನೇರ ಕಾರಣ ಎಂದು ಹೇಳಲಾಗಿದೆ.

ಈ ವರ್ಷ ಜಿಡಿಪಿ 10% ಕುಸಿದಿದೆ
ಈ ವರ್ಷ ಭಾರತದ ತಲಾ ಜಿಡಿಪಿ 10% ರಷ್ಟು ಕುಸಿದಿದೆ. ಆದರೆ ಬಾಂಗ್ಲಾದೇಶದ ತಲಾ ಜಿಡಿಪಿಯು ಶೇ. 4ರ ಬೆಳವಣಿಗೆಯನ್ನು ಕಂಡಿದೆ. ತಲಾ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ವಿಷಯದಲ್ಲಿ ಕೆಲವು ವರ್ಷಗಳ ಹಿಂದಿನ ವರೆಗೂ ಭಾರತ ಬಾಂಗ್ಲಾದೇಶಕ್ಕಿಂತಲೂ ಮೇಲಿತ್ತು. ಆದರೆ ದೇಶದಲ್ಲಿ ತ್ವರಿತ ರಫ್ತಿನಿಂದಾಗಿ, ಅದರ ಬೆಳವಣಿಗೆ ಗಮನಾರ್ಹವಾಗಿ ಬದಲಾಗಿದೆ. ಅಲ್ಲದೆ ಭಾರತದ ಉಳಿತಾಯ ಮತ್ತು ಹೂಡಿಕೆ ಕಡಿಮೆಯಾಗಿದೆ.

ಪಾಕಿಸ್ಥಾನ ಮತ್ತು ನೇಪಾಳಕ್ಕಿಂತ ಭಾರತ ಮುಂದೆ
ಐಎಂಎಫ್ ನ ಅಂದಾಜು ಲೆಕ್ಕಾಚಾರಗಳ ಪ್ರಕಾರ ಭಾರತವು ಪಾಕಿಸ್ಥಾನ ಮತ್ತು ನೇಪಾಳಕ್ಕಿಂತ ಮುಂದೆ ಇದೆ. ಆದರೆ ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ದಕ್ಷಿಣ ಏಷ್ಯಾ ಭಾರತಕ್ಕಿಂತ ಮುಂದೆ ಇದೆ. ಭಾರತದ ಸಾಧನೆ ಕುಸಿಯಬಹುದು ಎಂದಿರುವ ವರದಿ ನೇಪಾಳ ಮತ್ತು ಭೂತಾನ್ ಆರ್ಥಿಕತೆಗಳು ಈ ವರ್ಷ ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದೆ. 2021ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯಲ್ಲಿ 9.6% ಕುಸಿತ ಕಾಣಲಿದೆ ಎಂದು ವಿಶ್ವ ಬ್ಯಾಂಕ್ ಮುನ್ಸೂಚನೆ ನೀಡಿದೆ. ಸ್ಪೇನ್ ಮತ್ತು ಇಟಲಿಯ ಅನಂತರ ಭಾರತದ ಜಿಡಿಪಿಯಲ್ಲಿ 10.3% ರಷ್ಟು ಇಳಿಕೆ ಕಂಡುಬಂದಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಗಳ ನಡುವಿನ ದೊಡ್ಡ ಕುಸಿತವಾಗಲಿದೆ ಎಂದು ಐಎಂಎಫ್ ವರದಿಯಲ್ಲಿ ತಿಳಿಸಿದೆ. ಚೀನ 2020 ರಲ್ಲಿ ಶೇ. 5.7ರಷ್ಟು ಕೊರತೆ ಕಾಣಲಿದೆ ಎಂದಿದೆ. ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಮುಂಬರುವ ದಿನಗಳಲ್ಲಿ ವೈರಸ್ ಹರಡುವ ಪ್ರಮಾಣ ಹೆಚ್ಚಾಗಲಿದ್ದು, ಇದು ಆರ್ಥಿಕ ಚೇತರಿಕೆಗೆ ಅಪಾಯ ತಂದೊಡ್ಡಲಿದೆ ಎಂದು ಹೇಳಿದೆ. ಈ ದೇಶಗಳ ಆರ್ಥಿಕತೆಯು ಪ್ರವಾಸೋದ್ಯಮ ಮತ್ತು ರಫ್ತನ್ನು ಅವಲಂಬಿಸಿದೆ.

1990-91ರ ಬಿಕ್ಕಟ್ಟಿನ ಬಳಿಕ 2020ರಲ್ಲಿ ಭಾರತೀಯ ಆರ್ಥಿಕತೆಯು ಹೆಚ್ಚು ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ. ಶ್ರೀಲಂಕಾದ ಬಳಿಕ ಭಾರತವು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಟ್ಟ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ಅದು ವರದಿ ಕಳವಳ ವ್ಯಕ್ತಪಡಿಸಿದೆ. ಆದಾಗ್ಯೂ 2021ರಲ್ಲಿ ಭಾರತದಲ್ಲಿ ಚೇತರಿಕೆ ಕಾಣಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ.

 

 

 

 

 

ಟಾಪ್ ನ್ಯೂಸ್

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

12-bng

Bengaluru: ಜೂಜಾಟದಿಂದ ಮಾಡಿದ್ದ ಭಾರೀ ಸಾಲ ತೀರಿಸಲು ಮನೆ ಕಳ್ಳತನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

11-bng

Bengaluru: ಉದ್ಯಮಿ ಮನೆಯಲ್ಲಿ 1.22 ಕೋಟಿ ಚಿನ್ನ ಕಳವು; ಇಬ್ಬರ ಸೆರೆ

6

Kundapura: ಮರವಂತೆ ಮಾರಸ್ವಾಮಿ ಸ್ಟಾಪ್‌ನಲ್ಲಿ ನಿಲ್ಲದ ಸರಕಾರಿ ಬಸ್‌!

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.