ಕೇಜ್ರಿವಾಲ್ ಗಿಲ್ಲ ರಿಲೀಫ್: ಮಧ್ಯಾಂತರ ಜಾಮೀನು ಅರ್ಜಿ ಆದೇಶ ಜೂ.5ಕ್ಕೆ
Team Udayavani, Jun 2, 2024, 12:40 AM IST
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿ ಮಧ್ಯಾಂತರ ಜಾಮೀನು ಕೋರಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ಕುರಿತಾದ ಆದೇಶವನ್ನು ದಿಲ್ಲಿ ನ್ಯಾಯಾಲಯ ಜೂ.5ಕ್ಕೆ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ರವಿವಾರ ಕೇಜ್ರಿವಾಲ್ ಅವರು ಜೈಲಿಗೆ ವಾಪಸಾಗುವುದು ಖಾತರಿಯಾಗಿದೆ.
ಮಧ್ಯಾಂತರ ಜಾಮೀನು ಕೋರಿದ್ದ ಕೇಜ್ರಿವಾಲ್ಗೆ ಸುಪ್ರೀಂ ಕೋರ್ಟ್ 21 ದಿನಗಳ ಜಾಮೀನು ನೀಡಿತ್ತು. ಶನಿವಾರಕ್ಕೆ ಅವಧಿ ಪೂರ್ಣಗೊಂಡಿದ್ದು, ರವಿವಾರ ಕೇಜ್ರಿವಾಲ್ ಮತ್ತೆ ಪೊಲೀಸರಿಗೆ ಶರಣಾಗಬೇಕಿದೆ. ಏತನ್ಮಧ್ಯೆ, ಅನಾರೋಗ್ಯದ ಕಾರಣ ನೀಡಿ ಸ್ಥಳೀಯ ನ್ಯಾಯಾಲಯದಲ್ಲಿ ಮತ್ತೂಂದು ಮಧ್ಯಾಂತರ ಅರ್ಜಿ ದಾಖಲಿಸಲಾಗಿತ್ತು. ಸದ್ಯ ನ್ಯಾ| ಕಾವೇರಿ ಬವೇಜಾ ಅರ್ಜಿಯ ಆದೇಶ ಕಾಯ್ದಿರಿಸಿದ್ದಾರೆ.
ಕೇಜ್ರಿವಾಲ್ಗಾಗಿ ಆ್ಯಂಬುಲೆನ್ಸ್ ಕಳುಹಿಸಿದ ಬಿಜೆಪಿ ನಾಯಕ!
ದಿಲ್ಲಿ ಸಿಎಂಗೆ ಆರೋಗ್ಯ ಸಮಸ್ಯೆಯಿದೆ ಎಂದು ಪಕ್ಷ ಹೇಳಿದ ಬಳಿಕ ಕೇಜ್ರಿವಾಲ್ ಆಸ್ಪತೆಗೆ ತೆರಳಲಿ ಎಂದು ಬಿಜೆಪಿ ಹಿರಿಯ ನಾಯಕ ವಿಜಯ್ ಗೋಯಲ್ ಆ್ಯಂಬುಲೆನ್ಸ್ ಕಳುಹಿಸಿದ್ದಾರೆ! ಅದಾಗ್ಯೂ ದಿಲ್ಲಿ ಪೊಲೀಸರು ಆ್ಯಂಬುಲೆನ್ಸ್ ಅನ್ನು ದಾರಿಮಧ್ಯೆ ತಡೆದಿದ್ದಾರೆ. ಜನರ ಅನುಕಂಪಕ್ಕಾಗಿ ಕೇಜ್ರಿ ಆರೋಗ್ಯದ ವಿಚಾರದಲ್ಲಿ ನಾಟಕ ವಾಡುತ್ತಿದ್ದಾರೆ ಎಂದು ಗೋಯಲ್ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.