![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 13, 2020, 10:04 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಮುಂಬಯಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮರಾಠಾ ಸಾಮ್ರಾಟ, ಹಿಂದೂ ಹೃದಯ ಸಾಮ್ರಾಟ ಎಂದೆಲ್ಲಾ ಕರೆಯಿಸಿಕೊಳ್ಳುವ ಛತ್ರಪತಿ ಶಿವಾಜಿಗೆ ಹೋಲಿಸಿ ಬಿಜೆಪಿ ನಾಯಕರೊಬ್ಬರು ಬರೆದಿರುವ ಪುಸ್ತಕವೊಂದು ಮಹಾರಾಷ್ಟ್ರದಲ್ಲಿ ಇದೀಗ ಹೊಸದೊಂದು ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ನಾಯಕ ಜೈ ಭಗವಾನ್ ಗೋಯಲ್ ಬರೆದಿರುವ ‘ಟುಡೇಸ್ ಶಿವಾಜಿ ನರೇಂದ್ರ ಮೋದಿ’ ಎಂಬ ಹೆಸರಿನ ಪುಸ್ತಕ ಇಂದು ನವದೆಹಲಿಯಲ್ಲಿ ಬಿಡುಗಡೆಗೊಂಡಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಈ ಪುಸ್ತಕದ ಕುರಿತಾಗಿ ಅಪಸ್ವರ ಮತ್ತು ಪ್ರತಿಭಟನೆಗಳು ಕಾಣಿಸಿಕೊಂಡಿವೆ.
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ‘ವಿಕಾಸ್ ಅಘಾಡಿ’ ಮೈತ್ರಿಕೂಟದ ಪಕ್ಷಗಳಾಗಿರುವ ಶಿವಸೇನೆ, ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಈ ಪುಸ್ತಕದ ಕುರಿತಾಗಿ ತಗಾದೆ ತೆಗೆದಿವೆ. ಇದರ ಬೆನ್ನಲ್ಲೇ ಪುಣೆಯಲ್ಲಿ ಎನ್.ಸಿ.ಪಿ. ಮತ್ತು ಸಂಭಾಜಿ ಬ್ರಿಗೇಡ್ ಕಾರ್ಯಕರ್ತರು ಈ ಪುಸ್ತಕದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಇದು ಮರಾಠ ಸಾಮ್ರಾಜ್ಯ ಮತ್ತು ಅದರ ಸಾಮ್ರಾಟನ ಇತಿಹಾಸವನ್ನು ಅಳಿಸಿ ಹಾಕುವ ಹುನ್ನಾರ ಎಂಬುದಾಗಿ ಎನ್.ಸಿ.ಪಿ. ಈ ಪುಸ್ತಕದ ಕುರಿತಾಗಿ ಕಿಡಿಯಾಗಿದೆ. ಶಿವಸೇನಾ ನಾಯಕ ಸಂಜಯ್ ರಾವತ್ ಅವರೂ ಸಹ ಈ ಪುಸ್ತಕ ಮತ್ತು ಇದರ ಲೇಖಕರ ಕುರಿತಾಗಿ ಕ್ರೋಧ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿರುವ ಮಹಾರಾಷ್ಟ್ರ ಸದನದ ಮೇಲೆ ದಾಳಿ ನಡೆಸಿದ ಮತ್ತು ಶಿವಾಜಿ ಮಹಾರಾಜರ ಮಹಾರಾಷ್ಟ್ರ ಹಾಗೂ ಮರಾಠಿ ಜನರನ್ನು ನಿಂದಿಸಿದ ವ್ಯಕ್ತಿಯೃ ಈ ಪುಸ್ತಕದ ಲೇಖಕರಾಗಿರುವುದು ದುರಂತ ಎಂದು ರಾವತ್ ಅವರು ಟೀಕಿಸಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.