ISRO 100ನೇ ರಾಕೆಟ್‌ ಉಡಾವಣೆ ಯಶಸ್ವಿ

ಬೆಂಗಳೂರಲ್ಲಿ ತಯಾರಿಸಿದ ಎನ್‌ವಿಎಸ್‌-02 ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಜಿಎಸ್‌ಎಲ್ ವಿ

Team Udayavani, Jan 29, 2025, 11:40 PM IST

ISRO 100ನೇ ರಾಕೆಟ್‌ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ: ಬುಧವಾರ ಬೆಳಗ್ಗೆ 100ನೇ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.

ನ್ಯಾವಿಗೇಶನ್‌ ಉಪಗ್ರಹ ಎನ್‌ವಿಎಸ್‌-02 ಅನ್ನು ಹೊತ್ತ, 50.9 ಮೀಟರ್‌ ಎತ್ತರದ ಜಿಎಸ್‌ಎಲ್‌ವಿ- ಎಫ್ 15 ರಾಕೆಟ್‌ ಬೆಳಗ್ಗೆ 6.23ಕ್ಕೆ ನಭಕ್ಕೆ ಚಿಮ್ಮಿತು. ನೂತನ ಅಧ್ಯಕ್ಷ ವಿ. ನಾರಾಯಣನ್‌ ಅವರ ನೇತೃತ್ವದಲ್ಲಿ ನಡೆದ ಮೊದಲ ಯಶಸ್ವಿ ಉಡಾವಣೆ ಇದಾಗಿದೆ. 19 ನಿಮಿಷಗಳ ಕಾಲ ಕತ್ತಲೆ ಮತ್ತು ಮೋಡ ಮುಸುಕಿದ ವಾತಾವಾರಣದಲ್ಲಿ ಪ್ರಯಾಣಿಸಿದ ರಾಕೆಟ್‌, ಬಳಿಕ ನಿಗದಿತ ಕಕ್ಷೆಗೆ ಸೇರ್ಪಡೆಗೊಂಡಿತು.

ಉಪಗ್ರಹದ ವೈಶಿಷ್ಟ್ಯ: ಬುಧವಾರ ಉಡಾವಣೆಯಾದ ಉಪಗ್ರಹವು ನಾವಿಕ್‌ ಸರಣಿಯ 2ನೇ ಉಪಗ್ರಹವಾಗಿದೆ. ಎನ್‌ವಿಸ್‌-02 ಉಪಗ್ರಹದ ಪ್ರಮುಖ ಅನ್ವಯಕಗಳಿಂದ ಭೂ ಮಂಡಲ, ವೈಮಾನಿಕ ಮತ್ತು ಸಮುದ್ರ ದಿಕ್ಸೂಚಿ, ಫ್ಲೀಟ್‌ ನಿರ್ವಹಣೆ, ಮೊಬೈಲ್‌ ಸಾಧನಗಳಲ್ಲಿ ಸ್ಥಳ ಆಧಾರಿತ ಸೇವೆಗಳು, ಉಪಗ್ರಹಗಳಿಗೆ ಕಕ್ಷೆಯ ನಿರ್ಣಯ, ಇಂಟರ್ನೆಟ್‌ ಆಫ್ ಥಿಂಗ್ಸ್‌ (ಐಒಟಿ) ಆಧಾರಿತ ಸೇವೆಗೆ ನೆರವು ದೊರೆಯಲಿದೆ. ಎನ್‌ವಿಎಸ್‌-02 ಉಪಗ್ರಹವನ್ನು ಬೆಂಗಳೂರು ಮೂಲದ ಯು.ಆರ್‌.ರಾವ್‌ ಉಪ ಗ್ರಹ ಕೇಂದ್ರದಲ್ಲಿ ತಯಾರಿಸಲಾಗಿದೆ. ಇದು ಒಟ್ಟು 2,250 ಕೆಜಿ ತೂಕ ಹೊಂದಿದ್ದು, ಎಲ್‌1, ಎಲ್‌5 ಮತ್ತು ಎಸ್‌ ಬಾಂಡ್‌ ಹಾಗೂ ಟ್ರೈ- ಬಾಂಡ್‌ ಆ್ಯಂಟೇನಾ ಒಳಗೊಂಡಿದೆ.

