Uttar Pradesh ನಕಲಿ ವಿಮೆ ಜಾಲಕ್ಕೆ ಕರ್ನಾಟಕ ನಂಟು!: 11 ಮಂದಿ ಸೆರೆ
Team Udayavani, Jul 8, 2024, 6:00 AM IST
ಲಕ್ನೋ: ಕಾಲ್ ಸೆಂಟರ್ ಮೂಲಕ ನಕಲಿ ಇನ್ಸುರೆನ್ಸ್ ಪಾಲಿಸಿ ಹಾಗೂ ಸಾಲ ನೀಡಿ ಬಹುಕೋಟಿ ರೂ. ವಂಚಿಸಿದ್ದ 9 ಮಹಿಳೆಯರು ಸೇರಿ 11 ಜನರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ವಂಚಕರ ಜಾಲಕ್ಕೆ ಕರ್ನಾಟಕದ ನಂಟಿದೆ.
ವಿಮಾ ಪಾಲಿಸಿ ಏಜೆಂಟ್ಗಳಾಗಿದ್ದ ಆಶಿಶ್ ಕುಮಾರ್, ಜೀತೆಂದ್ರ ವರ್ಮಾ ಹಗರಣದ ಮಾಸ್ಟರ್ಮೈಂಡ್ ಗಳು. ಆರೋಪಿಗಳು ನಕಲಿ ಇನ್ಸುರೆನ್ಸ್ ಕಂಪನಿ ಸ್ಥಾಪಿಸಿ, 9 ಮಹಿಳೆಯರನ್ನು ನೇಮಿಸಿ ಕೊಂಡಿದ್ದರು. ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಪಡೆದ ಆರೋಪಿಗಳು, ಗ್ರಾಹಕರಿಗೆ ಕರೆ ಮಾಡಿ, ಇನ್ಸುರೆನ್ಸ್ ಪಾಲಿಸಿ, ಸಾಲ ತೆಗೆದುಕೊಂಡರೆ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದರು. 1 ವರ್ಷದಲ್ಲಿ ಕೋಟ್ಯಂತರ ಹಣ ವಂಚಿಸಿದ್ದಾರೆ.
ರಾಜ್ಯದ ನಂಟು
ಕರ್ನಾಟಕದ ಅರವಿಂದ್ ಎಂಬವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯನ್ನು 10 ಸಾವಿರ ರೂ.ಗೆ ಬಾಡಿಗೆ ಪಡೆದು ಕೊಂಡಿದ್ದರು. ವಂಚ ನೆಯ ಹಣ ವೆಲ್ಲ ಆ ಖಾತೆಗೆ ಜಮೆ ಆಗುತ್ತಿತ್ತು. ಆರೋಪಿಗಳು ಇಂಡಿಯಾ ಮಾರ್ಟ್ನಿಂದ 2500 ರೂ.ಗೆ ಆನ್ಲೈನ್ ಮೂಲಕ ಗ್ರಾಹಕರ ಪಟ್ಟಿ ಪಡೆದು, ಕರೆ ಮಾಡಿ, ವಂಚನೆ ನಡೆಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.