ಭಾರತಕ್ಕೆ ಅತಿಕ್ರಮಣ ಪ್ರವೃತ್ತಿಯಿಲ್ಲ
Team Udayavani, Jan 10, 2018, 6:10 AM IST
ನವದೆಹಲಿ:ಯಾವುದೇ ದೇಶದ ಭೂಭಾಗವನ್ನು ಅಥವಾ ಸಂಪನ್ಮೂಲವನ್ನು ಅತಿಕ್ರಮಿಸುವಂಥ ಪ್ರವೃತ್ತಿ ಭಾರತಕ್ಕಿಲ್ಲ. ಅಂಥದ್ದರ ಬಗ್ಗೆ ಭಾರತ ಆಸಕ್ತಿಯನ್ನೇ ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ದೇಶವು ಯಾವುದೇ ಲಾಭ-ನಷ್ಟವನ್ನು ಮುಂದಿಟ್ಟುಕೊಳ್ಳದೆ ಕೇವಲ ಮಾನವೀಯತೆಯ ಸಂಬಂಧ ಬೆಳೆಸುತ್ತದೆ ಎಂದು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಜಗತ್ತಿನಾದ್ಯಂತ ಇರುವ ಭಾರತೀಯ ಮೂಲದ ಸಂಸತ್ ಸದಸ್ಯರ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಯಾವತ್ತೂ ವಿಶ್ವದ ಭೂಪಟದಲ್ಲಿ ಧನಾತ್ಮಕ ಕೊಡುಗೆಯತ್ತಲೇ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ. ಜತೆಗೆ, “ತೀವ್ರಗಾಮಿತ್ವ ಮತ್ತು ಮೂಲ ಭೂತವಾದ (ರಾಡಿಕಲೈಸೇಷನ್)ದ ವಿರುದ್ಧ ಹೋರಾಟ ನಡೆಸುವುದಿದ್ದರೆ ಅದು ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಮಾರ್ಗ ಮತ್ತು ಸತ್ಯಾಗ್ರ ಹದಿಂದಷ್ಟೇ ಸಾಧ್ಯ’ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಕ್ತಾಯವಾದ ಚೀನಾ ಜತೆಗಿನ ಗಡಿ ತಂಟೆ ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಈ ಮಾತುಗಳನ್ನಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಭಾರತ ಹೊಂದಿರುವ ಅಭಿವೃದ್ಧಿಯ ಮಾನದಂಡ ಕೊಡುಕೊಳ್ಳುವಿಕೆಯ ಆಧಾರವಾಗಿರದೆ ಆಯಾ ದೇಶಗಳ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ವಿವಿಧ ದೃಷ್ಟಿಕೋನಗಳ ಹಿನ್ನೆಲೆಯಲ್ಲಿ ವಿಶ್ವವೇ ವಿಭಜನೆ ಹೊಂದಿರುವಾಗ ನಾವು “ಸಬ್ ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಘೋಷಣೆ ಮುಂದಿಟ್ಟು ಕೊಂಡು ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
21ನೇ ಶತಮಾನ ಎನ್ನುವುದು ಏಷ್ಯಾದ ಶತಮಾನ. ಹೀಗಾಗಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು. ದೇಶದ ಅರ್ಥ ವ್ಯವಸ್ಥೆ ಬದಲಾಗುತ್ತಿದೆ. ಹೀಗಾಗಿ ಭಾರತದ ಅರ್ಥ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ವಿವಿಧ ದೇಶಗಳಲ್ಲಿರುವ ಭಾರತೀಯ ಮೂಲದ ಸಂಸದರಿಗೆ ಪ್ರಧಾನಿ ಮನವಿ ಮಾಡಿಕೊಂಡರು. ಕಳೆದ ಮೂರು ವರ್ಷಗಳಲ್ಲಿ 60 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ದೇಶಕ್ಕೆ ಹರಿದು ಬಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VHP ನಾಯಕನ ಹ*ತ್ಯೆ ಕೇಸ್:ಪಾಕ್ ಉಗ್ರ ವಾಧ್ವಾ ಸಿಂಗ್ ಸೇರಿ 6 ಮಂದಿ ವಿರುದ್ಧ ಚಾರ್ಜ್ ಶೀಟ್
Tragic: ಕಾಮಗಾರಿ ವೇಳೆ ಗೋಡೆ ಕುಸಿತ; ಮಣ್ಣಿನಡಿ ಸಿಲುಕಿ 7 ಮಂದಿ ಕಾರ್ಮಿಕರು ಜೀವಂತ ಸಮಾಧಿ
Nagpur: ʼಪರ್ಯಾಯ ರಾಜಕೀಯʼ ಹೆಸರಲ್ಲಿ ಹಲವರಿಂದ ವಿನಾಶಕಾರಿ ಅಜೆಂಡಾ: ಮೋಹನ್ ಭಾಗವತ್
UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ
Haryana: ಅ.17ರಂದು ಹರ್ಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ, ಪ್ರಧಾನಿ ಉಪಸ್ಥಿತಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.