![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 24, 2022, 4:19 PM IST
ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣವು ಥಾಣೆಯಲ್ಲಿ ‘ದೀಪಾವಳಿ ಪಹತ್’ ಕಾರ್ಯಕ್ರಮವನ್ನು ಆಯೋಜಿಸಿದೆ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ‘ಭಾರತ-ಪಾಕಿಸ್ತಾನದಂತೆಯೇ ನಾವು ಕೂಡ ಮೂರೂವರೆ ತಿಂಗಳ ಹಿಂದೆ ಪಂದ್ಯವನ್ನು ಆಡಿದ್ದೇವೆ. ಅದರಲ್ಲಿ ನಾವು ಗೆದ್ದಿದ್ದೇವೆ ಎಂದರು.
ದೀಪಾವಳಿಯ ದಿನದಂದು ಭಾರತವು ಪಾಕಿಸ್ತಾನದ ವಿರುದ್ಧ ಗೆದ್ದ ಪಂದ್ಯವನ್ನು ನಾವು ಇಂದು ಆಚರಿಸುತ್ತಿದ್ದೇವೆ. ನಿನ್ನೆ ಮ್ಯಾಚ್ ಗೆದ್ದಂತೆ ನಮ್ಮ ‘ಬಾಳಾಸಾಹೇಬರ ಶಿವಸೇನೆ’ ಮೂರೂವರೆ ತಿಂಗಳ ಹಿಂದೆ ಇದೇ ಮ್ಯಾಚ್ ಆಡಿ ಗೆದ್ದಿತ್ತು. ಆ ಪಂದ್ಯವನ್ನು ಮಹಾರಾಷ್ಟ್ರ ಮಾತ್ರವಲ್ಲದೇ ಇಡೀ ದೇಶ ನೋಡಿದೆ. ಜನರನ್ನು ಒಗ್ಗೂಡಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಮೊದಲು ನಮ್ಮ ಸಂಪ್ರದಾಯ, ಸಂಸ್ಕೃತಿ, ಹಬ್ಬ ಹರಿದಿನಗಳನ್ನು ಆಚರಿಸಲು ಅನುಮತಿ ನೀಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ಕೊರಗಜ್ಜನ ಮಹಿಮೆಯಿಂದ ಜೀವ ಹೋಗುವ ಸ್ಥಿತಿಯಲ್ಲಿದ್ದ ಮಗು ಬದುಕಿ ಬಂತು; ಉಡುಪಿಯಲ್ಲೊಂದು ಪವಾಡ
ಸ್ಪಷ್ಟವಾಗಿ ಹೇಳುವುದಾದರೆ, ಅಭಿವೃದ್ಧಿಯ ಜೊತೆಗೆ ಈ ವಿಷಯಗಳು ಅವಶ್ಯಕ. ಮನುಷ್ಯನ ಮನಸ್ಸು ಖುಷಿಯಾಗಿದ್ದರೆ ಮುಂದೆ ಸಾಗಬಹುದು. ಈ ರಾಜ್ಯದಲ್ಲಿ ಈಗ ಪರಿವರ್ತನೆಯ ಪರ್ವ ಆರಂಭವಾಗಿದೆ. ಇಂದು ನಾನು ಹೋದಲ್ಲೆಲ್ಲಾ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಈ ವಿಷಯಗಳು ನನಗೆ ತೃಪ್ತಿ ಮತ್ತು ಸಂತೋಷವನ್ನು ಉಂಟು ಮಾಡುತ್ತವೆ. ಇದರ ಫಲಿತಾಂಶ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಂಡುಬಂದಿದೆ ಎಂದು ಮಹಾ ಸಿಎಂ ಶಿಂಧೆ ಹೇಳಿದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.