Kanwar Yatra; ನಟ ಸೋನು ಸೂದ್ ಗೆ ‘ಹಲಾಲ್’ ವಿಚಾರ ಪ್ರಸ್ತಾಪಿಸಿ ಕಂಗನಾ ತಿರುಗೇಟು
ಬಾಲಿವುಡ್ ನಿಂದ ಇನ್ನೊಂದು ರಾಮಾಯಣ ಎಂದ ಸಂಸದೆ!!
Team Udayavani, Jul 20, 2024, 7:41 PM IST
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಕನ್ವರ್ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೊಟೇಲ್ಗಳು ಮುಂಭಾಗದಲ್ಲಿ ಅವುಗಳ ಮಾಲಕರ ಹೆಸರಿನ ಫಲಕ ಹಾಕಬೇಕೆಂದು ಉತ್ತರ ಪ್ರದೇಶದ ಪೊಲೀಸರು ಆದೇಶಿಸಿದ ವಿಚಾರದ ಕುರಿತು ಪರ-ವಿರೋಧದ ಚರ್ಚೆ ತೀವ್ರವಾಗಿದ್ದು, ನಟ ಸೋನು ಸೂದ್ ಅವರು ಮಾಡಿರುವ ಪೋಸ್ಟ್ ವೊಂದಕ್ಕೆ ನಟಿ, ಸಂಸದೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.
ಸೋನು ಸೂದ್ ಅವರು ಎಕ್ಸ್ ಪೋಸ್ಟ್ ನಲ್ಲಿ ಅಂಗಡಿಗಳ ನಾಮಫಲಕಗಳಲ್ಲಿ ಕೇವಲ “ಮಾನವೀಯತೆ”(humanity)ಯನ್ನು ಪ್ರದರ್ಶಿಸಬೇಕು ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಕಂಗನಾ ರಣಾವತ್ ನಟನ ನಿಲುವನ್ನು ಪ್ರಶ್ನಿಸಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ. “ಒಪ್ಪುತ್ತೇನೆ, ಹಲಾಲ್ ಅನ್ನು ಕೂಡ “ಮಾನವೀಯತೆ” ಎಂದು ಬದಲಿಸಬೇಕು” ಎಂದು ಎಕ್ಸ್ ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.
ಸಂಸದೆ ಮತ್ತೊಂದು ಪೋಸ್ಟ್ ನಲ್ಲಿ ”ದೇವರು ಮತ್ತು ಧರ್ಮದ ಬಗ್ಗೆ ತನ್ನದೇ ಆದ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ಸೋನು ಜಿ ತನ್ನದೇ ಆದ ರಾಮಾಯಣವನ್ನು ನಿರ್ದೇಶಿಸುತ್ತಾರೆ ಎಂದು ನಿಮಗೆ ತಿಳಿದಿದೆ. ವಾಹ್ ಕ್ಯಾ ಬಾತ್ ಹೇ, ಬಾಲಿವುಡ್ ಸೆ ಏಕ್ ಔರ್ ರಾಮಾಯಣ” ಎಂದು ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.
Agree, Halal should be replaced with “ HUMANITY” https://t.co/EqbGml2Yew
— Kangana Ranaut (@KanganaTeam) July 19, 2024
ಯಾತ್ರಿಕರಿಗೆ ಗೊಂದಲವಾಗದಂತೆ, ಭವಿಷ್ಯದಲ್ಲಿ ಯಾವುದೇ ಆರೋಪ ಕೇಳಿ ಬರದಂತೆ ತಡೆಯಲು ಹೊಟೇಲ್, ಢಾಬಾ, ರಸ್ತೆಬದಿಯ ತಳ್ಳುಗಾಡಿಗಳು ತಮ್ಮ ಮಾಲಕರ ಹೆಸರನ್ನು ಸ್ಪಷ್ಟವಾಗಿ ಕಾಣುವಂತೆ ಅಳವಡಿಸಿ ಎಂದು ಪೊಲೀಸರು ಆದೇಶಿಸಿದ್ದರು. ಈ ವಿಚಾರ ಕಾಂಗ್ರೆಸ್, ಸಮಾಜವಾದಿ ಪಕ್ಷ, ಮುಸ್ಲಿಂ ಸಂಘಟನೆಗಳು ಸೇರಿ ಹಲವರು ತೀವ್ರವಾಗಿ ಖಂಡಿಸಿದ್ದರು. ಚಿತ್ರಕಥೆಗಾರ ಜಾವೇದ್ ಅಖ್ತರ್ ಕೂಡ ಘಟನೆಯ ಕುರಿತು ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.