![2](https://www.udayavani.com/wp-content/uploads/2024/06/2-21-415x249.jpg)
Kannur ಬಾಂಬ್ ಸ್ಫೋಟ ಹೆಚ್ಚಳ: ಅಸೆಂಬ್ಲಿಯಲ್ಲಿ ಒಪ್ಪಿಕೊಂಡ ಕೇರಳ ಮುಖ್ಯಮಂತ್ರಿ
Team Udayavani, Jun 19, 2024, 11:14 PM IST
![Kannur ಬಾಂಬ್ ಸ್ಫೋಟ ಹೆಚ್ಚಳ: ಅಸೆಂಬ್ಲಿಯಲ್ಲಿ ಒಪ್ಪಿಕೊಂಡ ಕೇರಳ ಮುಖ್ಯಮಂತ್ರಿ](https://www.udayavani.com/wp-content/uploads/2024/06/pinarayi-vijayan-1-620x361.jpg)
ತಿರುವನಂತಪುರ: ಕಣ್ಣೂರಿನಲ್ಲಿ ಪದೇ ಪದೆ ಬಾಂಬ್ ಸ್ಫೋಟದ ಘಟನೆಗಳು ನಡೆಯುತ್ತಿರುವ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಅವರು ಸ್ಫೋಟ ಪ್ರಕರಣಗಳಿಗೆ ವಿಪಕ್ಷಗಳು ಅನಗತ್ಯವಾಗಿ ರಾಜಕೀಯ ಬಣ್ಣ ನೀಡುತ್ತಿವೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು.
ಕಣ್ಣೂರಿನಲ್ಲಿ ಮಂಗಳವಾರ ಬಾಂಬ್ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ವಿಧಾನಸಭಾ ಕಲಾಪವನ್ನು ಮುಂದೂಡಿ ಸ್ಫೋಟ ಕುರಿತು ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒತ್ತಾಯಿಸಿತ್ತು. ರಾಜ್ಯದಲ್ಲಿ ಸ್ಫೋಟಕಗಳ ತಯಾರಿಕೆಯನ್ನು ಆಡಳಿತಾರೂಢ ಸಿಪಿಎಂ ಪೋಷಿಸುತ್ತಿದೆ ಎಂದೂ ಆರೋಪಿಸಿದೆ.
ಟಾಪ್ ನ್ಯೂಸ್
![2](https://www.udayavani.com/wp-content/uploads/2024/06/2-21-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.