Kashmir; ಉಗ್ರರಿಂದ ಗ್ರೆನೇಡ್, ಗುಂಡಿನ ದಾಳಿ: 5 ಯೋಧರು ಹುತಾತ್ಮ
ಮನೆ ಕಪಾಟಿನೊಳಗಿನ ಬಂಕರ್ನಲ್ಲಿ ಅಡಗಿದ್ದ ಹಿಜ್ಬುಲ್ ಉಗ್ರರು!
Team Udayavani, Jul 8, 2024, 11:38 PM IST
ಕಥುವಾ/ ಜಮ್ಮು: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನಾವಾಹನದ ಮೇಲೆ ನಡೆದ ಉಗ್ರ ದಾಳಿಗೆ 5 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಕಳೆದ 48 ಗಂಟೆಗಳಲ್ಲಿ ಇದು 2ನೇ ಉಗ್ರದಾಳಿ ಯಾ ಗಿದ್ದು, ಉಗ್ರರಿಗಾಗಿ ಸೇನೆ ಶೋಧ ಕಾರ್ಯ ಆರಂಭಿಸಿ ದೆ. ಕಥುವಾದ ಮಚೇಡಿ ಕಿಂಡ್ಲಿ ಮಲ್ಹಾರ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಸೇನಾವಾಹನ ಸಾಮಾನ್ಯ ಗಸ್ತು ನಡೆಸುತ್ತಿದ್ದಾಗ ಉಗ್ರರು ಗ್ರೆನೇಡ್ ದಾಳಿ ನಡೆಸಿ ದ್ದಾರೆ. ಇದರ ಬೆನ್ನಲ್ಲೇ ಗುಂಡಿನ ದಾಳಿ ನಡೆಸಿದ್ದು, ನಾಲ್ವರು ಯೋಧರು ಅಸುನೀಗಿದ್ದಾರೆ.
ತತ್ಕ್ಷಣವೇ ಪ್ರತಿಕ್ರಿಯಿಸಿದ ಸೈನಿಕರು ಉಗ್ರರ ಬೆನ್ನು ಹತ್ತಿದರೂ ಅವರು ಅರಣ್ಯದಲ್ಲಿ ತಪ್ಪಿಸಿಕೊಂ ಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರಿಗ ಾಗಿ ಶೋಧ ಕಾರ್ಯ ಆರಂಭವಾಗಿದೆ. ಈಗಾಗಲೇ ಹೆಚ್ಚುವರಿ ಯೋಧರನ್ನು ಇದಕ್ಕಾಗಿ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಿ?
ಜಮ್ಮು – ಕಾಶ್ಮೀರದ ಕಥುವಾದಿಂದ 150 ಕಿ.ಮೀ. ದೂರದಲ್ಲಿ
48 ಗಂಟೆಯಲ್ಲಿ ಎರಡನೇ ದಾಳಿ
ಕಳೆದ 48 ಗಂಟೆಯಲ್ಲಿ 2ನೇ ಬಾರಿ ಸೇನೆಯ ಮೇಲೆ ಉಗ್ರ ದಾಳಿ ನಡೆದಿದೆ. ರವಿವಾರ ರಜೌರಿಯಲ್ಲಿ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದರಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರು.
ಮನೆ ಕಪಾಟಿನೊಳಗಿನ ಬಂಕರ್ನಲ್ಲಿ ಅಡಗಿದ್ದ ಹಿಜ್ಬುಲ್ ಉಗ್ರರು!
ಕುಲ್ಗಾಂ ಜಿಲ್ಲೆಯಲ್ಲಿ ರವಿವಾರ ನಡೆದ ಅವಳಿ ಎನ್ಕೌಂಟರ್ನಲ್ಲಿ ಹತರಾದ 6 ಮಂದಿ ಹಿಜ್ಬುಲ್ ಮುಜಾಹಿದೀನ್ ಉಗ್ರರ ಅಡಗುತಾಣ ಸೋಮವಾರ ಪತ್ತೆಯಾಗಿದೆ. ಮನೆಯೊಂದರ ಕಪಾಟಿ(ಬೀರು)ನೊಳಗೆ ಬಂಕರ್ ಮಾಡಿಕೊಂಡು ಈ ಉಗ್ರರು ಆಶ್ರಯ ಪಡೆದುಕೊಂಡಿದ್ದರು. ಅದರ ವೀಡಿಯೋಗಳು ಈಗ ವೈರಲ್ ಆಗಿವೆ. ಬೀರುವಿನೊಳಗೆ ಅಡಗುತಾಣ ಮಾಡಿ ವಾಸಿಸಲು ಸ್ಥಳೀಯರೂ ಸಹಾಯ ಮಾಡಿರುವ ಶಂಕೆ ಯಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ
J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ
Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!
Kasaragod: ಗಾಯಕಿಯ ಮಾನಭಂಗ; ದೂರು: ಗಾಯಕ ರಿಯಾಸ್ ಬಂಧನ
Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.