![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 3, 2019, 3:36 PM IST
ತಿರುವನಂತಪುರ : ಕೇರಳದ ಕೋಯಿಕ್ಕೋಡ್ ಮುಸ್ಲಿಂ ಎಜುಕೇಶನ್ ಸೊಸೈಟಿ (ಎಂಇಎಸ್) ತನ್ನ ವಿದ್ಯಾರ್ಥಿನಿಯರಿಗೆ ಶಾಲಾ ಕ್ಯಾಂಪಸ್ ಒಳಗೆ ಬುರ್ಖಾ ಧರಿಸುವುದನ್ನು ನಿಷೇಧಿಸಿದೆ.
‘ಯಾವುದೇ ವಿವಾದವನ್ನು ಸೃಷ್ಟಿಸಿದೆ ಎಂಇಎಸ್ ಶಿಕ್ಷಣ ಸಂಸ್ಥೆಗಳು 2019-20ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ವಿದ್ಯಾರ್ಥಿಗಳು ಮುಖ ಮುಚ್ಚುವ ಬುರ್ಖಾ ಧರಿಸಿಕೊಂಡು ತರಗತಿಗಳಿಗೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ಎಪ್ರಿಲ್ 17ರಂದು ಹೊರಡಿಸಲಾಗಿರುವ ಸುತ್ತೋಲೆಯಲ್ಲಿ ಎಂಇಎಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪಿ ಕೆ ಫಝಲ್ ಗಫೂರ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
‘ಸಾರ್ವಜನಿಕವಾಗಿ ಸ್ವೀಕಾರಾರ್ಹವಲ್ಲದ, ಬೇಕಿದ್ದರೆ ಅದು ಆಧುನಿಕತೆಯ ಹೆಸರಲ್ಲಿರಲಿ ಅಥವಾ ಧಾರ್ಮಿಕ ವಿಧಿವಿಧಾನದ ಹೆಸರಿನಲ್ಲೇ ಇರಲಿ, ಯಾವುದೇ ಉಡುಪು ತೊಡುಪುಗಳನ್ನು ಧರಿಸಿಕೊಂಡು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲಾ ಆವರಣ ಪ್ರವೇಶಿಸಲು ಬಿಡಲಾಗದು’ ಎಂದು ಸುತ್ತೋಲೆ ಹೇಳಿದೆ.
ಹಾಗಿದ್ದರೂ ಎಂಇಎಸ್ ನ ಈ ವಸ್ತ್ರ ಸಂಹಿತೆಯು ದೇಶಾದ್ಯಂತ ವಿವಾದವನ್ನು ಸೃಷ್ಟಿಸಿದೆ; ಮುಖ್ಯವಾಗಿ ಇಸ್ಲಾಮಿಕ್ ಸಮೂಹಗಳು ಇದನ್ನು ಆಕ್ಷೇಪಿಸಿವೆ.
ದಾರುಲ್ ಉಲೂಮ್ ದೇವಬಂದ್ ಸಂಸ್ಥೆಯು ಎಂಇಎಸ್ನ ಬುರ್ಖಾ ನಿಷೇಧವನ್ನು ಇಸ್ಲಾಮಿಕ್ ಕಾನೂನು ವಿರೋಧಿ ಎಂದು ಕರೆದಿದೆ. ಇದು ಶರೀಯತ್ಗೆ ವಿರುದ್ಧವಾದುದು ಎಂದು ಅದು ಹೇಳಿದೆ.
ಆದುದರಿಂದ ಎಂಇಎಸ್ ಶಿಕ್ಷಣ ಸಂಸ್ಥೆಯು ವ್ಯಕ್ತಿಯ ಮೂಲ ಹಕ್ಕಿನ ಮೇಲೆ ದಾಳಿ ಎಸಗದೆ, ತನ್ನ ಈ ಆದೇಶವನ್ನು ಹಿಂಪಡೆಯಬೇಕು ಎಂದು ದಾರುಲ್ ಉಲೂಮ್ ದೇವಬಂದ್ ನ ಮುಫ್ತಿ ಮೊಹಮ್ಮದ್ ಅರ್ಷದ್ ಫಾರೂಕಿ ಆಗ್ರಹಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.