![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 18, 2023, 6:21 PM IST
ಪಣಜಿ: “ದಕ್ಷಿಣ ಗೋವಾದ ಕರಾವಳಿ ಪ್ರದೇಶಗಳಲ್ಲಿನ ಪ್ರವಾಸೋದ್ಯಮ ಉದ್ಯಮವು ಗೋವಾದ ಮೋಪಾ ವಿಮಾನ ನಿಲ್ದಾಣ ಆರಂಭಗೊಂಡಿದ್ದರಿಂದ ಪ್ರವಾಸಿಗರ ಕೊರತೆ ಅನುಭವಿಸುವಂತಾಗಿದೆ. ಇಷ್ಟೇ ಅಲ್ಲದೆಯೇ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅನೇಕ ವಿಮಾನಗಳನ್ನು ಮೋಪಾ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗುತ್ತಿದೆ ಇದರಿಂದಾಗಿ ದಕ್ಷಿಣ ಗೋವಾ ಪ್ರವಾಸೋದ್ಯಮವು ಪ್ರವಾಸಿಗರ ಕೊರತೆ ಅನುಭವಿಸುವಂತಾಗಿದೆ ಎಂದು ಅಖಿಲ ಗೋವಾ ಶಾಕ್ (ಬಾರ್ ಮತ್ತು ರೆಸ್ಟೊರೆಂಟ್) ಮಾಲಕರ ಸಂಘದ ಅಧ್ಯಕ್ಷ ಕ್ರೂಜ್ ಫರ್ನಾಂಡಿಸ್ ಹೇಳಿದ್ದಾರೆ.
ದೇಶಿ ಮತ್ತು ವಿದೇಶಿ ಪ್ರವಾಸಿಗರ ಆಗಮನದ ಕೊರತೆಯಿಂದಾಗಿ ಪ್ರಸಕ್ತ ಪ್ರವಾಸಿ ಋತುವಿನಲ್ಲಿ ದಕ್ಷಿಣ ಗೋವಾದ ಬೀಚ್ಗಳಲ್ಲಿ ಸ್ಥಾಪಿಸಲಾಗಿರುವ ಶಾಕ್ಗಳನ್ನು ಮುಚ್ಚುವ ಸಮಯ ಬಂದಿದೆ ಎಂದು ಕ್ರೂಜ್ ಫರ್ನಾಂಡಿಸ್ ಹೇಳಿದರು. ಮೊಪಾ ವಿಮಾನ ನಿಲ್ದಾಣ ಸ್ಥಾಪನೆಗೂ ಮೊದಲು ದಕ್ಷಿಣ ಗೋವಾದ ಕಡಲತೀರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು ಎಂದು ಅವರು ಹೇಳಿದರು.
ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಪ್ರವಾಸಿಗರು ನೇರವಾಗಿ ದಕ್ಷಿಣ ಗೋವಾವನ್ನು ಪ್ರವೇಶಿಸಬೇಕು. ಆದರೆ ಈಗ, ದಾಬೋಲಿಮ್ಗೆ ಬರುವ ಅನೇಕ ವಿಮಾನಗಳು ಮೋಪಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿವೆ. ಕೆಲವು ವಿಮಾನಯಾನ ಸಂಸ್ಥೆಗಳು ಪ್ರವಾಸಿಗರನ್ನು ಮೋಪಾ ವಿಮಾನ ನಿಲ್ದಾಣದಲ್ಲಿ ಇಳಿಸುವಂತೆ ಒತ್ತಾಯಿಸುತ್ತವೆ. ಇದರಿಂದ ನಮ್ಮ ವ್ಯಾಪಾರ ಕುಸಿದಿದೆ. ಆದ್ದರಿಂದ ಮೊಬೋರ್ನಲ್ಲಿನ ಈ ವರ್ಷ ಶಾಕ್ ಅನ್ನು ಪ್ರವಾಸಿಗರ ಕೊರತೆಯಿಂದ ತೆಗೆದುಹಾಕುವ ಸಮಯ ಬಂದಿದೆ ಎಂದರು.
