![Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ](https://www.udayavani.com/wp-content/uploads/2024/12/Rahul-Gandhi-1-415x264.jpg)
ಆ್ಯಂಟಿ ಬಯಾಟಿಕ್ ಬಳಕೆ ಬೇಡ: ಹೆಚ್ಚುತ್ತಿರುವ ಜ್ವರ ಬಾಧೆ; ಐಸಿಎಂಆರ್ನಿಂದ ಸಲಹೆ
Team Udayavani, Mar 5, 2023, 7:15 AM IST
![ಆ್ಯಂಟಿ ಬಯಾಟಿಕ್ ಬಳಕೆ ಬೇಡ: ಹೆಚ್ಚುತ್ತಿರುವ ಜ್ವರ ಬಾಧೆ; ಐಸಿಎಂಆರ್ನಿಂದ ಸಲಹೆ](https://www.udayavani.com/wp-content/uploads/2023/03/Medince-620x381.jpg)
ಹೊಸದಿಲ್ಲಿ: ಎರಡ್ಮೂರು ತಿಂಗಳುಗಳಲ್ಲಿ ಜ್ವರ, ಶೀತ, ಕೆಮ್ಮು, ಗಂಟಲು ನೋವು ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆ ಎಚ್3ಎನ್2 ವೈರಸ್ ಕಾರಣ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಆದರೆ ಇವುಗಳ ನಿಯಂತ್ರಣಕ್ಕೆ ಮಿತಿ ಮೀರಿ ಆ್ಯಂಟಿಬಯಾಟಿಕ್ ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್) ವೈದ್ಯರಿಗೆ ಸಲಹೆ ನೀಡಿದೆ.
ಮೇಲಿನ ಲಕ್ಷಣಗಳಿಂದಾಗಿ ಕೆಲವರು ಆಸ್ಪತ್ರೆ ಸೇರುತ್ತಿದ್ದು, ರೋಗದ ಹರಡುವಿಕೆಯೂ ಜೋರಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ಆದರೂ 7 ದಿನಗಳಲ್ಲಿ ಜ್ವರ ಹೋಗಲಿದ್ದು, ಕೆಮ್ಮು ಮಾತ್ರ 3 ವಾರಗಳ ವರೆಗೆ ಇರಬಹುದು. ಇದಕ್ಕೆ ಆ್ಯಂಟಿಬಯಾಟಿಕ್ಸ್ ಬೇಕಿಲ್ಲ ಎಂದಿದೆ.
ಸದ್ಯ ಜನರು ಆಜಿಥ್ರೋಮೈಸಿನ್ ಮತ್ತು ಆಮೋಕ್ಸಿಕ್ಲೇವ್ ಸಹಿತ ಇತರ ಆ್ಯಂಟಿಬಯಾಟಿಕ್ಗಳನ್ನು ಬಳಸುತ್ತಿದ್ದಾರೆ. ಸುಖಾಸುಮ್ಮನೆ ಆ್ಯಂಟಿಬಯಾಟಿಕ್ಸ್ ನೀಡಿದರೆ, ನಿಜವಾಗಿಯೂ ಅಗತ್ಯವಿದ್ದಾಗ ಅದು ಕೆಲಸ ಮಾಡದೇ ಇರಬಹುದು ಎಂದು ಎಚ್ಚರಿಕೆ ನೀಡಿದೆ.
ಜ್ವರದ ಲಕ್ಷಣಗಳು ಎಚ್1ಎನ್1 ಉಪತಳಿ
ಎಚ್3ಎನ್2 ಹಂದಿಜ್ವರಕ್ಕೆ ಕಾರಣವಾಗಿದ್ದ ಎಚ್1ಎನ್1 ವೈರಸ್ನ ರೂಪಾಂತರಿಯಾಗಿದೆ. ಈ ವೈರಸ್ನಿಂದ ಜ್ವರ ಹಾಗೂ ಗಂಟಲು ನೋವು ಪ್ರಕರಣಗಳು ವರದಿಯಾಗುತ್ತಿವೆ.
ರೋಗ ಲಕ್ಷಣಗಳೇನು?
ಎಚ್3ಎನ್2 ಸೋಂಕು ದೃಢಪಟ್ಟವರಲ್ಲಿ ಶೇ.92 ಮಂದಿಗೆ ಜ್ವರ, ಶೇ. 86 ಮಂದಿಗೆ ಕೆಮ್ಮು, ಶೇ. 27 ಮಂದಿಗೆ ಉಸಿರಾಟ ಸಮಸ್ಯೆ, ಶೇ. 16 ಮಂದಿಗೆ ಅಸ್ತಮಾ, ಶೇ. 16 ಮಂದಿಗೆ ನ್ಯುಮೋನಿಯಾ ಲಕ್ಷಣಗಳು ಕಾಣಿಸಿ ಕೊಂಡಿವೆ. 7 ದಿನಗಳವರೆಗೆ ಜ್ವರ ಇರುತ್ತದೆ. ಆದರೆ ಕೆಮ್ಮು ಕನಿಷ್ಠ 3 ವಾರಗಳವರೆಗೆ ಮುಂದುವರಿಯುತ್ತದೆ.
ಟಾಪ್ ನ್ಯೂಸ್
![Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ](https://www.udayavani.com/wp-content/uploads/2024/12/Rahul-Gandhi-1-415x264.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ](https://www.udayavani.com/wp-content/uploads/2024/12/Rahul-Gandhi-1-150x95.jpg)
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
![Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ](https://www.udayavani.com/wp-content/uploads/2024/12/Karti-Chidambaram-150x96.jpg)
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
![Bengal](https://www.udayavani.com/wp-content/uploads/2024/12/Bengal-150x90.jpg)
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
![Government scraps ‘no-detention policy’ for Classes 5 and 8 in central schools](https://www.udayavani.com/wp-content/uploads/2024/12/school-1-150x83.jpg)
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
![1-biren](https://www.udayavani.com/wp-content/uploads/2024/12/1-biren-150x100.jpg)
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ](https://www.udayavani.com/wp-content/uploads/2024/12/Rahul-Gandhi-1-150x95.jpg)
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
![Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ](https://www.udayavani.com/wp-content/uploads/2024/12/Karti-Chidambaram-150x96.jpg)
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
![ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ](https://www.udayavani.com/wp-content/uploads/2024/12/aa-8-150x89.jpg)
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
![aane](https://www.udayavani.com/wp-content/uploads/2024/12/aane-150x111.jpg)
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
![Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ](https://www.udayavani.com/wp-content/uploads/2024/12/v-2-150x91.jpg)
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.