![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 24, 2019, 12:09 PM IST
ಪಟ್ನಾ : ಬಿಹಾರದ ಮಾಜೀ ಮುಖ್ಯಮಂತ್ರಿ ಮತ್ತು ಆರ್.ಜೆ.ಡಿ. ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಲಾಲೂ ಪುತ್ರ ಹಿಂದೂ ದೇವರುಗಳ ರೀತಿಯಲ್ಲಿ ವೇಷಭೂಷಣವನ್ನು ತೊಟ್ಟುಕೊಂಡು ಮಂದಿರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಹಲವು ಬಾರಿ ಸುದ್ದಿಯಾಗಿದ್ದರು.
ಈ ಬಾರಿ ತೇಜ್ ಪ್ರತಾಪ್ ಅವರು ಶಿವನ ರೂಪದಲ್ಲಿ ಪಾಟ್ನಾದಲ್ಲಿರುವ ದೇವಸ್ಥಾನ ಒಂದಕ್ಕೆ ತೆರಳಿ ಪೂಜೆ ಸಲ್ಲಿಸಿರುವುದಾಗಿ ವರದಿಯಾಗಿದೆ. ಇದು ಸಾವನ್ ಮಾಸವಾಗಿದ್ದು ಈ ಸಮಯದಲ್ಲಿ ಉತ್ತರ ಭಾರತದಾದ್ಯಂತ ವಿಶೇಷವಾಗಿ ಶಿವನ ಆರಾಧನೆಯನ್ನು ನಡೆಸಲಾಗುತ್ತದೆ. ಮತ್ತು ಈ ಮಾಸದಲ್ಲಿ ಕನ್ವಾರಿಯಾಗಳು ಗಂಗಾ ನದಿಯಿಂದ ಪವಿತ್ರ ಜಲವನ್ನು ತಂದು ಅದನ್ನು ಶಿವಲಿಂಗಕ್ಕೆ ಅಭಿಷೇಕ ನಡೆಸುತ್ತಾರೆ.
ಬಿಹಾರದಲ್ಲಿ ಕನ್ವಾರಿಯಾಗಳು ಸುಲ್ತಾನ್ ಗಂಜ್ ನಿಂದ ಗಂಗಾ ಜಲವನ್ನು ಹಿಡಿದುಕೊಂಡು ಜಾರ್ಖಂಡ್ ನ ಧಿಯೋಘರ್ ಗೆ ಯಾತ್ರೆ ನಡೆಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಶಿವ ಭಕ್ತನಾಗಿರುವ ತೇಜ್ ಪ್ರತಾಪ್ ಅವರು ಈ ಬಾರಿ ಯಾತ್ರೆಗೆ ಹೊರಡುತ್ತಾರೆಯೇ ಎಂಬ ಸಂಶಯವೂ ಇದೀಗ ಎದ್ದಿದೆ.
ಬಿಳಿ ದೋತಿ, ಹುಲಿ ಚರ್ಮದ ವಿನ್ಯಾಸದ ಸೊಂಟ ಪಟ್ಟಿ, ಹಣೆ ಮತ್ತು ಕೈಗಳಿಗೆ ಮೆತ್ತಿದ ವಿಭೂತಿ ಮತ್ತು ಕೊರಳಲ್ಲಿ ರುದ್ರಾಕ್ಷಿ ಮಾಲೆ, ಈ ರೀತಿಯಾಗಿ ತನ್ನನ್ನು ತಾನು ಭಗವಾನ್ ಶಿವನಂತೆ ಅಲಂಕರಿಸಿಕೊಂಡು ತೇಜ್ ಪ್ರತಾಪ್ ಅವರು ದೇವಾಲಯಕ್ಕೆ ಬಂದಿದ್ದರು.
ಈ ಹಿಂದೆಯೂ ಸಹ ಹಲವಾರು ಬಾರಿ ತೇಜ್ ಪ್ರತಾಪ್ ಅವರು ಹಿಂದೂ ದೇವತೆಗಳ ವೇಷವನ್ನು ಧರಿಸಿಕೊಂಡಿದ್ದರು. 2018ರ ಆಗಸ್ಟ್ 4ರಂದು ತೇಜ್ ಪ್ರತಾಪ್ ಅವರು ಮಹಾದೇವನ ವೇಷದಲ್ಲಿ ಧ್ಯಾನ ಮಾಡುತ್ತಿರುವ ಫೊಟೋವನ್ನು ಟ್ವೀಟ್ ಮಾಡಿದ್ದರು. 2017ರಲ್ಲಿ ಹೊಸ ವರ್ಷದ ಸ್ವಾಗತಕ್ಕಾಗಿ ತೇಜ್ ಪ್ರತಾಪ್ ಅವರು ಕೃಷ್ಣನ ವೇಷವನ್ನು ಧರಿಸಿಕೊಂಡಿದ್ದು ಸುದ್ದಿಯಾಗಿತ್ತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.