Yoga; ಯೋಗನಿದ್ರೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ?
ಮಾನಸಿಕ ಸ್ಥಿಮಿತತೆ, ಭಾವನೆಗಳ ನಿಯಂತ್ರಣ!
Team Udayavani, Sep 25, 2024, 6:25 AM IST
ಹೊಸದಿಲ್ಲಿ: ಪ್ರಜ್ಞಾಪೂರ್ವಕವಾಗಿ ಮಾಡುವ ನಿದ್ದೆಯಾದ “ಯೋಗನಿದ್ರೆ’ಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೇ ಇದರಿಂದ ಮಾನಸಿಕ ಸ್ಥಿಮಿತತೆ, ಭಾವನೆ ಹಾಗೂ ನಿದ್ರೆಯ ನಿಯಂತ್ರಣ ಮಾಡಬಹುದು ಎಂದು ದಿಲ್ಲಿ ಐಐಟಿ ಮತ್ತು ಏಮ್ಸ್ನ ತಜ್ಞರು ಹೇಳಿದ್ದಾರೆ.
ಯೋಗ ನಿದ್ರೆಯ ಬಗ್ಗೆ ದಿಲ್ಲಿ ಐಐಟಿ, ಏಮ್ಸ್ ಮತ್ತು ಮಹಾಜನ್ ಇಮೇಜಿಂಗ್ ದಿಲ್ಲಿ ಸಂಸ್ಥೆಗಳು ಅಧ್ಯಯನ ನಡೆಸಿದ್ದವು. ನಿಯಮಿತವಾಗಿ ಯೋಗ ನಿದ್ರೆ ಮಾಡುವುದರಿಂದ ಆಯಾಸ ಪರಿಹಾರವಾಗುವುದಲ್ಲದೇ, ಜಾಗೃತ ಸ್ಥಿತಿಯನ್ನು ಹೆಚ್ಚಳ ಮಾಡುತ್ತದೆ ಎಂದು ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿವೆ. ಯೋಗ ನಿದ್ರೆ ಬಲ್ಲವರು ಹಾಗೂ ತಿಳಿಯದವರ 2 ತಂಡಗಳನ್ನು ರಚಿಸಿ ಅವರಿಗೆ ಎಂಆರ್ಐ ಸ್ಕ್ಯಾನ್ ಮಾಡುವ ಮೂಲಕ ಈ ವಿಷಯವನ್ನು ಈ ಸಂಸ್ಥೆಗಳು ಖಚಿತಪಡಿಸಿವೆ.
ಯೋಗ ನಿದ್ರೆ ಬಲ್ಲವರ ಮೆದುಳಿನಲ್ಲಾದ ಬದಲಾವಣೆಗಳು, ಯೋಗ ನಿದ್ರೆ ತಿಳಿಯದವರಲ್ಲಿನ ಬದಲಾವಣೆಗಿಂತ ಭಿನ್ನವಾಗಿವೆ. ಅನುಭವಿ ಧ್ಯಾನಸ್ಥರ ಮನಸ್ಸು ಹೆಚ್ಚು ವಿಚಲಿತಗೊಂಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯನ್ನು ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sanatana Dharma; ಮುಂದುವರೆದ ಪವನ್ ಕಲ್ಯಾಣ್ vs ಪ್ರಕಾಶ್ ರಾಜ್ ಸಮರ
US’s full support ಬಾಂಗ್ಲಾಕ್ಕಿದೆ; ಬೈಡೆನ್ ಭೇಟಿಯಾದ ಮೊಹಮ್ಮದ್ ಯೂನಸ್
3 farm laws; ಕಂಗನಾ ರಣಾವತ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ
Tirupati; ವಿವಾದದಲ್ಲೂ 4 ದಿನದಲ್ಲಿ ಮಾರಾಟವಾದ ಲಡ್ಡುಗಳೆಷ್ಟು ಗೊತ್ತೇ?
Uttar Pradesh: ಹೋಟೆಲ್ಗಳಲ್ಲಿ ಇನ್ನು ಮಾಸ್ಕ್, ಗ್ಲೌವ್ಸ್ ಕಡ್ಡಾಯ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bengaluru: ಇಂದಿನಿಂದ ಶಾಲೆಗಳಲ್ಲಿ ವಾರದ 6 ದಿನ ಮೊಟ್ಟೆ
Arizona;ಕಮಲಾ ಹ್ಯಾರಿಸ್ ಚುನಾವಣ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ
Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ
Divorce; 8 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್
Sanatana Dharma; ಮುಂದುವರೆದ ಪವನ್ ಕಲ್ಯಾಣ್ vs ಪ್ರಕಾಶ್ ರಾಜ್ ಸಮರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.