Srinagar: ಕಾಶ್ಮೀರದ ಮೂಲಸೌಕರ್ಯ ಹಾನಿಗೆ ಉಗ್ರ ದಾಳಿ: ಗುಪ್ತಚರ ಇಲಾಖೆ
ಕಣಿವೆಯಲ್ಲಿ ಸೇನಾ ಬಲವನ್ನು ಕುಂಠಿತಗೊಳಿಸಲೆಂದೇ ಈ ಪ್ರಯತ್ನ
Team Udayavani, Oct 22, 2024, 12:39 AM IST
ಶ್ರೀನಗರ: ಜಮ್ಮು-ಕಾಶ್ಮೀರದ ಗಾಂದರ್ಬಲ್ನಲ್ಲಿ 7 ಮಂದಿಯನ್ನು ಹತ್ಯೆ ಮಾಡಿದ ಉಗ್ರರ ಕೃತ್ಯದ ಹಿಂದೆ ರಾಜ್ಯದಲ್ಲಿ ನಡೆಯುತ್ತಿರುವ ಮೂಲ ಸೌಕರ್ಯ ಅಭಿವೃದ್ಧಿ ತಡೆಯುವ ಉದ್ದೇಶವಿದೆ.
ಹೀಗಾಗಿಯೇ ಮತ್ತೆ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾರಂಭಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಮೂಲಗಳು ತಿಳಿಸಿವೆ.
ಕಣಿವೆಯಲ್ಲಿ ಉಂಟಾಗುತ್ತಿರುವ ಅಭಿವೃದ್ಧಿ ಸೈನ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ, ಸೇನೆ ಮತ್ತಷ್ಟು ಬಲಿಷ್ಠ ಗೊಳ್ಳುತ್ತದೆ. ಇದನ್ನು ತಡೆಯಲು ಉಗ್ರರು ಈ ದಾಳಿ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಾಯಿಸಲು ಉದ್ದೇಶಿಸಿದ್ದಾರೆ ಎಂದೂ ತಿಳಿಸಿವೆ.
ದಾಳಿಯ ಹೊಣೆ ಹೊತ್ತುಕೊಂಡ ಲಷ್ಕರ್
ಗಾಂದರ್ಬಲ್ನಲ್ಲಿ ರವಿವಾರ ನಡೆದ ದಾಳಿಯ ಹೊಣೆಯನ್ನು ಪಾಕಿಸ್ಥಾನ ಮೂಲದ ಲಷ್ಕರ್ ಎ ತಯ್ಯಬಾ ಸಂಘಟನೆಯ ವಿಭಾಗವಾದ ರೆಸಿಸ್ಟಂಟ್ ಫ್ರಂಟ್ ಹೊತ್ತುಕೊಂಡಿದೆ. ಶ್ರೀನಗರದಲ್ಲಿ ವಾಸವಾಗಿರುವ ಟಿಆರ್ಎಫ್ ನ ಮುಖ್ಯಸ್ಥ ಶೇಖ್ ಸಜ್ಜಿತ್ ಗುಲ್ ಇದರ ಮಾಸ್ಟರ್ ಮೈಂಡ್ ಎಂದು ಸೇನೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ
Vaccination Campaign: 6ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಆರಂಭ: ಜಿಪಂ ಸಿಇಒ
Police Martyrs Day: ದೇಶದ ಅಖಂಡತೆಗೆ ಹುತಾತ್ಮರ ತ್ಯಾಗ ಸಹಾಯಕ: ನ್ಯಾಯಾಧೀಶ
Mangaluru: ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ: ಕುಲಪತಿ ಪ್ರೊ. ಪಿ.ಎಲ್.ಧರ್ಮ
Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.