ಉಪ ಚುನಾವಣೆಗೆ 30 ಕೋಟಿ ರೂ. ವೆಚ್ಚ! ; ಚುನಾವಣೆಗಳ ಖರ್ಚು-ವೆಚ್ಚ ಜನರ ಜೇಬಿಗೆ ಹೊರೆ!


Team Udayavani, Nov 26, 2019, 6:15 AM IST

Election-25-11

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ರಾಜಕೀಯ ಪಕ್ಷಗಳ ಹಣದ ‘ಹರಿದಾಟ’ದ ವಿಚಾರದಲ್ಲಿ ಕರ್ನಾಟಕದ ಚುನಾವಣೆಗಳು ಅತ್ಯಂತ ದುಬಾರಿ ಎಂಬ ಮಾತಿದೆ. ಅದೇ ರೀತಿ ಚುನಾವಣೆ ನಡೆಸಬೇಕಾದರೆ ಚುನಾವಣ ಆಯೋಗಕ್ಕೂ ಕೋಟಿಗಟ್ಟಲೆ ರೂ. ಬೇಕು. ಈಗ ನಡೆಯುತ್ತಿರುವ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಅಂದಾಜು 30 ಕೋಟಿ ರೂ. ವೆಚ್ಚ ಬರಲಿದೆ. ಚುನಾವಣ ಆಯೋಗ ವೆಚ್ಚ ಮಾಡುವ ಈ ಹಣ ಸಾರ್ವಜನಿಕರ ತೆರಿಗೆ ಹಣವೇ ಆಗಿದೆ.

2018ರ ವಿಧಾನಸಭೆ ಚುನಾವಣೆ ವೇಳೆ ಎಲ್ಲ 224 ಕ್ಷೇತ್ರಗಳಿಗೆ ಚುನಾವಣ ಆಯೋಗ 393 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿತ್ತು. ಅದರಂತೆ ಪ್ರತಿ ಕ್ಷೇತ್ರಕ್ಕೆ ಅಂದಾಜು 1.75 ಕೋಟಿ ರೂ. ವೆಚ್ಚ ಆಗಿತ್ತು. ಚುನಾವಣೆ ನಡೆದು ಇನ್ನೇನು ಒಂದೂವರೆ ವರ್ಷವಷ್ಟೇ ಆಗಿದ್ದರಿಂದ ಪ್ರತಿ ಕ್ಷೇತ್ರದ ಚುನಾವಣ ಖರ್ಚು ಹೆಚ್ಚು-ಕಡಿಮೆ ಅಷ್ಟೇ ಆಗಲಿದೆ. ಹೀಗಾಗಿ 15 ಕ್ಷೇತ್ರಗಳಿಗೆ ತಲಾ ಅಂದಾಜು 1.75 ಕೋಟಿ ರೂ. ಗಳಂತೆ ಸರಾಸರಿ 26ರಿಂದ 30 ಕೋಟಿ ರೂ. ಖರ್ಚು ಬರಲಿದೆ ಅನ್ನುವುದು ಚುನಾವಣ ಆಯೋಗದ ಲೆಕ್ಕಾಚಾರ.

ಒಟ್ಟು ಕ್ಷೇತ್ರಗಳಿಗೆ ತಗಲಿದ ವೆಚ್ಚವನ್ನು ಒಟ್ಟು ಮತಗಟ್ಟೆಗಳು ಮತ್ತು ಮತದಾರರ ಸಂಖ್ಯೆಯಿಂದ ಭಾಗಿಸಿ ಒಂದು ಮತಗಟ್ಟೆಗೆ, ಒಬ್ಬ ಮತದಾರನಿಗೆ ಎಷ್ಟು ವೆಚ್ಚ ಆಗಲಿದೆ ಎಂದು ಚುನಾವಣ ಆಯೋಗ ಅಂದಾಜಿಸುತ್ತದೆ. ಅದರಂತೆ 15 ಕ್ಷೇತ್ರಗಳಿಗೆ 26ರಿಂದ 30 ಕೋಟಿ ರೂ. ಒಟ್ಟು ವೆಚ್ಚ ಎಂದು ಲೆಕ್ಕ ಅಂದಾಜು ಮಾಡಿದರೆ ಈ 15 ಕ್ಷೇತ್ರಗಳಲ್ಲಿ 37.77 ಲಕ್ಷ ಮತದಾರರಿದ್ದು, 4,185 ಮತ ಗಟ್ಟೆಗಳಿವೆ. ಈ ರೀತಿ ಒಬ್ಬ ಮತದಾರನ ಮೇಲೆ 70ರಿಂದ 90 ರೂ. ಹಾಗೂ ಒಂದು ಮತಗಟ್ಟೆಗೆ 60ರಿಂದ 64 ಸಾವಿರ ರೂ. ಖರ್ಚು ಬರಬಹುದು ಅನ್ನುವುದು ಲೆಕ್ಕಾಚಾರ.

ಆದರೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಚುನಾವಣ ಖರ್ಚು ವ್ಯತ್ಯಾಸವಾಗಿರುತ್ತದೆ. ಸಾಮಾನ್ಯ ಮತ ಗಟ್ಟೆಗಳು, ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆ, ಗಡಿಭಾಗ, ಗುಡ್ಡಗಾಡು ಪ್ರದೇಶ,
ಮತಗಟ್ಟೆಗಳ ಒಟ್ಟು ಸಂಖ್ಯೆ, ಆಡಳಿತಾತ್ಮಕ ವಿಷಯಗಳು, ಕಾನೂನು – ಸುವ್ಯವಸ್ಥೆ ಇತ್ಯಾದಿಗಳ ಮೇಲೆ ಚುನಾವಣ ಖರ್ಚು ಅಂದಾಜಿಸಲಾಗುತ್ತದೆ.

ಅಭ್ಯರ್ಥಿಗೆ 28 ಲಕ್ಷ ರೂ. ಮಿತಿ
ವಿಧಾನಸಭೆ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಮಾಡುವ ವೆಚ್ಚಕ್ಕೆ ಮಿತಿ ಇರುವುದಿಲ್ಲ. ಆದರೆ ಅಭ್ಯರ್ಥಿಗಳಿಗೆ ಮಿತಿ ಹೇರಲಾಗಿರುತ್ತದೆ. ಅದರಂತೆ ಕರ್ನಾಟಕದ ವಿಧಾನಸಭೆ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ 28 ಲಕ್ಷ ರೂ. ವೆಚ್ಚ ಮಾಡಬಹುದು.

ಆದರೆ ಚುನಾವಣೆಗಳಿಗೆ ಹಣ ಬಲವೇ ಮುಖ್ಯ ಆಧಾರ ಆಗಿರುವ ಈಗಿನ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣ ವೆಚ್ಚ ‘ಕಾಗೆ ಲೆಕ್ಕ-ಗುಬ್ಬಿ ಲೆಕ್ಕ’ ಆಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.