ಕಲ್ಲೆಸೆಯುವವರ ಮೇಲೆ ದುರ್ಗಂಧ!


Team Udayavani, Jul 8, 2017, 3:30 AM IST

Stone-7-7.jpg

ಲಕ್ನೋ: ಜನವಸತಿ ಪ್ರದೇಶಗಳ ತ್ಯಾಜ್ಯ ನೀರು ಹರಿಯುವ ಒಳಚರಂಡಿ ಕಟ್ಟಿಕೊಂಡು ಮ್ಯಾನ್‌ಹೋಲ್‌ನಿಂದ ತ್ಯಾಜ್ಯ ನೀರು ಹೊರಬರುತ್ತಿದ್ದರೆ ಅದರಿಂದ ಹೊಮ್ಮುವ ಕೆಟ್ಟ ವಾಸನೆ ಅದೆಷ್ಟು ಅಸಹನೀಯ ಎಂಬುದು ಮೂಗು ಮುಚ್ಚಿಕೊಂಡು ಓಡಾಡುವವರಿಗೇ ಗೊತ್ತು. ಅದರಲ್ಲೂ ಮನೆ ಎದಿರೋ, ನಿತ್ಯ ಓಡಾಡುವ ರಸ್ತೆಯಲ್ಲೋ ಹೀಗಾಗಿಬಿಟ್ಟರೆ ಉಸಿರಾಟ ಕೂಡ ಕಷ್ಟವಾಗುತ್ತದೆ. ಆದರೆ ಈ ದುರ್ವಾಸನೆ ವಿಷಯ ಈಗೇಕೆ ಅಂತೀರಾ? ವಿಷಯ ಏನಂದ್ರೆ, ಜಮ್ಮು ಕಾಶ್ಮೀರದಲ್ಲಿ ಕಲ್ಲೆಸೆತಗಾರರನ್ನು ನಿಯಂತ್ರಿಸಲು ಏನೆಲ್ಲ ಹರ ಸಾಹಸ ಮಾಡಿ ಸೋತಿರುವ ಸೇನೆ, ಇನ್ನು ‘ದುರ್ವಾಸನೆಯ ಬಾಂಬ್‌’ (ಸ್ಟಿಂಕ್‌ ಬಾಂಬ್‌) ಗಳನ್ನು ಕೈಗೆತ್ತಿಕೊಳ್ಳಲಿದೆ!

ಕಣಿವೆ ರಾಜ್ಯದಲ್ಲಿ ಶಿಲಾಯುಗದವರಂತೆ ಕಲ್ಲುಗಳನ್ನು ಗುಡ್ಡೆ ಹಾಕಿಕೊಂಡು ರಕ್ಷಣಾ ಸಿಬಂದಿ ಮೇಲೆ ಎಸೆಯುವ ಕಿಡಿಗೇಡಿಗಳನ್ನು ನಿಯಂತ್ರಿಸಲು ಭಾರತ ಸೇನೆ ಮಾಡಿದ ಪ್ರಯತ್ನಗಳು ಒಂದೆರಡಲ್ಲ. ಆರಂಭದಲ್ಲಿ ಕಲ್ಲೆಸೆತಗಾರರ ವಿರುದ್ಧ ಪೆಲೆಟ್‌ ಗನ್‌ ಬಳಸುತ್ತಿದ್ದ ಸೇನೆ, ಸಾಧ್ಯವಾದಷ್ಟು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಪೆಲೆಟ್‌ ಗನ್‌ ಬಳಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೈನಿಕರ ಕೈಗಳಿಂದ ಈ ಗನ್‌ ಕಸಿದುಕೊಂಡು ಫೈಬರ್‌ ಹಾಗೂ ಬೆತ್ತದ ಗುರಾಣಿ ನೀಡಲಾಯಿತು. ಇದರಿಂದ ಕಲ್ಲೆಸೆತಗಾರರ ಹಾವಳಿ ಮತ್ತಷ್ಟು ತೀವ್ರವಾಯಿತು. ಇವರ ಕಾಟದಿಂದ ಬೇಸತ್ತ ಸೇನೆ ಮಾನವ ಗುರಾಣಿಯನ್ನೂ ಬಳಸಿದ್ದು ಈಗ ಇತಿಹಾಸ.

