![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 15, 2017, 9:45 AM IST
ಹೊಸದಿಲ್ಲಿ: ಬರೋಬ್ಬರಿ 18 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ಯಲ್ಲಿ ಭಾರತ -ಪಾಕಿಸ್ಥಾನ ಸೋಮವಾರ ಮುಖಾಮುಖೀಯಾಗಲಿವೆ. ಗೂಢಚಾರಿಕೆ ಆರೋಪದ ಮೇಲೆ ಜಾಧವ್ ಅವರಿಗೆ ಪಾಕ್ ಸೇನಾ ಕೋರ್ಟು ಗಲ್ಲುಶಿಕ್ಷೆ ವಿಧಿಸಿದ್ದು, ಈ ವಿರುದ್ಧ ಭಾರತ ಮಧ್ಯಪ್ರವೇಶಿಸುವಂತೆ ಕೋರ್ಟ್ ಮೆಟ್ಟಿಲೇರಿತ್ತು. ಪರಿಣಾಮ ಪಾಕ್ ಯತ್ನಕ್ಕೆ ತಡೆಯಾಜ್ಞೆ ನೀಡಲಾಗಿತ್ತು.
18 ವರ್ಷಗಳ ಹಿಂದೆ ಪಾಕ್, ತನ್ನ ನೌಕಾ ಪಡೆ ಯುದ್ಧವಿಮಾನವನ್ನು ಭಾರತ ಹೊಡೆದುರುಳಿಸಿದ್ದರ ವಿರುದ್ಧ ಇದೇ ಕೋರ್ಟ್ಗೆ ದೂರು ಕೊಂಡೊಯ್ದಿತ್ತು. ಆದರೆ ಆ ಯತ್ನದಲ್ಲಿ ಭಾರತ ವಿರುದ್ಧ ತೀರ್ಪು ಬಂದಿತ್ತು. ನೆದರ್ಲೆಂಡ್ನ ಹೇಗ್ನಲ್ಲಿ ಐಸಿಜೆ ನ್ಯಾಯಾಲಯವಿದ್ದು, ಅಲ್ಲಿ ಮುಕ್ತ ವಿಚಾರಣೆ ನಡೆಸಲಿದೆ. ಎರಡೂ ರಾಷ್ಟ್ರಗಳ ನ್ಯಾಯವಾದಿಗಳು ಹಾಜರಿರುವಂತೆ ಹೇಳಲಾಗಿದೆ. ಭಾರತದ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡನೆ ಮಾಡಲಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.