2014ರಿಂದ ಅಂತಾರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿ ಯಾರಿಗೂ ಸಂದಿಲ್ಲ !
Team Udayavani, Oct 2, 2018, 5:44 PM IST
ಹೊಸದಿಲ್ಲಿ : 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಂದರೆ ಕಳೆದ ನಾಲ್ಕು ವರ್ಷಗಳಿಂದ ಅಂತಾರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿಯನ್ನು ಸರಕಾರ ಯಾರಿಗೂ ನೀಡಿಲ್ಲ ಎಂಬ ಕಹಿ ಸತ್ಯ ಇದೀಗ ಬಹಿರಂಗವಾಗಿದೆ.
ಗಾಂಧಿ ಶಾಂತಿ ಪ್ರಶಸ್ತಿಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ನೋಡಾಲ್ ಏಜನ್ಸಿಯು ನಾಮಾಂಕನ (ಶಿಫಾರಸು) ಗಳನ್ನು ಸ್ವೀಕರಿಸಿ ಸರಕಾರಕ್ಕೆ ಕಳುಹಿಸಿದೆ; ಆದರೆ ಅವುಗಳಿಗೆ ಈಗಿನ್ನೂ ಅನುಮೋದನೆಯನ್ನು ಕಾಯಲಾಗುತ್ತಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕಾರಿಯೋರ್ವರು ಹೇಳಿದ್ದಾರೆ.
“ನಾಮಾಂಕನಗಳೇನೋ ಇವೆ; ಆದರೆ ಯಾಕಾಗಿ ಅವುಗಳನ್ನು ವಿಳಂಬಿಸಲಾಗಿದೆ ಎಂಬುದನ್ನು ಹೇಳುವುದು ಕಷ್ಟ’ ಎಂದು ಅಧಿಕೃತ ಮೂಲಗಳು ಉದ್ಗರಿಸಿವೆ.
ಅಂತಾರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿಯನ್ನು 1995ರಲ್ಲಿ ರಾಷ್ಟ್ರಪಿತನ 125 ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಸ್ಥಾಪಿಸಲಾಗಿತ್ತು. 2014ರಲ್ಲಿ ಕೊನೆಯ ಬಾರಿಗೆ ಇದನ್ನು ಇಸ್ರೋಗೆ ನೀಡಲಾಗಿತ್ತು. ಆ ಬಳಿಕ ಈ ತನಕ ಯಾರಿಗೂ ಈ ಪ್ರಶಸ್ತಿಯನ್ನು ನೀಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇಡಿಯ ದೇಶ ರಾಷ್ಟ್ರಪತಿ ಮಹಾತ್ಮ ಗಾಂದೀಜಿಯವರ 149ನೇ ಜನ್ಮ ವರ್ಷಾಚರಣೆ ನಡೆಸುತ್ತಿರುವ ನಡುವೆಯೇ ಈ ವಿಷಯ ಬಹಿರಂಗವಾಗಿರುವುದು ಕಾಕತಾಳೀಯವಾಗಿದೆ.
ಗಾಂಧಿ ಶಾಂತಿ ಪ್ರಶಸ್ತಿಯು 1 ಕೋಟಿ ರೂ. ನಗದು ಮತ್ತು ಫಲಕ ಮತ್ತು ಭಿನ್ನವತ್ತಳೆಯನ್ನು ಒಳಗೊಂಡಿದೆ. ನಗದು ಬಹುಮಾನವನ್ನು ವಿಶ್ವದ ಯಾವುದೇ ಕರೆನ್ಸಿಗೂ ಬದಲಾಯಿಸುವುದಕ್ಕೆ ಅವಕಾಶ ಇರುತ್ತದೆ.
1995ರಲ್ಲಿ ಮೊದಲ ಅಂತಾರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿ ಪಡೆದವರು ತಾಂಜಾನಿಯಾದ ಮಾಜಿ ಅಧ್ಯಕ್ಷ ಜೂಲಿಯಸ್ ಕೆ ನೈರೇರೆ. ಮುಂದಿನ ವರ್ಷ ಇದನ್ನು ಸರ್ವೋದಯ ಶ್ರಮದಾನ ಆಂದೋಲನದ ಸ್ಥಾಪಕ ಅಧ್ಯಕ್ಷ ಎ ಟಿ ಅರಿಯರತ್ನೆ ಪಡೆದರು. 1997ರಲ್ಲಿ ಇದನ್ನು ಜರ್ಮನಿಯ ಜೆರಾಡ್ರ ಫಿಶರ್ಗೆ ನೀಡಲಾಯಿತು. 1998 ಮತ್ತು 1999ರಲ್ಲಿ ಇದನ್ನು ರಾಮಕೃಷ್ಣ ಮಿಶನ್ಗೆ ನೀಡಲಾಯಿತು.
2000 ಇಸವಿಯಲ್ಲಿ ಇದನ್ನು ಜಂಟಿಯಾಗಿ ನೆಲ್ಸನ್ ಮಂಡೇಲ ಮತ್ತು ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕಿಗೆ ನೀಡಲಾಯಿತು. 2005ರಲ್ಲಿ ಇದನ್ನು ಆರ್ಚ್ಬಿಷಪ್ ಡೆಸ್ಮಂಡ್ ಟುಟು ಅವರಿಗೆ ನೀಡಲಾಯಿತು. ಅಲ್ಲಿಂದ ಎಂಟು ವರ್ಷಗಳ ಬಳಿಕ 2013ರಲ್ಲಿ ಇದನ್ನು ಚಾಂದ್ನಿ ಪ್ರಸಾದ್ ಭಟ್ (ಚಿಪ್ಕೋ ಆಂದೋಲನದೊಂದಿಗೆ ಗುರುತಿಸಿಕೊಂಡಿದ್ದ ಖ್ಯಾತ ಪರಿಸರವಾದಿ) ಅವರಿಗೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
Punjab; ಆಮ್ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ
Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ
Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ..
Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್ ಸ್ಪೋರ್ಟ್ಸ್ ಮತ್ತೆ ಆರಂಭ
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.