ದೇಶದ ‘ಸುಗಂಧ ರಾಜಧಾನಿ’ ಖ್ಯಾತಿಯ ಉತ್ತರ ಪ್ರದೇಶದ ಕನೌಜ್‌ ನಗರ ಈಗ ದುರ್ಗಂಧದ ಬಾಂಬ್‌ ತಯಾರಿಸಿದೆ! ಜಮ್ಮು ಕಾಶ್ಮೀರದ ಕಲ್ಲೆಸೆತಗಾರರನ್ನು ನಿಯಂತ್ರಿಸಲು ಈ ಬಾಂಬ್‌ಗಳನ್ನು ಬಳಸಲು ಸೇನೆ ಚಿಂತನೆ ನಡೆಸಿದೆ. ಕನೌಜ್‌ನ ಫ್ರಾಗ್ರೆನ್ಸ್‌ ಆ್ಯಂಡ್‌ ಫ್ಲೇವರ್‌ ಡೆವಲಪ್‌ಮೆಂಟ್‌ ಸೆಂಟರ್‌ನ (ಎಫ್ಎಫ್ಡಿಸಿ) ವಿಜ್ಞಾನಿಗಳು ತಯಾರಿಸಿರುವ ‘ದುರ್ಗಂಧದ ಬಾಂಬ್‌’ ಕ್ಯಾಪ್ಸೂಲ್‌ನಷ್ಟೇ ಚಿಕ್ಕದಾಗಿರುತ್ತದೆ. ಈ ಪುಟ್ಟ ಬಾಂಬ್‌ ಅನ್ನು ಪೆಲೆಟ್‌ ಗನ್‌ ಹಾಗೂ ಅಶ್ರುವಾಯು ಪ್ರಯೋಗಿಸಲು ಬಳಸುವ ಗನ್‌ಗಳಲ್ಲಿ ಬುಲೆಟ್‌ ರೀತಿ ಬಳಸಬಹುದು. ಹೀಗೆ ಬಳಸಿದ ಬಾಂಬ್‌ ಉದ್ರಿಕ್ತ ಗುಂಪಿನ ನಡುವೆ ಬಿದ್ದಾಗ ಅದರಿಂದ ಮಾನವನ ಮಲದ ವಾಸನೆ ಹೋಲುವ ದುರ್ಗಂಧ ಹೊರಹೊಮ್ಮುತ್ತದೆ. ಇದನ್ನು ಸಹಿಸಿಕೊಳ್ಳಲಾಗದೆ ಕಲ್ಲೆಸೆತಗಾರರು ದಿಕ್ಕಾಪಾಲಾಗಿ ಓಡುತ್ತಾರೆ ಎಂಬುದು ಲಾಜಿಕ್‌.

ಸಣ್ಣ ಕ್ಯಾಪ್ಸೂಲ್‌ಗ‌ಳಲ್ಲಿ ದುರ್ಗಂಧ ಬೀರುವ ಕೆಮಿಕಲ್‌ಗ‌ಳನ್ನು ತುಂಬಿ ಸ್ಟಿಂಕ್‌ ಬಾಂಬ್‌ಗಳನ್ನು ತಯಾರಿಸಲಾಗುತ್ತದೆ. ಇದನ್ನು ಶೀಘ್ರವೇ ಗ್ವಾಲಿಯರ್‌ನ ರಕ್ಷಣಾ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಡಿಆರ್‌ಡಿಒ ಹಾಗೂ ರಕ್ಷಣಾ ಸಚಿವಾಲಯದ ಅನುಮತಿ ದೊರೆತ ನಂತರವೇ ಸೇನೆ ಈ ಬಾಂಬ್‌ಗಳನ್ನು ಕಲ್ಲೆಸೆತಗಾರರ ವಿರುದ್ಧ ಬಳಸಬಹುದು’ ಎಂದು ಎಫ್ಎಫ್ಡಿಸಿ ಪ್ರಧಾನ ನಿರ್ದೇಶಕ ಶಕ್ತಿ ವಿನಯ್‌ ಶುಕ್ಲಾ  ತಿಳಿಸಿದ್ದಾರೆ.

ಏನಿದು ಸ್ಟಿಂಕ್‌ ಬಾಂಬ್‌ ?
ಸ್ಟಿಂಕ್‌ ಬಾಂಬ್‌ ಎಂಬುದು ಮಾನವನ ಮಲದ ವಾಸನೆಯನ್ನು ಹೋಲುವ ದುರ್ಗಂಧವನ್ನು ಹೊರಬಿಡುವಂಥ ಒಂದು ಸಣ್ಣ ಬಾಂಬ್‌. ಅಮೋನಿಯಂ ಸಲ್ಫೆ „ಡ್‌, ಹೈಡ್ರೋಜನ್‌ ಸಲ್ಫೆ „ಡ್‌ ಒಳಗೊಂಡಂತೆ ಒಟ್ಟು  ಎಂಟು ರಾಸಾಯನಿಕ ಬಳಸಿ ಈ ಬಾಂಬ್‌ ತಯಾರಿಸಲಾಗುತ್ತದೆ. ಬಾಂಬ್‌ ಪ್ರಯೋಗಿಸಿದಾಗ ಸಹಿಸಿಕೊಳ್ಳಲು ಅಸಾಧ್ಯವಾಗಿರುವಂಥ ದುರ್ನಾತ ಅದರಿಂದ ಹೊರಹೊಮ್ಮುತ್ತದೆ. ಆದರೆ ಇದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ. ಪ್ರಸ್ತುತ ಈ ದುರ್ಗಂಧದ ಬಾಂಬ್‌ ಅನ್ನು  ಇಸ್ರೇಲ್‌ ಹಾಗೂ ಅಮೆರಿಕ ಸೇನೆಗಳು ಬಳಸುತ್ತಿವೆ.

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.