![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 24, 2022, 2:57 PM IST
ಸಾಂದರ್ಭಿಕ ಚಿತ್ರ ಮಾತ್ರ
ಅಮ್ರೇಲಿ : ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ಶನಿವಾರ ಸಂಜೆ 18 ವರ್ಷದ ಕೃಷಿ ಕಾರ್ಮಿಕನನ್ನು ಸಿಂಹವೊಂದು ಕೊಂದು ಹಾಕಿದೆ ಎಂದು ಅರಣ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ನರಭಕ್ಷಕ, ಸುಮಾರು ಎಂಟು ವರ್ಷ ವಯಸ್ಸಿನ ಏಷ್ಯಾಟಿಕ್ ಸಿಂಹವನ್ನು ವ್ಯಾಪಕ ಪ್ರಯತ್ನಗಳ ನಂತರ ಭಾನುವಾರ ನಸುಕಿನಲ್ಲಿ ಹಿಡಿಯಲಾಯಿತು ಮತ್ತು ರಕ್ಷಣಾ ಕೇಂದ್ರಕ್ಕೆ ಕೊಂಡೊಯ್ಯಲಾಯಿತು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜ್ದೀಪ್ಸಿಂಗ್ ಝಾಲಾ ಹೇಳಿದರು.
ಮಧ್ಯಪ್ರದೇಶ ಮೂಲದ ಭೈದೇಶ್ ಪಯರ್ ಅವರು ಕೆಲಸದಿಂದ ತುಳಸಿಶ್ಯಾಮ್ ವ್ಯಾಪ್ತಿಯ ಅರಣ್ಯ ಪ್ರದೇಶದ ನಾನಿಧಾರಿ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಸಿಂಹ ದಾಳಿ ಮಾಡಿ ಎಳೆದೊಯ್ದಿದೆ. ಸ್ಥಳೀಯರು ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ತಂಡವು ಧಾವಿಸಿ ಬಲಿಪಶುವಿನ ಅವಶೇಷಗಳನ್ನು ಪತ್ತೆ ಮಾಡಿದೆ. ಕೂಡಲೇ ಸಿಂಹವನ್ನು ಹಿಡಿಯಲು ಪ್ರಯತ್ನಿಸಲಾಯಿತು ಎಂದು ಅಧಿಕಾರಿ ಹೇಳಿದರು.
ಟ್ರ್ಯಾಂಕ್ವಿಲೈಸರ್ ಗನ್ ಬಳಸಿ ಸಿಂಹವನ್ನು ಸೆರೆಹಿಡಿದು ಧಾರಿ ಪ್ರದೇಶದಲ್ಲಿರುವ ರಕ್ಷಣಾ ಕೇಂದ್ರಕ್ಕೆ ಕೊಂಡೊಯ್ಯಲಾಯಿತು ಎಂದು ಅವರು ಹೇಳಿದರು.
ಏಷ್ಯಾಟಿಕ್ ಸಿಂಹಗಳು ಗಿರ್ ಅರಣ್ಯ ಸೇರಿದಂತೆ ಗುಜರಾತ್ನ ಸೌರಾಷ್ಟ್ರ ಪ್ರದೇಶದ ಭಾಗಗಳಲ್ಲಿ ಕಂಡುಬರುತ್ತವೆ.ಜೂನ್ 2020 ರ ಜನಗಣತಿಯ ಪ್ರಕಾರ, ಗಿರ್ ಅರಣ್ಯ ಪ್ರದೇಶದಲ್ಲಿ 674 ಸಿಂಹಗಳಿವೆ, ಇದು 2015 ರಲ್ಲಿ ದಾಖಲಾದ 523 ರ ಸಂಖ್ಯೆಗಿಂತ ಹೆಚ್ಚಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.