Karnataka;ಕಳೆದ 5 ವರ್ಷದಲ್ಲಿ 56ಆನೆ ಸಾವು: ಉತ್ತರ ನೀಡಿದ ಕೇಂದ್ರ
Team Udayavani, Jul 30, 2024, 12:06 AM IST
ಹೊಸದಿಲ್ಲಿ: ದೇಶದಲ್ಲಿ 5 ವರ್ಷಗಳ ಅವಧಿಯಲ್ಲಿ 528 ಆನೆಗಳು ಅಸಹಜ ಕಾರಣದಿಂದ ಅಸುನೀಗಿವೆ. ಅದಕ್ಕೆ ಹೆಚ್ಚಿನ ಕಾರಣಗಳು ವಿದ್ಯುತ್ ಶಾಕ್ ಕಾರಣ ಎಂದು ಕೇಂದ್ರ ಸರಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಪೈಕಿ ಕರ್ನಾಟಕದಲ್ಲಿಯೇ 52 ಆನೆಗಳು ಅಸುನೀಗಿವೆ. ಜತೆಗೆ ಕರ್ನಾಟಕದಲ್ಲಿ ಆನೆ ದಾಳಿಯಿಂದಾಗಿ 160 ಮಂದಿ ಮಾನವರು ಅಸುನೀಗಿದ್ದಾರೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಹಾಯಕ ಸಚಿವ ಕೀರ್ತಿವರ್ಧನ್ ಸಿಂಗ್ ಹೇಳಿದ್ದಾರೆ. ಒಡಿಶಾದಲ್ಲಿ 71, ಅಸ್ಸಾಂನಲ್ಲಿ 55, ತಮಿಳುನಾಡಲ್ಲಿ 49, ಛತ್ತೀಸ್ಘಡದಲ್ಲಿ 32, ಜಾರ್ಖಂಡ್ನಲ್ಲಿ 30, ಕೇರಳದಲ್ಲಿ 29 ಆನೆಗಳು ಅಸುನೀಗಿವೆ ಎಂದಿದ್ದಾರೆ. 5 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಆನೆ ದಾಳಿಯಿಂದ 2853 ಮಂದಿ ಅಸುನೀಗಿದ್ದಾರೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.