![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 11, 2023, 7:47 AM IST
ನವದೆಹಲಿ: ಬಾಲಿವುಡ್ ಸಿನಿಮಾ “ಸ್ಪೆಷಲ್ 26’ನಿಂದ ಪ್ರಚೋದಿತರಾದ ದರೋಡೆಕೋರರು, ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಜುವೆಲ್ಲರಿ ಅಂಗಡಿಗೆ ನುಗ್ಗಿ 40 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆದೆಹಲಿಯಲ್ಲಿ ನಡೆದಿದೆ.
ಸಂದೀಪ್ ಭಟ್ನಾಗರ್(54), ಪವನ್ ಗುಪ್ತ(47), ಯೋಗೇಶ್ ಕುಮಾರ್(58) ಮತ್ತು ಹಿಮಾಂಶು(35) ಬಂಧಿತರು. ದರೋಡೆಯ ಕಿಂಗ್ಪಿನ್ ಸಂದೀಪ್, “ಸ್ಪೆಷಲ್ 26′ ಸಿನಿಮಾದಿಂದ ಪ್ರಚೋದಿತನಾಗಿ ಅದೇ ರೀತಿ ಯೋಜನೆ ರೂಪಿಸಿದ.
ಏ.17ರಂದು ದೆಹಲಿಯ ಶಾಧಾರ ಪ್ರದೇಶದ ಫಾರ್ಶ್ ಬಜಾರ್ನ ಜುವೆಲ್ಲರಿ ಅಂಗಡಿಗೆ ನುಗ್ಗಿದ ಮಹಿಳೆ ಸೇರಿದಂತೆ 6 ಮಂದಿ ಕದೀಮರು, ತಾವು ಸಿಬಿಐ ಅಧಿಕಾರಿಗಳು ಎಂದು ಹೇಳಿದ್ದಾರೆ. ಅಕ್ರಮ ಚಿನ್ನಾಭರಣ ಮಾರಾಟದಲ್ಲಿ ನೀವು ತೊಡಗಿದ್ದು, ದಾಳಿ ಮಾಡಬಾರದು ಎಂದರೆ 1 ಕೋಟಿ ರೂ. ಲಂಚ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ. ಕೊನೆಗೆ ಜುವೆಲ್ಲರಿ ಮಾಲೀಕರು 40 ಲಕ್ಷ ರೂ. ನಗದು ಹಾಗೂ 500 ಗ್ರಾಂ ಚಿನ್ನಾಭರಣ ನೀಡಿ ಕಳುಹಿಸಿದ್ದಾರೆ.
ಅಲ್ಲದೇ ದರೋಡೆಕೋರರು ಅಂಗಡಿಯ ಸಿಸಿಟಿವಿಗಳ ಡಿವಿಆರ್ಗಳನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಸದ್ಯ ನಾಲ್ವರನ್ನು ಬಂಧಿಸಿದ್ದಾರೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.