![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jul 13, 2021, 4:37 PM IST
ತ್ರಿಶೂರ್ : ಕಳೆದ ವರ್ಷ ಚೀನಾದ ವುಹಾನ್ ನಿಂದ ಹಿಂದಿರುಗಿದ ನಂತರ ಕೋವಿಡ್ ಸೋಂಕಿಗೆ ಒಳಗಾಗಿದ್ದ ದೇಶದ ಮೊದಲ ಕೋವಿಡ್ 19 ಸೋಂಕಿತೆ, ವೈದ್ಯಕೀಯ ವಿದ್ಯಾರ್ಥಿನಿ ಈಗ ಮತ್ತೆ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದ ಮೊದಲ ಕೋವಿಡ್ ಸೋಂಕು ಕಳೆದ ವರ್ಷ ಜನವರಿ 30 ರಂದು ಕೇರಳದ ತ್ರಿಶೂರ್ ನಲ್ಲಿ ಪತ್ತೆಯಾಗಿತ್ತು. ಕೇರಳದ ಮೂಲದ ಚೀನಾದ ವುಹಾನ್ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿನಿ ಮರಳಿ ತವರಿಗೆ ಬಂದಿದ್ದಾಗ ಕಳೆದ ವರ್ಷ ಆಕೆಯಲ್ಲಿ ಮೊಟ್ಟ ಮೊದಲಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು.
ಇದನ್ನೂ ಓದಿ : ಮುಂಬೈ: ನೀರಿನಲ್ಲಿ ಕೊಚ್ಚಿಹೋಗುತೀಡ ಮಹಿಳೆಯನ್ನು ರಕ್ಷಿಸಿ ಜವಾಬ್ದಾರಿ ಮೆರೆದ ಛಾಯಾಗ್ರಾಹಕ
ಆಕೆಯನ್ನು ಈಗ ಮತ್ತೆ ಆರ್ ಟಿ ಪಿ ಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಇದೆ ಎಂದು ದೃಢ ಪಟ್ಟಿದೆ, ಆದಾಗ್ಯೂ, ಆಕೆಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಇದ್ದಿರಲಿಲ್ಲ. ಆದರೇ, ಕಳೆದ ವರ್ಷ ಸೋಂಕಿನ ಲಕ್ಷಣಗಳು ಇದ್ದಿತ್ತು ಎಂದು ತ್ರಿಶೂರ್ ನ ಜಿಲ್ಲಾ ಆರೋಗ್ಯಾಧಿಕಾರಿ ಕೆ ಜೆ ರೀನಾ ಹೇಳಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಏತನ್ಮಧ್ಯೆ, ನಿನ್ನೆ (ಸೋಮವಾರ, ಜುಲೈ 12) ತ್ರಿಶೂರ್ ನಲ್ಲಿ 1,092 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ರಾಜ್ಯದಲ್ಲಿ ಅತಿ ಹೆಚ್ಚು ಸಿಒವಿಐಡಿ ಪ್ರಕರಣಗಳು ದಾಖಲಾಗಿವೆ, ನಂತರ ಕೋಝಿಕೋಡ್ ನಲ್ಲಿ 780, ಕೊಲ್ಲಂನಲ್ಲಿ 774 ಪ್ರಕರಣಗಳು, ಮಲಪ್ಪುರಂನಲ್ಲಿ 722 ಪ್ರಕರಣಗಳು ಮತ್ತು ತಿರುವನಂತಪುರಂನಲ್ಲಿ 676 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ನಿನ್ನೆ ಒಟ್ಟು 7,798 ಕೋವಿಡ್ ಪ್ರಕರಣಗಳಿದ್ದು, ಪ್ರಸ್ತುತ ರಾಜ್ಯದಲ್ಲಿ 1,11,093 ಸಕ್ರಿಯ ಪ್ರಕರಣಗಳು ಕೇರಳದಲ್ಲಿವೆ.
ಇದನ್ನೂ ಓದಿ : ಜುಲೈ 15ಕ್ಕೆ ವಿವೋ ವೈ72 5 ಜಿ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯ
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.