ಈವರೆಗೆ 548 ಉಪಗ್ರಹ ಉಡಾವಣೆ
ಬುಧವಾರ ಯಶಸ್ವಿಯಾಗಿ ಉಡಾವಣೆಯಾದ ಉಪಗ್ರಹ ಸೇರಿದಂತೆ ಈವರೆಗೆ ಇಸ್ರೋ 548 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 433 ವಿದೇಶಿ ಉಪಗ್ರಹಳ 23 ಪೇಲೋಡ್‌ ಸೇರಿದಂತೆ ಒಟ್ಟು 120 ಟನ್‌ ಪೇಲೋಡ್‌ ಉಡಾವಣೆ ಮಾಡಿದ್ದೇವೆ ಎಂದು ವಿ.ನಾರಾಯಣನ್‌ ತಿಳಿಸಿದ್ದಾರೆ.

5 ವರ್ಷದಲ್ಲಿ 200ನೇ ಉಡಾವಣೆ: ಇಸ್ರೋ
ಇಸ್ರೋ 100 ಉಡಾವಣೆಗಳಿಗೆ 46 ವರ್ಷಗಳಷ್ಟು ದೀರ್ಘ‌ ಸಮಯವನ್ನು ತೆಗೆದುಕೊಂಡಿರಬಹುದು. ಆದರೆ ಅರ್ಧ ದಶಕದಲ್ಲೇ ಮತ್ತೆ 100 ಉಡಾವಣೆಗಳನ್ನು ಕೈಗೊಳ್ಳುವ ಆತ್ಮವಿಶ್ವಾಸ ಹೊಂದಿದೆ. ಬುಧವಾರ ಇಸ್ರೋದ 100ನೇ ಉಡಾವಣೆ ನೇತೃತ್ವ ವಹಿಸಿದ್ದ ಅಧ್ಯಕ್ಷ ವಿ.ನಾರಾಯಣನ್‌ ಅವರು ಮುಂದಿನ 5 ವರ್ಷಗಳಲ್ಲಿ 200ನೇ ಉಡಾವಣೆ ಕೈಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಉಪಗ್ರಹಗಳ ಬಿಡಿ ಭಾಗಗಳನ್ನು ಸೈಕಲ್‌ ಹಾಗೂ ಚಕ್ಕಡಿ ಮೂಲಕ ಸಾರಿಗೆ ಮಾಡುವ ಕಾಲದಿಂದ ಈಗ ಜಗತ್ತಿನಲ್ಲಿ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿ ಬೆಳೆದಿದೆ.

ಟಾಪ್ ನ್ಯೂಸ್

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

New-CEC

CEC Appoint: ಜ್ಞಾನೇಶ್‌ ಕುಮಾರ್‌ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ 

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ

Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

1-pm

US ಆರ್ಥಿಕ ನೆರವು ದೊಡ್ಡ ಹಗರಣ: ಪ್ರಧಾನಿಯ ಸಲಹೆಗಾರ

1-cec

One Election: 25ರ ಜೆಪಿಸಿ ಸಭೆಗೆ ನಿವೃತ್ತ ನ್ಯಾಯಮೂರ್ತಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

1-pm

US ಆರ್ಥಿಕ ನೆರವು ದೊಡ್ಡ ಹಗರಣ: ಪ್ರಧಾನಿಯ ಸಲಹೆಗಾರ

1-cec

One Election: 25ರ ಜೆಪಿಸಿ ಸಭೆಗೆ ನಿವೃತ್ತ ನ್ಯಾಯಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.