![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 7, 2021, 5:49 PM IST
ಜಮ್ಮು-ಕಾಶ್ಮಿರ:ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದ್ದ ಪಾಕ್ ಪ್ರಜೆಯನ್ನು ಭಾರತೀಯ ಸೇನಾಧಿಕಾರಿಗಳು ತವರಿಗೆ ಕಳುಹಿಸಿ ಕೊಟ್ಟಿದ್ದಾರೆ. ಪಾಕಿಸ್ತಾನದ ಲಿಪಾ ಪ್ರದೇಶದ ನಿವಾಸಿ ಮಂಜೂರ್ ಅಹ್ಮದ್ ಎಂಬುವರ ಪುತ್ರ ಮೌಸಮ್ ಹೆಸರಿನ ಯುವಕ ಏಪ್ರಿಲ್ 5 ರಂದು ಭಾರತದ ಗಡಿ ಪ್ರವೇಶಿಸಿದ್ದ.
ಜಮ್ಮು-ಕಾಶ್ಮಿರದ ಕುಪ್ವಾರಾದ ಕರ್ಣ ಎಂಬಲ್ಲಿ ಭಾರತದ ಗಡಿ ನಿಯಂತ್ರಣ ರೇಖೆ( ಎಲ್ಒಸಿ) ಯನ್ನು ದಾಟಿ ಭಾರತಕ್ಕೆ ಆಗಮಿಸಿದ್ದ. ಈತನನ್ನು ವಶಕ್ಕೆ ಪಡೆದ ಭಾರತೀಯ ಸೇನೆ ಪಾಕಿಸ್ತಾನ್ ಅಧಿಕಾರಿಗಳ ಗಮನಕ್ಕೆ ತಂದಿತ್ತು.
ಉಭಯ ರಾಷ್ಟ್ರಗಳ ಅಧಿಕಾರಿಗಳ ನಡುವೆ ಮಾತುಕತೆ ನಡೆದು ಇಂದು (ಏ.7) ಬೆಳಿಗ್ಗೆ 11.50ರ ವೇಳೆ ತೀತ್ ವಾಲ್ ಎಂಬಲ್ಲಿ ಮೌಸಮ್ನನ್ನು ಪಾಕ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಮೌಸಮ್ ತಾಯಿನಾಡಿಗೆ ಮರಳಿಸಿದ ಅಧಿಕಾರಿಗಳಿಗೆ ಬಟ್ಟೆ ಹಾಗೂ ಸಿಹಿತಿಂಡಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾನೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾತಾಡಿರುವ ಭಾರತೀಯ ಸೇನಾಧಿಕಾರಿಗಳು ಮಾನವೀಯತೆಯ ನೆಲೆಗಟ್ಟಿನಲ್ಲಿ ತವರಿಗೆ ಮರಳಿ ಕಳುಹಿಸಿದ್ದೇವೆ ಎಂದಿದ್ದಾರೆ.
#WATCH: Indian authorities repatriated a youth to Pakistani authorities from Teethwal crossing point as humanitarian gesture. He was given clothes and sweets on his return. He had crossed LoC into Karna, Kupwara (Jammu and Kashmir) on 5th April.
(Source: Indian Army) pic.twitter.com/QbYbMIv81O
— ANI (@ANI) April 7, 2021
Pariksha Pe Charcha: ಸಾರ್ಟ್ಫೋನ್ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.