Kolkata; ಮೃ*ತ ಟ್ರೈನಿ ವೈದ್ಯೆ ದೇಹದಲ್ಲಿ 16 ಗಾಯದ ಗುರುತುಗಳು ಪತ್ತೆ!
ಡ್ರಗ್ಸ್ ಮಾಫಿಯಾ ಗೊತ್ತಿದ್ದಕ್ಕೆ ವೈದ್ಯೆ ಹತ್ಯೆ?
Team Udayavani, Aug 20, 2024, 6:54 AM IST
ಕೋಲ್ಕತಾ: ಅತ್ಯಾಚಾರ ಮತ್ತು ಹತ್ಯೆಗೊಳಗಾದ ಬಂಗಾಲದ ಟ್ರೈನಿ ವೈದ್ಯೆ ದೇಹದಲ್ಲಿ 16 ಗಾಯದ ಗುರು ತುಗಳು ಪತ್ತೆಯಾಗಿದ್ದು, ಈ ಪೈಕಿ ಗುಪ್ತಾಂಗದಲ್ಲಿನ ಗಾಯವೂ ಸೇರಿ 9 ಆಂತರಿಕ ಗಾಯಗಳೂ ಇವೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಈ ಎಲ್ಲ ಗಾಯದ ಗುರುತುಗಳು ಆಕೆ ಮೇಲೆ ರೇಪ್ಆಗುವಾಗಲೇ ಆದಂಥವು ಎಂದೂ ತಿಳಿಸಲಾಗಿದೆ.
ಸಂತ್ರಸ್ತೆಯನ್ನು ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲ್ಲ ಲಾಗಿದ್ದು, ಆಕೆಯ ಶ್ವಾಸಕೋಶದಲ್ಲಿ ರಕ್ತಸ್ರಾವವಾಗಿದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ. ಗುಪ್ತಾಂಗದ ಮೇಲೆ ಬಲ ಪ್ರಯೋಗ ನಡೆದಿದ್ದು, ಬಿಳಿ ಬಣ್ಣದ ದ್ರವವೂ ಗುಪ್ತಾಂಗದಲ್ಲಿ ಪತ್ತೆಯಾಗಿದೆ ಎಂದು ವರದಿ ಹೇಳಿ ದೆ. ಆದರೆ ದ್ರವದ ಸ್ವರೂಪದ ಬಗ್ಗೆ ಉಲ್ಲೇಖೀಸಲಾಗಿಲ್ಲ.
ಡ್ರಗ್ಸ್ ಮಾಫಿಯಾ ಗೊತ್ತಿದ್ದಕ್ಕೆ ವೈದ್ಯೆ ಹತ್ಯೆಯಾಗಿದೆ- ಆರೋಪ: ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಡ್ರಗ್ ಮಾಫಿಯಾ ಬಗ್ಗೆ ಆಕೆಗೆ ತಿಳಿದಿರಬಹುದು. ಹಾಗಾ ಗಿಯೇ ಹತ್ಯೆಗೈಯ್ಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಮಾಜಿ ಪ್ರಾಂಶುಪಾಲ ಇಂಥ ಡ್ರಗ್ ಮಾಫಿಯಾದ ಭಾಗವಾಗಿದ್ದರು ಎಂಬ ಆರೋಪ ನಡು ವೆಯೇ, ಸಂತ್ರ ಸ್ತೆ ಸಹೋ ದ್ಯೋ ಗಿ ಗಳು ಇಂಥ ದ್ದೊಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಸಂದೀಪ್ರನ್ನು ಸತತ 4ನೇ ದಿನ ಸಿಬಿಐ ವಿಚಾರಣೆ ನಡೆಸಿದೆ.
ಕಪ್ಪು ರಾಖಿ ಕಟ್ಟಿಕೊಂಡು ಪ್ರತಿಭಟಿಸಿದ ವೈದ್ಯರು!
ಟ್ರೈನಿ ವೈದ್ಯೆ “ಅಭಯಾ’ ಅತ್ಯಾಚಾರ ಖಂಡಿಸಿ, ಆಕೆಗೆ ನ್ಯಾಯ ಒದಗಿಸಬೇಕೆಂದು ದೇಶಾದ್ಯಂತ ವೈದ್ಯರು ನಡೆಸುತ್ತಿರುವ ಪ್ರತಿಭಟನೆ 8ನೇ ದಿನ ಪೂರೈಸಿದೆ. ಸೋಮವಾರ ಪ್ರತಿಭಟನಾನಿರತ ವೈದ್ಯರು ಕೈಗೆ ಕಪ್ಪು ರಾಖಿ ಧರಿಸಿ “ನಾನು ಅಭಯಾಳ ಅಣ್ಣ’ ಎಂದು ಘೋಷಣೆ ಕೂಗಿ ನಮ್ಮ ಸಹೋದರಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ. ಇನ್ನು ಕಲ್ಕತ್ತಾ ಹೈಕೋರ್ಟ್ನ ವಕೀಲರೂ ಪ್ರತಿಭಟನೆಗೆ ಧುಮುಕಿದ್ದಾರೆ.
ಸಿಬಿಐ ವಿರುದ್ಧ ಪಶ್ಚಿಮ ಬಂಗಾಲ ಸರಕಾರ ಕಿಡಿ
ಟ್ರೈನಿ ವೈದ್ಯೆ ಕೊಲೆ ಸಂಬಂಧ ರಾಜ್ಯ ಸರಕಾರವನ್ನು ದೂಷಿಸಿ, ಸುಳ್ಳು ಮಾಹಿತಿಗಳನ್ನು ಬಿಜೆಪಿ ಹಬ್ಬಿ ಸಿದೆ. ಪ್ರಕರಣ ಹಸ್ತಾಂತರಿಸಿ 5 ದಿನವಾದರೂ ಸಿಬಿಐ ಒಂದೇ ಒಂದು ತನಿಖಾ ವರದಿ ನೀಡದೇ ಸರಕಾರ ದೂಷಿಸಲು ಬಿಜೆಪಿಗೆ ಅವಕಾಶ ಮಾಡಿಕೊಟ್ಟು ಕೈಕಟ್ಟಿ ನಿಂತಿದೆ ಎಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Test Cricket : ಮೆಂಡಿಸ್ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.