![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jul 3, 2024, 5:45 AM IST
ಹೊಸದಿಲ್ಲಿ: ವಿಪಕ್ಷ ನಾಯಕನಾಗಿ ಲೋಕ ಸಭೆಯಲ್ಲಿ ರಾಹುಲ್ ಗಾಂಧಿ ಸೋಮವಾರ ಮಾಡಿದ ಚೊಚ್ಚಲ ಭಾಷಣದ ಹಲವು ಭಾಗಗಳಿಗೆ ಕತ್ತರಿ ಪ್ರಯೋಗ ಮಾಡ ಲಾಗಿದೆ. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ರಾಹುಲ್ ಮಾಡಿದ ಭಾಷಣದಲ್ಲಿ 18 ವಿಚಾರಗಳನ್ನು ಕಡತ ದಿಂದ ತೆಗೆದುಹಾಕಲಾಗಿದೆ. ಈ ಪೈಕಿ ಬಹುತೇಕ ಹೇಳಿಕೆಗಳು ಪ್ರಧಾನಿ ಮೋದಿ ಮತ್ತು ಅದಾನಿ ಅವರಿಗೆ ಸಂಬಂಧಿಸಿದ್ದು ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, “ನಾನು ಏನನ್ನು ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ ಮತ್ತು ಸತ್ಯವನ್ನೇ ಹೇಳಿದ್ದೇನೆ. ಅವರಿಗೆ ಇಷ್ಟ ಬಂದಷ್ಟನ್ನು ಅವರು ಕಡತದಿಂದ ತೆಗೆದುಹಾಕಲಿ. ಏನೇ ಆದರೂ ಕೊನೆಗೆ ಜಯ ಸಿಗುವುದು ಸತ್ಯಕ್ಕೆ’ ಎಂದಿದ್ದಾರೆ. ಅಲ್ಲದೆ “ಮೋದಿಯವರ ಜಗತ್ತಿನಲ್ಲಿ ಸತ್ಯವನ್ನು ತೆಗೆದುಹಾಕಬಹುದು. ಆದರೆ ವಾಸ್ತವದಲ್ಲಿ ಸತ್ಯವನ್ನು ತೆಗೆದುಹಾಕಲು ಸಾಧ್ಯವಿಲ್ಲ’ ಎಂದಿದ್ದಾರೆ.
ಸ್ಪೀಕರ್ಗೆ ರಾಗಾ ಪತ್ರ: ಜತೆಗೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ತಮ್ಮ ಭಾಷಣದ ಭಾಗಗಳನ್ನು ತೆಗೆದುಹಾಕಿರುವ ನಡೆಯು ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ಅವುಗಳನ್ನು ಮತ್ತೆ ಕಡತಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಆರೋಪಗಳೇ ತುಂಬಿದ್ದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಭಾಷಣವನ್ನೇಕೆ ತೆಗೆದುಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಖರ್ಗೆ ಭಾಷಣಕ್ಕೂ ಕತ್ತರಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ್ದ ಭಾಷಣದಲ್ಲೂ 6 ವಿಚಾರಗಳನ್ನು ಕಡತದಿಂದ ತೆಗೆದುಹಾಕಲಾಗಿದೆ.
ಯಾವ ವಿಚಾರಗಳಿಗೆ ಕತ್ತರಿ?
ನೀಟ್ ಪರೀಕ್ಷೆ ಶ್ರೀಮಂತರಿಗೆಂದೇ ಮಾಡಿದ್ದು, ಪ್ರತಿಭಾವಂತರಿಗೆ ಇಲ್ಲಿ ಜಾಗವಿಲ್ಲ.
ಅಗ್ನಿವೀರ್ ಯೋಜನೆ ಭಾರತೀಯ ಸೇನೆಯದ್ದಲ್ಲ, ಬದಲಿಗೆ ಪ್ರಧಾನಿ ಕಾರ್ಯಾಲಯದ್ದು
ಬಿಜೆಪಿಯು ಅಲ್ಪಸಂಖ್ಯಾಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ
ಅದಾನಿ, ಅಂಬಾನಿ ಕುರಿತ ಪ್ರಸ್ತಾವ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.