
ಜೆಟ್ ಏರ್ ವೇಸ್ ಗೆ ಸಾಲದ ಕುಣಿಕೆ: ಅಸಲು, ಬಡ್ಡಿ ಪಾವತಿ ವಿಳಂಬ
Team Udayavani, Jan 2, 2019, 5:27 AM IST

ಹೊಸದಿಲ್ಲಿ : ಅಪಾರ ಪ್ರಮಾಣದ ಸಾಲದ ಹೊರೆಯಿಂದ ನಲುಗುತ್ತಿರುವ 25 ವರ್ಷ ಹಳೆಯ ಜೆಟ್ ಏರ್ ವೇಸ್, ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಭಾರತೀಯ ಬ್ಯಾಂಕುಗಳ ಕೂಟಕ್ಕೆ ಸಾಲ ಮರುಪಾವತಿ ವಿಳಂಬಿಸಿರುವುದಾಗಿ ವರದಿಯಾಗಿದೆ.
ಪರ್ಯಾಪ್ತ ನಗದು ಕೊರತೆಯಿಂದಾಗಿ ಜೆಟ್ ಏರ್ ವೇಸ್ ತನ್ನ ಬ್ಯಾಂಕ್ ಸಾಲಗಳ ಅಸಲು ಮತ್ತು ಬಡ್ಡಿ ಕಂತಿನ ಪಾವತಿಯನ್ನು ವಿಳಂಬಿಸಿದ್ದು ಪ್ರಕೃತ ಅದು ಬ್ಯಾಂಕ್ ಕೂಟದೊಂದಿಗೆ ಮಾತುಕತೆ ನಡೆಸುತ್ತಿದೆ. 2018ರ ಡಿ.31ರ ಪಾವತಿ ಗಡುವನ್ನು ಕಾಯ್ದುಕೊಳ್ಳಲು ಜೆಟ್ ಏರ್ ವೇಸ್ ವಿಫಲವಾಗಿದೆ ಎಂದು ಹೇಳಿಕೆ ತಿಳಿಸಿದೆ.
ಪರ್ಯಾಪ್ತ ನಗದು ಕೊರತೆಯ ಪರಿಣಾಮವಾಗಿ ಜೆಟ್ ಏರ್ ವೇಸ್ ತನ್ನ ಪೈಲಟ್ ಗಳು ಮತ್ತು ಸಿಬಂದಿಗಳಿಗೆ ತಿಂಗಳ ಸಂಬಳವನ್ನು ಕೂಡ ಸರಿಯಾಗಿ ಪಾವತಿಸುತ್ತಿಲ್ಲ. ದುರ್ಬಲ ರೂಪಾಯಿ, ಕಚ್ಚಾ ತೈಲ ಬೆಲೆ, ವಿಮಾನ ಯಾನ ಸಂಸ್ಥೆಗಳ ನಡುವಿನ ದರ ಪೈಪೋಟಿ ಇವೇ ಮೊದಲಾದ ಹಲವಾರು ಕಾರಣಗಳಿಗೆ ಜೆಟ್ ಏರ್ ವೇಸ್ ನಷ್ಟ ಹಾಗೂ ಸಾಲದ ಒತ್ತಡಕ್ಕೆ ಗುರಿಯಾಗಿದೆ.
ಜೆಟ್ ಮತ್ತು ಅದರ ಎರಡನೇ ಅತೀ ದೊಡ್ಡ ಶೇರು ದಾರ ಸಂಸ್ಥೆಯಾಗಿರುವ ಎತಿಹಾದ್ ಏರ್ ವೇಸ್ ಪ್ರಕೃತ ಬ್ಯಾಂಕ್ ಕೂಟದೊಂದಿಗೆ ಮಾತುಕತೆ ನಡೆಸುತ್ತಿದ್ದು ಬಿಕ್ಕಟ್ಟಿನಿಂದ ಪಾರುಗೊಳಿಸುವ ಡೀಲ್ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಡೀಲ್ ನ ಭಾಗವಾಗಿ ಅಬುದಾಬಿ ಮೂಲದ ಏರ್ಲೈನ್ ಸಂಸ್ಥೆ ತನ್ನ ಶೇರು ಪಾಲುದಾರಿಕೆಯನ್ನು ಶೇ.24ಕ್ಕೆ ಏರಿಸುವ ಪ್ರಸ್ತಾವವೂ ಚರ್ಚೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.