![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 18, 2018, 6:59 AM IST
ಶ್ರೀನಗರ: ಕಾಶ್ಮೀರದ ಕುಲ್ಗಾಂವ್ನಲ್ಲಿ ಓರ್ವ ಯೋಧನ ಮನೆಗೆ ನುಗ್ಗಿದ ಉಗ್ರರು, ಆತನ ತಲೆಗೆ ಗುಂಡಿಟ್ಟು ಹತ್ಯೆಗೈದ ಘಟನೆ ಸೋಮವಾರ ನಡೆದಿದೆ. ಟೆರಿಟೋರಿಯಲ್ ಆರ್ಮಿಯ ಯೋಧ ಮುಖಾರ್ ಅಹಮದ್ ಮಲಿಕ್ರ ಕುಲ್ಗಾಂವ್ನ ಶುರತ್ನಲ್ಲಿರುವ ಮನೆಗೆ ತೆರಳಿದ ಉಗ್ರರ ಗುಂಪು ಮನಸೋ ಇಚ್ಛೆ ಗುಂಡು ಹಾರಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಮಲಿಕ್ ತಲೆಗೇ ಗುಂಡು ಹಾರಿಸಿದ್ದು, ಅವರನ್ನು ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆಯೇ ಕೊನೆ ಯುಸಿರೆಳೆದಿದ್ದಾರೆ.ಟೆರಿಟೋರಿಯಲ್ ಆರ್ಮಿಯಲ್ಲಿ ಯೋಧರಾಗಿದ್ದ ಮಲಿಕ್ರನ್ನು ಶ್ರೀನಗರದಲ್ಲಿ ನಿಯೋಜಿಸಲಾಗಿತ್ತು.
ಮಗನ ಸಾವಿನ ಬೆನ್ನಲ್ಲೇ: ದುರಂತವೆಂದರೆ, ಯೋಧ ಮಲಿಕ್ ಅವರ 18 ವರ್ಷದ ಪುತ್ರ 2 ದಿನಗಳ ಹಿಂದಷ್ಟೇ (ಸೆ.15) ಅಪಘಾತಕ್ಕೀಡಾಗಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ತುರ್ತು ರಜೆ ಪಡೆದು ಮಲಿಕ್ ಅವರು ಮನೆಗೆ ಬಂದಿದ್ದರು. ಅವರ ಕುಟುಂಬವು ಸೋಮವಾರ ಸಾವಿನ ಅನಂತರ 3ನೇ ದಿನದ ವಿಧಿ ವಿಧಾನಗಳನ್ನು ಪೂರೈಸುವ ಸಿದ್ಧತೆಯಲ್ಲಿ ತೊಡಗಿತ್ತು. ಅಷ್ಟರಲ್ಲಿ, ಏಕಾಏಕಿ ಉಗ್ರರು ಗುಂಪು ಮನೆಯೊಳಗೆ ನುಗ್ಗಿ, ಮಲಿಕ್ರನ್ನು ಹುಡುಕತೊಡಗಿತು. ಮೊದಲ ಮಹಡಿಯಲ್ಲಿ ಮಲಿಕ್ ಸಿಕ್ಕಿದೊಡನೆ, ಸೇನೆಯ ನಿಯೋಜನೆ ಕುರಿತು ಸರಣಿ ಪ್ರಶ್ನೆಗಳನ್ನು ಕೇಳತೊಡಗಿತು. ಆಗ ಯೋಧ ಮಲಿಕ್, “ಬೇಕಿದ್ದರೆ ನನ್ನನ್ನು ಶೂಟ್ ಮಾಡಿ ಕೊಂದು ಬಿಡಿ. ಆದರೆ, ಸೇನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ’ ಎಂದರು. ಕೂಡಲೇ ಉಗ್ರರು ತೀರಾ ಹತ್ತಿರದಿಂದಲೇ ಅವರ ತಲೆಗೆ ಗುಂಡಿಟ್ಟು ಹತ್ಯೆಗೈದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.