![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 3, 2023, 6:20 AM IST
ತ್ರಿಪುರಾ ಚುನಾವಣೆಯಲ್ಲಿ ಮಾಜಿ ದೊರೆ ಪ್ರದ್ಯೋತ ಕಿಶೋರ್ ಮಾಣಿಕ್ಯ ದೇಬ್ ಬರ್ಮ ನಾಯಕತ್ವದ ತಿಪ್ರಾ ಮೋಥಾ ಪಕ್ಷದ್ದು ವಿಶೇಷ ಕಥೆ. ದೇಬ್ ಬರ್ಮ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷ. ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ಸಿಡಿದೆದ್ದು ಸ್ವತಂತ್ರ ರಾಜ್ಯ ಬೇಕೆಂಬ ಆಗ್ರಹವಿಟ್ಟುಕೊಂಡು ತಮ್ಮದೇ ಪಕ್ಷ ಕಟ್ಟಿದರು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಿಪ್ರಾ ಮೋಥಾ 2ನೇ ಗರಿಷ್ಠ ಸಾಧನೆ ಮಾಡಿದೆ! ಆ ಪಕ್ಷ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಎಲ್ಲರನ್ನೂ ಕಂಗೆಡಿಸಿದೆ. ಲೆಕ್ಕಾಚಾರಗಳನ್ನೇ ಬದಲಿಸಿದೆ.
ಚುನಾವಣಾಪೂರ್ವ ಬಿಜೆಪಿ, ತಿಪ್ರಾ ಮೋಥಾದೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸಿತ್ತು. ಆದರೆ ಸ್ವತಂತ್ರ ರಾಜ್ಯ ಬೇಕೆಂಬ ಬೇಡಿಕೆಗೆ ಒಪ್ಪದಿದ್ದರಿಂದ ಈ ಮಾತುಕತೆ ಮುರಿದುಬಿತ್ತು. ಈಗ ಬಿಜೆಪಿಗೆ ಸರಳ ಬಹುಮತ ಬಂದಿರುವುದರಿಂದ ತಿಪ್ರಾ ಮೋಥಾದ ಅಗತ್ಯವೇ ಇಲ್ಲ. ಇನ್ನೊಂದು ಕಡೆ ದೇಬ್ ಬರ್ಮ, ಸ್ವತಂತ್ರ ರಾಜ್ಯದ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಚಿತಪಡಿಸಿದ್ದಾರೆ.
2019ರಲ್ಲಿ ದೇಬ್ ಬರ್ಮ, ತ್ರಿಪುರಾದ ಮೂಲನಿವಾಸಿಗಳ ಹಕ್ಕುಗಳಿಗಾಗಿ ಸಾಮಾಜಿಕ ಸಂಘವೊಂದನ್ನು ಆರಂಭಿಸಿದ್ದರು. 2021ರಲ್ಲಿ ಅವರ ಪಕ್ಷ ತ್ರಿಪುರಾದ ಬುಡಕಟ್ಟು ಸಮುದಾಯದವರೇ ಜಾಸ್ತಿಯಿರುವ ಸ್ವಾಯುತ್ತ ಜಿಲ್ಲಾ ಸಮಿತಿ ಚುನಾವಣೆಯಲ್ಲಿ ಪೂರ್ಣ ಜಯ ಸಾಧಿಸಿದ್ದರು. ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ 42 ಸ್ಥಾನಗಳಿಗೆ ಸ್ಪರ್ಧಿಸಿ 13ರಲ್ಲಿ ಗೆಲುವು ಪಡೆದಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.