ಚಂದ್ರನತ್ತ ಭಾರತೀಯ ನಟ ದೇವ್!
ಜಪಾನ್ ಉದ್ಯಮಿ ಜತೆ ಪಯಣಿಸಲಿರುವ 8 ಮಂದಿ ಪೈಕಿ ಜೋಷಿಯೂ ಒಬ್ಬರು
Team Udayavani, Dec 10, 2022, 6:50 AM IST
ನವದೆಹಲಿ: ಜಪಾನ್ನ ಕೋಟ್ಯಧಿಪತಿ ಯುಸಾಕು ಮಝಾವಾ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಚಂದ್ರನತ್ತ ನಾಗರಿಕರೇ ಪ್ರಯಾಣ ಬೆಳೆಸಲಿದ್ದಾರೆ.
“ಡಿಯರ್ ಮೂನ್’ ಎಂಬ ಹೆಸರಿನ ಈ ಯೋಜನೆ ಮುಂದಿನ ವರ್ಷ ಸಾಕಾರಗೊಳ್ಳಲಿದೆ. ತಮ್ಮೊಂದಿಗೆ ಚಂದಿರನ ಕಡೆಗೆ ಪ್ರಯಾಣ ಬೆಳೆಸಲಿರುವ 8 ಮಂದಿಯ ಪಟ್ಟಿಯನ್ನು ಯುಸಾಕು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ನಟರೊಬ್ಬರ ಹೆಸರಿದೆ.
ಅವರ್ಯಾರು ಗೊತ್ತಾ?
ಗುಜರಾತ್ನ ನಟ ದೇವ್ ಡಿ. ಜೋಷಿ. ಗುಜರಾತ್ನಲ್ಲೇ ಹುಟ್ಟಿರುವ ಜೋಷಿ ಅವರು 20ಕ್ಕೂ ಹೆಚ್ಚು ಗುಜರಾತಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ, ಸೋನಿ ಸಾಬ್ನ ಬಾಲ್ ವೀರ್ ಮತ್ತು ಬಾಲ್ವೀರ್ ರಿಟರ್ನ್Õ ಶೋಗಳಲ್ಲಿ ಬಾಲವೀರನ ಪಾತ್ರಧಾರಿಯಾಗಿ ಅವರು ಮನೆ ಮಾತಾಗಿದ್ದಾರೆ.
ಯಾರ್ಯಾರಿದ್ದಾರೆ?
ಜೋಷಿ ಮಾತ್ರವಲ್ಲದೇ ಅಮೆರಿಕದ ಡಿಜೆ ಸ್ಟೀವ್ ಆಕಿ, ಕೊರಿಯಾದ ಸಂಗೀತಗಾರ ಚೋಯಿ ಸಂಗ್ ಹ್ಯುನ್, ಐರ್ಲೆಂಡ್ನ ಫೋಟೋಗ್ರಾಫಿಕ್ ಆರ್ಟಿಸ್ಟ್ ಆ್ಯಡಮ್, ಯೂಟ್ಯೂಬರ್ ಟಿಮ್ ಡೋಡ್, ಅಮೆರಿಕದ ಚಿತ್ರ ನಿರ್ದೇಶಕ ಬ್ರೆಂಡನ್ ಹಾಲ್ ಸೇರಿದಂತೆ ವಿವಿಧ ಕಲಾತ್ಮಕ ಕ್ಷೇತ್ರಗಳ 8 ಮಂದಿ ಈ ತಂಡದಲ್ಲಿದ್ದಾರೆ.
ಪಯಣ ಹೇಗೆ?
ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ 2023ರಲ್ಲಿ ಇವರೆಲ್ಲರೂ ಚಂದ್ರನತ್ತ ಹಾರಲಿದ್ದಾರೆ. ಇದು ಒಂದು ವಾರದ ಪಯಣವಾಗಿರಲಿದ್ದು, ರಾಕೆಟ್ ಚಂದ್ರನಲ್ಲಿಗೆ ಹೋಗಿ, ಎಲ್ಲರನ್ನೂ ವಾಪಸ್ ಕರೆತರಲಿದೆ. 2018ರಲ್ಲೇ ಯುಸಾಕು ಅವರು ಈ ರಾಕೆಟ್ನ ಎಲ್ಲ ಸೀಟುಗಳನ್ನೂ ಕಾಯ್ದಿರಿಸಿದ್ದರು. ಜತೆಗೆ, ನನ್ನೊಂದಿಗೆ ಪಯಣಿಸಲಿರುವ 8 ಮಂದಿಯನ್ನು ನಾನೇ ಜಗತ್ತಿನ ಬೇರೆ ಬೇರೆ ಮೂಲೆಗಳಿಂದ ಆಯ್ಕೆ ಮಾಡಲಿದ್ದೇನೆ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Viral Disease: ಕೇರಳದಲ್ಲಿ ಎಂ ಫಾಕ್ಸ್ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.