![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 22, 2019, 3:36 PM IST
ಆಂಧ್ರಪ್ರದೇಶ:ಚಂದ್ರಯಾನ 2 ರಾಕೆಟ್ ಅನ್ನು ಜಿಎಸ್ ಎಲ್ ವಿ ಎಂಕೆIII-ಎಂ1 ಯಶಸ್ವಿಯಾಗಿ ನಭಕ್ಕೆ ಹೊತ್ತೊಯ್ದಿದ್ದು, ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
ಚಂದ್ರನ ಮೇಲ್ಮೈಯನ್ನು ಅಧ್ಯಯನ ನಡೆಸುವ ಭಾರತದ ಐತಿಹಾಸಿಕ ಸಾಧನೆಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ವಿಜ್ಞಾನಿಗಳ ತಂಡ ತಮ್ಮ ವೈಯಕ್ತಿಕ ಸಮಯ ಬದಿಗಿಟ್ಟು ಚಂದ್ರಯಾನ 2 ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ವಿಜ್ಞಾನಿಗಳ ಶ್ರಮ ದೇಶ ಹೆಮ್ಮೆ ಪಡುವಂತಾದ್ದು ಎಂದು ಚಂದ್ರಯಾನ 2 ಉಡ್ಡಯನದ ಯಶಸ್ವಿ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಚಂದ್ರಯಾನ 2ರ ಮೊದಲ ಹಂತ ಯಶಸ್ವಿಯಾಗಿದ್ದು, ರಾಕೆಟ್ ಭೂಕಕ್ಷೆಯನ್ನು ಸೇರಿದ್ದು, 48 ದಿನಗಳ ಬಳಿಕ ರಾಕೆಟ್ ಚಂದ್ರನ ಅಂಗಳ ಪ್ರವೇಶಿಸಲಿದೆ ಎಂದು ವಿವರಿಸಿದರು.
ಜಿಎಸ್ ಎಲ್ ವಿ ಎಂಕೆIII-ಎಂ1 ರಾಕೆಟ್ ಮೂರು ಹಂತವನ್ನು ಒಳಗೊಂಡಿದ್ದು, ಒಟ್ಟು 43.3 ಮೀಟರ್ ನಷ್ಟು ಎತ್ತರವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೋಡ ಮುಸುಕಿದ ಆಕಾಶದತ್ತ ಮುಖಮಾಡಿದ್ದ “ಬಾಹುಬಲಿ ರಾಕೆಟ್ 2.43ಕ್ಕೆ ನಭಕ್ಕೆ ಚಿಮ್ಮಿತ್ತು. 3850 ಕೆಜಿ ತೂಕದ ಚಂದ್ರಯಾನ 2 ರಾಕೆಟ್ 16 ನಿಮಿಷಗಳಲ್ಲಿ ವ್ಯೂಮನೌಕೆ ಭೂ ಕಕ್ಷೆ ಸೇರಿತ್ತು ಎಂದು ಶಿವನ್ ಮಾಹಿತಿ ನೀಡಿದರು.
ಆಧುನಿಕ ವೈಜ್ಞಾನಿಕ ಸಂಶೋಧನೆಗೆ ಸಹಕಾರಿಯಾಗಲಿರುವ ಚಂದ್ರಯಾನ 2 ಯಶಸ್ವಿ ಉಡ್ಡಯನದಿಂದ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲಿದೆ. ಬಾಹುಬಲಿ ರಾಕೆಟ್ ಸೆಪ್ಟೆಂಬರ್ 6ರಂದು ಚಂದ್ರನ ಅಂಗಳ ತಲುಪಲಿದೆ ಎಂದು ತಿಳಿಸಿದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.