ಪ್ರವಾಸಿಗರ ಕೊರತೆಯಿಂದ ಹೋಟೆಲ್ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ಬಾಣಾವಲಿಯ ನಿವಾಸಿ ಹೋಟೆಲ್ ಉದ್ಯಮಿಯೊಬ್ಬರು ಪ್ರತಿಕ್ರಿಯೆ ನೀಡಿ, ಗೋವಾದಲ್ಲಿ ದಬೋಲಿಮ್ ವಿಮಾನ ನಿಲ್ದಾಣದ ಮೂಲಕ ಪ್ರವಾಸಿಗರು ಹೆಚ್ಚಾಗಿ ದಕ್ಷಿಣ ಗೋವಾದ ಹೋಟೆಲ್ಗೆ ಅನೇಕ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಬರುತ್ತಿದ್ದರು. ಆದರೆ ಈಗ ಹಾಗಲ್ಲ. ಮೊಪಾ ವಿಮಾನ ನಿಲ್ದಾಣ ಆರಂಭವಾದ ಬಳಿಕ ದಕ್ಷಿಣ ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಉತ್ತರ ಗೋವಾ ಕಡೆಗೆ ಮುಖ ಮಾಡಿದ್ದಾರೆ ಎಂದರು.
ಶಾಕ್ ಪ್ರೊಫೆಷನಲ್, ಬೇಟಾಲ್ಭಟಿಯ ಇನಾಸಿಯೋ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿ- ಕಳೆದ ನಾಲ್ಕೈದು ವರ್ಷಗಳ ಹಿಂದೆ ದಕ್ಷಿಣ ಗೋವಾದಲ್ಲಿ ದೇಶ-ವಿದೇಶಿ ಪ್ರವಾಸಿಗರ ಭರಾಟೆ ಹೆಚ್ಚಾಗಿ ಇತ್ತು. ಮಧ್ಯದ ಮೂರು ವರ್ಷಗಳು ಕೋವಿಡ್ ಕಾರಣದಿಂದಾಗಿ ವ್ಯರ್ಥವಾಯಿತು ಪ್ರಸ್ತುತ, ಚಾರ್ಟರ್ ಫ್ಲೈಟ್ಗಳು ಅಪರೂಪವಾಗಿದ್ದು, ಅವು ಮೊಪಾ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತವೆ.ಎ 15 ರ ಹೊತ್ತಿಗೆ, ವ್ಯಾಪಾರವು ಸ್ವಲ್ಪಮಟ್ಟಿಗೆ ಉತ್ತಮವಾಗಿತ್ತು. ಆದರೆ ಈಗ ದಕ್ಷಿಣ ಗೋವಾದಲ್ಲಿ ಪ್ರವಾಸಿಗರ ಕೊರತೆ ಎದ್ದು ಕಾಣುವಂತಾಗಿದೆ.
ಶಾಕ್ ಮಾಲಕರಾದ ಡಿಯಾಗೊ ಡಿಸಿಲ್ವಾ ಪ್ರತಿಕ್ರಿಯೆ ನೀಡಿ, ಪ್ರವಾಸಿಗರ ಕೊರತೆಯಿಂದಾಗಿ ಕೊಲ್ವಾ ಕಡಲತೀರದ ನನ್ನ ಶಾಕ್ ಛತ್ರವನ್ನು ಈಸ್ಟರ್ ಮೊದಲು ತೆಗೆದುಹಾಕಲಾಯಿತು. ಮೊದಲು, ಚಾರ್ಟರ್ ಫ್ಲೈಟ್ಗಳು ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದವು ಮತ್ತು ಅನೇಕ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಆದರೆ ಸದ್ಯ ಪ್ರವಾಸಿಗರು ಉತ್ತರ ಗೋವಾದ ಪ್ರವಾಸಿ ತಾಣಗಳತ್ತ ಮುಖ ಮಾಡಿರುವುದರಿಂದ ಪ್ರವಾಸಿಗರ ಕೊರತೆಯಿಂದಾಗಿ ನಾನು ನಡೆಸುತ್ತಿದ್ದ ಶಾಕ್ ಬಂದ್ ಮಾಡಬೇಕಾಯಿತು ಎಂದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.