Aadhaar: ನನ್ನ ಭೇಟಿಗೆ ಬರುವವರು ಆಧಾರ್ ತನ್ನಿ… ಕಂಗನಾ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
Team Udayavani, Jul 12, 2024, 12:16 PM IST
ಹಿಮಾಚಲ ಪ್ರದೇಶ: ತನ್ನನ್ನು ಭೇಟಿಯಾಗಲು ಬರುವವರು ಖಡ್ಡಾಯವಾಗಿ ಆಧಾರ್ ಕಾರ್ಡ್ ತಮ್ಮೊಂದಿಗೆ ತರಬೇಕೆಂದು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಹೇಳಿಕೆ ನೀಡಿದ್ದಾರೆ.
ಈ ಕುರಿತು ಸ್ವತಃ ಕಂಗನಾ ಅವರೇ ಪತ್ರಕರ್ತರೊಂದಿಗೆ ಹೇಳಿಕೆ ನೀಡಿದ್ದು ನನ್ನನ್ನು ಭೇಟಿಯಾಗಲು ಬರುವವರು ತಪ್ಪದೆ ಆಧಾರ್ ಕಾರ್ಡ್ ತರಬೇಕು ಜೊತೆಗೆ ತಾವು ಭೇಟಿ ನೀಡುವ ಉದ್ದೇಶದ ಕುರಿತು ಒಂದು ಪೇಪರ್ ನಲ್ಲಿ ಬರೆದು ತನ್ನಿ ಹೇಳಿದ್ದಾರೆ ಇದರಿಂದ ತನ್ನನ್ನು ಭೇಟಿಯಾಗುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕ್ಷೇತ್ರದ ಸಮಸ್ಯೆ ಅಥವಾ ಇನ್ನಾವುದೇ ವಿಚಾರದ ಬಗ್ಗೆ ಮಾತನಾಡಲು ಸದಾ ನನ್ನ ಕಚೇರಿ ತೆರೆದಿರುತ್ತದೆ ನಮ್ಮ ರಾಜ್ಯದವರೇ ಆಗಿರಲಿ ಅಥವಾ ಹೊರಗಿನ ರಾಜ್ಯದವರು ಆಗಿರಲಿ ಯಾರೇ ಆದರೂ ಬರುವವರು ಆಯಾ ಪ್ರದೇಶದ ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯ ಜೊತೆಗೆ ತಾವು ಭೇಟಿ ನೀಡುವ ಉದ್ದೇಶ ಏನು ಎಂಬುದನ್ನು ಪತ್ರದಲ್ಲಿ ನಮೂದಿಸಿದರೆ ಉತ್ತಮ ಎಂದಿದ್ದಾರೆ.
ಇತ್ತ ಕಂಗನಾ ಹೇಳಿಕೆ ನೀಡುತಿದ್ದಂತೆ ಮಂಡಿ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದು ಜನಪ್ರತಿನಿಧಿ ಆದ ಬಳಿಕ ಎಲ್ಲ ಜನರನ್ನು ಭೇಟಿ ಮಾಡಬೇಕು ಇದು ಜನಪ್ರತಿನಿಧಿಯ ಕರ್ತವ್ಯ ಅದು ಬಿಟ್ಟು ಭೇಟಿ ಮಾಡಲು ಬರುವವರು ಆಧಾರ್ ಕಾರ್ಡ್ ಹಿಡಿದುಕೊಂಡು ಬರಬೇಕು ಎಂದರೆ ಇದಕ್ಕೆ ಅರ್ಥವಿಲ್ಲ ಎಂದು ಹೇಳಿದ ಅವರು ಸಾರ್ವಜನಿಕರು ನನ್ನನ್ನು ಭೇಟಿಯಾಗಲು ಬರುವುದಾದರೆ ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲ ಎಂದು ಕಂಗನಾ ಅವರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: SpiceJet ಮಹಿಳಾ ಸಿಬ್ಬಂದಿಯಿಂದ ಸಿಐಎಸ್ಎಫ್ ಅಧಿಕಾರಿಗೆ ಕಪಾಳಮೋಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.