![6-ptr](https://www.udayavani.com/wp-content/uploads/2024/12/6-ptr-415x249.jpg)
9ನೇ ಆವೃತ್ತಿಯ ಮೊದಲ “ಕರೋಡ್ಪತಿ’ ಅನಾಮಿಕಾ
Team Udayavani, Oct 1, 2017, 7:50 AM IST
![Kaun-Banega-Crorepati-9.jpg](https://www.udayavani.com/wp-content/uploads/2017/10/1/Kaun-Banega-Crorepati-9.jpg)
ಹೊಸದಿಲ್ಲಿ: ಜೆಮೆಡ್ಪುರದ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಎರಡು ಮಕ್ಕಳ ತಾಯಿ ಈಗ “ಕರೋಡ್ಪತಿ’!
ಹೌದು, ಬುದ್ಧಿಮತ್ತೆ ಪರೀಕ್ಷೆ ಹಾಗೂ ಸ್ಫೂರ್ತಿದಾಯಕ ಅನುಭವಗಳ ಮಾತುಕತೆಯ ಮೂಲಕ ಕಠಿಣ ಪ್ರಶ್ನೆಗಳಿಗೆ ಉತ್ತರಿಸುವ ಚಾಣಾಕ್ಷತನದ ಕಾರ್ಯಕ್ರಮ, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ನಿರೂಪಣೆಯ “ಕೌನ್ ಬನೇಗಾ ಕರೋಡ್ಪತಿ’ 9ನೇ ಆವೃತ್ತಿಯ ಮೊದಲ ಸುತ್ತಿನ ಶೂಟಿಂಗ್ ಶುಕ್ರವಾರ ನಡೆದಿದೆ. ಜೆಮೆÒಡ್ಪುರದ ಸಾಮಾಜಿಕ ಕಾರ್ಯಕರ್ತೆ ಅನಾಮಿಕಾ ಮುಜುಮಾªರ್, 1 ಕೋಟಿ ರೂ. ಗೆದ್ದು ಆಟ ನಿಲ್ಲಿಸಿದ್ದಾರೆ. ಆಕೆಯ ಆತ್ಮವಿಶ್ವಾಸಕ್ಕೆ ಸ್ವತಃ ಬಿಗ್ಬಿ ಶಹಬ್ಟಾಸ್ ಎಂದಿದ್ದಾರೆ.
ಅನಾಮಿಕಾ ಈ ಆವೃತ್ತಿಯ ಮೊದಲ “ಕರೋಡ್ಪತಿ’. ಮುಂಬೈನ ಫಿಲಂಸಿಟಿಯಲ್ಲಿರುವ ಕೌನ್ ಬನೇಗಾ ಕರೋಡ್ಪತಿ ಸೆಟ್ನಲ್ಲಿ ಶೂಟಿಂಗ್ ನಡೆದಿದ್ದು, ಕಾರ್ಯಕ್ರಮ ಮುಂದಿನ ತಿಂಗಳು ಪ್ರಸಾರಗೊಳ್ಳಲಿದೆ.
“”ಅನಾಮಿಕಾ ಕೇಳಿದ ಪ್ರಶ್ನೆಗಳಿಗೆಲ್ಲ ಕ್ರಿಯಾಶೀಲರಾಗಿ ಹಾಗೂ ಸಮಂಜಸವಾದ ಉತ್ತರ ನೀಡಿದ್ದಾರೆ. ಯಾವ ಪ್ರಶ್ನೆಗೂ ಲೈಫ್ಲೈನ್ ಪಡೆದು ಕೊಳ್ಳದೇ ಗುರಿ ಸಾಧಿಸಿದ್ದಾರೆ. ಅವರಲ್ಲಿರುವ ಆತ್ಮ ವಿಶ್ವಾಸ ಕಂಡು ಸ್ವತಃ ಅಮಿತಾಭ್ ಬಚ್ಚನ್ ಅವರೇ ಅಚ್ಚರಿ ವ್ಯಕ್ತಪಡಿಸಿ ಪ್ರಶಂಸಿಸಿದರು” ಎಂದು ಆಪ್ತ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಲಾಗಿದೆ.
ಅನಾಮಿಕಾ ಸಂಗೀತ ಪ್ರಿಯೆಯಾಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಅವರು ಫೇತ್ ಇನ್ ಇಂಡಿಯಾ ಎನ್ಜಿಒದಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಕುಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಸುವ, ಮಾಹಿತಿ ಸಂಗ್ರಹಿಸಿ ವರದಿ ಒಪ್ಪಿಸುವ ವೃತ್ತಿ ಅವರದ್ದಾಗಿದೆ. ಮೂರು ವರ್ಷಗಳಿಂದ ಈ ಸೇವೆಯಲ್ಲಿದ್ದಾರೆ.
ಕ್ವಿಟ್ ಆಗಿದ್ದೇಕೆ?
ಅಷ್ಟಕ್ಕೂ ಅನಾಮಿಕಾ ಅವರಿಗೆ 7 ಕೋಟಿ ರೂ. ಗೆಲ್ಲುವ ಅವಕಾಶವೂ ಇತ್ತು. ಒಂದು ಕೋಟಿ ರೂ. ಗೆಲ್ಲುತ್ತಿದ್ದಂತೆ ಮುಂದಿನ ಆಟದ ವೈಖರಿಯ ಬಗ್ಗೆ ಬಿಗ್ಬಿ ವಿವರಿಸಿ, ಗೆಲ್ಲುವ ವಿಶ್ವಾಸವಿದೆಯೇ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ತಕ್ಷಣ
ಪ್ರತಿಕ್ರಿಯಿಸಿದ ಅನಾಮಿಕಾ ಸ್ಪರ್ಧೆ ಮುಂದುವರಿಸುವುದಾಗಿ ಹೇಳಿ, ಮತ್ತೆ ಕಠಿಣವಾದೀತು ಎಂದು ಭಾವಿಸಿ ಸ್ಪರ್ಧೆಯಿಂದ ಹಿಂದೆ ಸರಿದರು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
![6-ptr](https://www.udayavani.com/wp-content/uploads/2024/12/6-ptr-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Parliament; Pushing in front of Parliament House; Two MPs injured, allegations against Rahul Gandhi](https://www.udayavani.com/wp-content/uploads/2024/12/rahul-mp-150x87.jpg)
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
![ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು](https://www.udayavani.com/wp-content/uploads/2024/12/hospital-150x89.jpg)
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
![Ambedkar row: Amit Shah gone mad, he should leave politics says Lalu Prasad Yadav](https://www.udayavani.com/wp-content/uploads/2024/12/lalu-150x87.jpg)
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
![New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು](https://www.udayavani.com/wp-content/uploads/2024/12/new-year-150x87.jpg)
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
![K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ](https://www.udayavani.com/wp-content/uploads/2024/12/KV-Narayan-150x84.jpg)
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
![6-ptr](https://www.udayavani.com/wp-content/uploads/2024/12/6-ptr-150x90.jpg)
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
![Parliament; Pushing in front of Parliament House; Two MPs injured, allegations against Rahul Gandhi](https://www.udayavani.com/wp-content/uploads/2024/12/rahul-mp-150x87.jpg)
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
![BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್](https://www.udayavani.com/wp-content/uploads/2024/12/4-37-150x90.jpg)
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
![ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು](https://www.udayavani.com/wp-content/uploads/2024/12/hospital-150x89.jpg)
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
![1](https://www.udayavani.com/wp-content/uploads/2024/12/1-37-150x80.jpg)
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.