![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 19, 2021, 7:45 PM IST
ಕಲ್ಲಿಕೋಟೆ: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕಾಗಿ ಕಿಡಿಗೇಡಿ ಹಚ್ಚಿದ್ದ ಬೆಂಕಿಯಿಂದ ಶೇ.98ರಷ್ಟು ಸುಟ್ಟ ಗಾಯಗಳಾಗಿದ್ದ ಕೃಷ್ಣಪ್ರಿಯಾ (22) ಎಂಬ ಯುವತಿ ಅಸುನೀಗಿದ್ದಾಳೆ. ಈ ಕುಕೃತ್ಯವೆಸಗಿದ ನಂದನ್ ಕುಮಾರ್ (26) ಎಂಬಾತ ಕೂಡ ಬೆಂಕಿ ಹಚ್ಚಿಕೊಂಡು, ಗಾಯಗೊಂಡು ಸಾವಿಗೀಡಾಗಿದ್ದಾನೆ.
ಕಲ್ಲಿಕೋಟೆ ಜಿಲ್ಲೆಯ ಥಿಕ್ಕೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣಪ್ರಿಯಾ ಎಂಬ ಯುವತಿ ವಾರದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ಅಲ್ಲಿ ನೌಕರನಾಗಿದ್ದ ನಂದನ್ ಕುಮಾರ್ ಎಂಬಾತ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ. ಆತ ಕೃಷ್ಣಪ್ರಿಯಾಳನ್ನು ಮದುವೆಯಾಗುವ ಬೇಡಿಕೆ ಇರಿಸಿದ್ದ. ಆದರೆ, ಆಕೆ ಅದನ್ನು ತಿರಸ್ಕರಿಸಿದ್ದ ಕಾರಣ ಶುಕ್ರವಾರ ಮಾತನಾಡಲೆಂದು ಆಕೆಯನ್ನು ಕರೆದಿದ್ದ. ಈ ಸಂದರ್ಭದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ.
ಇದನ್ನೂ ಓದಿ:ಮಾಜಿ ಸಚಿವ ಅನ್ಸಾರಿ ಜಾತಿ ಜಗಳ ಹಚ್ಚಲು ಷಡ್ಯಂತ್ರ ನಡೆಸಿದ್ದಾರೆ: ಯಮನೂರ ಚೌಡ್ಕಿ
ಸುಟ್ಟಗಾಯಗಳಿಂದ ನರಳುತ್ತಿದ್ದ ಇಬ್ಬರನ್ನೂ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರಿಗೆ ಯುವತಿ ನೀಡಿದ ಮಾಹಿತಿಯಲ್ಲಿ ನಂದಕುಮಾರ್ ಚೂರಿಯಿಂದ ಇರಿದಿದ್ದ ಘಟನೆ ವಿವರಿಸಿದ್ದಳು.
ಪೊಲೀಸರು ಕೇಸುದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.