![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 3, 2019, 11:20 AM IST
ದಿಲ್ಲಿ/ಇಸ್ಲಾಮಾಬಾದ್ : ಕರ್ತಾರ್ಪುರ್ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತ – ಪಾಕಿಸ್ಥಾನದ ಅಧಿಕಾರಿಗಳು ಇದೇ ಜುಲೈ 14ರಂದು ಪಾಕಿಸ್ಥಾನದ ವಾಘಾ ಗಡಿಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಕರ್ತಾರ್ಪುರ್ ಕಾರಿಡಾರ್ ಸಭೆಯನ್ನು ಜು.11ರಿಂದ 14ರ ನಡುವಿನ ಯಾವುದೇ ದಿನಾಂಕಕ್ಕೆ ನಿಗದಿಸಬಹುದಾಗಿದೆ ಎಂದು ಕಳೆದ ವಾರ ಹೊಸದಿಲ್ಲಿ ಇಸ್ಲಾಮಾಬಾದ್ ಗೆ ತಿಳಿಸಿತ್ತು. ಆ ಪ್ರಕಾರ ಪಾಕಿಸ್ಥಾನ ಅದನ್ನು ಜುಲೈ 14ಕ್ಕೆ ನಿಗದಿಸಿದೆ.
ಈ ಎರಡನೇ ಸುತ್ತಿನ ಮಾತುಕತೆಯು ಈ ಮೊದಲು ಎ.2ರಂದೇ ನಡೆಯುವ ನಿರೀಕ್ಷೆ ಇತ್ತು. ಆದರೆ ಪಾಕಿಸ್ಥಾನವು ಖಾಲಿಸ್ಥಾನೀ ನಂಟು ಹೊಂದಿದವರನ್ನು ಕರ್ತಾರ್ಪುರ್ ಕಾರಿಡಾರ್ ಸಮಿತಿಗೆ ನೇಮಿಸಿದುದನ್ನು ಪ್ರತಿಭಟಿಸಿ ಭಾರತ ಎ.2ರ ಸಭೆಯನ್ನು ಮುಂದಕ್ಕೆ ಹಾಕಿತ್ತು.
ಕರ್ತಾರ್ಪುರ್ ಕಾರಿಡಾರ್ ಕುರಿತ ಮೊದಲ ಸುತ್ತಿನ ಸಭೆಯು ಕಳೆದ ಮಾರ್ಚ್ 14ರಂದು ಅಟ್ಟಾರಿ ವಾಘಾ ಗಡಿಯಲ್ಲಿ ನಡೆದಿತ್ತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.