Bangladesh ಹಿಂಸೆಯಲ್ಲಿ ಪಾಕ್ ಕೈವಾಡ ಇದೆಯೇ?: ರಾಗಾ
Team Udayavani, Aug 6, 2024, 11:26 PM IST
ಹೊಸದಿಲ್ಲಿ: ಮಂಗಳವಾರ ದಿಲ್ಲಿಯಲ್ಲಿ ಬಾಂಗ್ಲಾ ಪರಿಸ್ಥಿತಿ ಕುರಿತು ನಡೆದ ಸರ್ವಪಕ್ಷ ಸಭೆಯ ವೇಳೆ, “ಬಾಂಗ್ಲಾ ದೇಶದಲ್ಲಿನ ಹಿಂಸಾಚಾರದ ಹಿಂದೆ ಪಾಕಿಸ್ಥಾನ ಸೇರಿದಂತೆ ವಿದೇಶಿ ರಾಷ್ಟ್ರಗಳ ಕೈವಾಡ ಇದೆಯೇ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, “ವಿದೇಶಿ ಕೈವಾಡದ ಕುರಿತ ಸುದ್ದಿಯನ್ನು ತಳ್ಳಿಹಾಕಲಾಗದು. ಈ ಬಗ್ಗೆ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ. ಒಟ್ಟಾರೆ ಬೆಳವಣಿಗೆಗಳ ಮೇಲೆ ನಾವು ನಿಗಾ ವಹಿಸಿದ್ದೇವೆ’ ಎಂದಿದ್ದಾರೆ.
ಇದಲ್ಲದೇ ಬಾಂಗ್ಲಾದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಸರಕಾರ ಕೈಗೊಂ ಡಿರುವ ಕಾರ್ಯತಂತ್ರದ ಬಗ್ಗೆಯೂ ರಾಹುಲ್ ಪ್ರಶ್ನಿಸಿದ್ದಾರೆ. ಜತೆಗೆ, ಬಾಂಗ್ಲಾದಲ್ಲಿನ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾಕರ ಸುರಕ್ಷತೆ ಬಗ್ಗೆಯೂ ಪ್ರಸ್ತಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್, ವೈಎಸ್ಸಾರ್ ಕಾಂಗ್ರೆಸ್, ಜೆಡಿಯು, ಡಿಎಂಕೆ ಸೇರಿದಂತೆ ವಿಪಕ್ಷಗಳ ಎಲ್ಲ ನಾಯಕರೂ ಬಾಂಗ್ಲಾದೇಶ ವಿಚಾರದಲ್ಲಿ ಕೇಂದ್ರ ಸರಕಾರ ಕೈಗೊಳ್ಳುವ ಕ್ರಮಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train; ಕೆಟ್ಟು ನಿಂತ ‘ವಂದೇ ಭಾರತ್’ ಎಳೆದು ತಂದ ಗೂಡ್ಸ್ ರೈಲಿನ ಎಂಜಿನ್!
Ram Janmabhoomi Trust President ನೃತ್ಯ ಗೋಪಾಲ್ ದಾಸ್ ಆರೋಗ್ಯ ಗಂಭೀರ
HAL ಸಂಸ್ಥೆಯ ನೂತನ ಸಿಎಂಡಿ ಸ್ಥಾನಕ್ಕೆ ಡಾ| ಸುನಿಲ್ ನೇಮಕ
AAP; ಹಣಕಾಸು ಅಕ್ರಮ: ಆಪ್ ಶಾಸಕ ಖಾನ್ಗೆ ನ್ಯಾಯಾಂಗ ಬಂಧನ
Mallikarjun Kharge ಕಿಡಿ: ಮಣಿಪುರ ವಿಚಾರದಲ್ಲಿ ಮೋದಿಯ ಹೀನಾಯ ವೈಫಲ್ಯ ಅಕ್ಷಮ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.