![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 2, 2021, 6:08 AM IST
ಭುವನೇಶ್ವರ: ಕೆಂಪಿರುವೆ ಚಟ್ನಿ! ಕರುನಾಡಿನ ಮಲೆನಾಡಿನ ಕೆಲವು ಭಾಗಗಳಲ್ಲಿ, ಸೋಲಿಗರ ತಪ್ಪಲು ಮುಂತಾದೆಡೆ ಈ ಖಾದ್ಯ ಬಲು ಜನಪ್ರಿಯ. ಕೆಂಪಿರುವೆ ಚಟ್ನಿ ಸೇವಿಸಿದರೆ, ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಹೆಚ್ಚುತ್ತೆ ಎನ್ನುವ ಹೊಸ ಸಂಗತಿ ಈಗ ರಾಷ್ಟ್ರವ್ಯಾಪಿ ಚರ್ಚೆಗೀಡಾಗಿದೆ.
“ಹಲವು ರಾಜ್ಯಗಳ ಬುಡಕಟ್ಟು ಜನಾಂಗದ ಪ್ರಮುಖ ಆಹಾರವಾಗಿರುವ ಕೆಂಪಿರುವೆ ಚಟ್ನಿ ಸೇವನೆ ಕೊರೊನಾಕ್ಕೆ ಪರಿಣಾಮಕಾರಿ ಮದ್ದೇ ಎಂದು ಪರಿಶೀಲಿಸಿ’ ಎಂದು ಒಡಿಶಾ ಹೈಕೋರ್ಟ್, ಆಯುಷ್ ಸಚಿವಾಲಯ ಮತ್ತು ಕೌನ್ಸಿಲ್ ಆಫ್ ಮೆಡಿಕಲ್ ಆ್ಯಂಡ್ ರಿಸರ್ಚ್ಗೆ ನಿರ್ದೇಶಿಸಿದೆ!
ಕೆಂಪಿರುವೆ ಚಟ್ನಿಯಲ್ಲಿನ ವೈರಾಣು ಕೊಲ್ಲುವಿಕೆ ಶಕ್ತಿಯ ಕುರಿತು ಸಮಗ್ರ ಸಂಶೋಧನೆ ನಡೆಸಿ, ವರದಿ ಸಲ್ಲಿಸಲು 3 ತಿಂಗಳ ಗಡುವನ್ನೂ ಕೋರ್ಟ್ ನೀಡಿದೆ.
ಅರ್ಜಿ ಸಲ್ಲಿಕೆ: ಉಸಿರಾಟ ಸಮಸ್ಯೆ, ಜ್ವರ ನಿಯಂತ್ರಿಸುವ ಕೆಂಪಿರುವೆ ಚಟ್ನಿ ರೋಗ ನಿರೋಧಕ ಶಕ್ತಿಯ ಭಂಡಾರ. ಸಾಂಕ್ರಾಮಿಕ ಸಮಯದಲ್ಲಿ ಬಹುತೇಕ ಬುಡಕಟ್ಟು ಮಂದಿಗೆ ಕೊರೊನಾ ಬಾಧಿಸದೇ ಇರುವುದಕ್ಕೂ ಈ ಆಹಾರ ಕ್ರಮವೇ ಪ್ರಮುಖ ಕಾರಣವಿರಬ ಹುದು. ಕೆಂಪಿರುವೆ ಚಟ್ನಿಯಿಂದ ಕೊರೊನಾ ನಿಯಂತ್ರಿಸುವ ಸಾಧ್ಯತೆ ಕುರಿತು ಪರೀಕ್ಷೆ ನಡೆಸಲು ಸೂಚಿಸುವಂತೆ ಕೋರಿ ಇತ್ತೀಚೆಗಷ್ಟೇ ಒಡಿಶಾÏದ ಎಂಜಿನಿಯರ್ ನಯಾಧರ್ ಪಡಿಯಾಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿರುವ ಕೋರ್ಟ್, ಆಯುಷ್ಗೆ ನಿರ್ದೇಶನ ಹೊರಡಿಸಿದೆ.
ಎಲ್ಲೆಲ್ಲಿ ಚಟ್ನಿ ಸೇವನೆ?
ಒಡಿಶಾ, ಕರ್ನಾಟಕ, ಪ. ಬಂಗಾಳ, ಜಾರ್ಖಂಡ್, ಬಿಹಾರ, ಛತ್ತೀಸಗಢ, ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಮಣಿಪುರ, ನಾಗಲ್ಯಾಂಡ್, ತ್ರಿಪುರ ಮತ್ತು ಮೇಘಾಲಯದ ಭಾಗಗಳು.
ಚಟ್ನಿ ಚಮತ್ಕಾರ
ಕೆಂಪಿರುವೆ ಚಟ್ನಿ ಜ್ವರ, ಕಫ, ಸಾಮಾನ್ಯ ಶೀತ, ಉಸಿರಾಟ ಸಮಸ್ಯೆ, ಬೊಜ್ಜು ಮುಂತಾದ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಬುಡಕಟ್ಟು ಆಹಾರ ಪಂಡಿತರ ಅಭಿಪ್ರಾಯ.
ಕೆಂಪಿರುವೆಯಲ್ಲೇನೇನಿದೆ?
ಫಾರ್ಮಿಕ್ ಆ್ಯಸಿಡ್, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12, ಸತು, ಕಬ್ಬಿಣಾಂಶ
ಕೆಂಪಿರುವೆ ಚಟ್ನಿ ಸೇವಿಸಲು ಬಹಳ ಖಾರ ಇರುತ್ತದೆ. ಇದನ್ನು ಸೇವಿಸಿದರೆ, ಕಣ್ಣು- ಕಿವಿಗಳ ದೃಷ್ಟಿದೋಷ ದೂರವಾಗುತ್ತದೆ. ಕಫವನ್ನು ನೀರಾಗಿಸುವ ಕಾರಣ ನಾವು ಶೀತ-ಜ್ವರ ಬಂದಾಗ ಇದನ್ನೇ ಹೆಚ್ಚು ಸೇವಿಸುತ್ತೇವೆ. ಬಾಣಂತಿಗೂ ಇದನ್ನು ಕೊಡುತ್ತೇವೆ.
ಪಾಪಣ್ಣ, ಸೋಲಿಗರ ಮುಖಂಡ, ಬೆಲ್ಲತ, ಬಿಳಿಗಿರಿ ರಂಗನ ಬೆಟ್ಟ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.