![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 5, 2020, 8:29 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ತಿರುಪತಿ: ಲಾಕ್ಡೌನ್ನಿಂದಾಗಿ ಬಂದ್ ಆಗಿದ್ದ ವಿಶ್ವಪ್ರಸಿದ್ಧ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನ ಶನಿವಾರದಿಂದ ತೆರೆದುಕೊಳ್ಳಲಿದೆ.
ಬೆಳಗ್ಗೆ 6.30ರಿಂದ ರಾತ್ರಿ 7.30ರವರೆಗೆ 3 ಸಾವಿರ ಆನ್ಲೈನ್ ಟಿಕೆಟ್ಗಳೂ ಸೇರಿದಂತೆ ಭಕ್ತರ ದರ್ಶನಕ್ಕೆ ಅವಕಾಶ ಸಿಗಲಿದೆ.
ಒಂದು ಗಂಟೆಗೆ 500 ಭಕ್ತರ ದರ್ಶನಕ್ಕೆ ದೇಗುಲದೊಳಕ್ಕೆ ಪ್ರವೇಶ ಮಾಡಿ ಕೊಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ (ಟಿಟಿಡಿ) ಮುಖ್ಯಸ್ಥ ವೈ.ವಿ. ಸುಬ್ಟಾ ರೆಡ್ಡಿ ಹೇಳಿದ್ದಾರೆ.
ದೇಗುಲದೊಳಗೆ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.
ನಿತ್ಯ 3 ಸಾವಿರ ಮಂದಿ ಭಕ್ತರು ಬೆಟ್ಟ ಹತ್ತಲು ಅನುವು ಮಾಡಿಕೊಡಲಾಗುವುದು. ಬೆಟ್ಟವೇರಿದ ಬಳಿಕ ಅವರಿಗೆ ಜ್ವರ ತಪಾಸಣೆ ಇತ್ಯಾದಿ ನಡೆಯಲಿವೆ. ದೇಗುಲ ಪ್ರವೇಶಿಸುವ ಭಕ್ತರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತದೆ.
ದೇಗುಲಕ್ಕೆ ಆಗಮಿಸುವ ಭಕ್ತರ ಗಂಟಲು ದ್ರವವನ್ನು ಸ್ವಯಂಪ್ರೇರಿತವಾಗಿ ಯಾದೃಚ್ಛಿಕ ವಿಧಾನದಲ್ಲಿ ಪಡೆದು ಕೋವಿಡ್ ಪರೀಕ್ಷೆಗೆ ಕಳುಹಿಸಲು ಉದ್ದೇಶಿಸಲಾಗಿದೆ.
ಶನಿವಾರದಂದು ದೇಗುಲ ತೆರೆದರೂ ಆರಂಭದಲ್ಲಿ ಟಿಟಿಡಿ ಸಿಬಂದಿಗೆ ಮಾತ್ರ ದೇಗುಲಕ್ಕೆ ಪ್ರವೇಶವಿರಲಿದೆ. ಈ ವೇಳೆ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಪರಿಶೀಲನೆ ನಡೆಯಲಿದೆ. ಜೂ.8 ಮತ್ತು 9ರಂದು ತಿರುಪತಿ ನಿವಾಸಿಗಳಿಗೆ ಮಾತ್ರ ಅವಕಾಶ ಇರಲಿದೆ. ಜೂ.11ರ ಬಳಿಕ ರಾಜ್ಯದ ಭಕ್ತರಿಗೆ ಅವಕಾಶವಿರಲಿದೆ.
ಜೂ.8ರಿಂದ 10ರವರೆಗೆ ಜನಸಂದಣಿ ಸೇರುವಾಗ ಹೇಗಿರುತ್ತದೆ ಎಂಬುದನ್ನು ದೇಗುಲ ಆಡಳಿತ ಗಮನಿಸಲಿದೆ. ಇದರೊಂದಿಗೆ ಹುಂಡಿ ಸಲ್ಲಿಕೆ, ಲಡ್ಡು ಪ್ರಸಾದ ವಿತರಣೆಯಲ್ಲಿನ ವ್ಯವಸ್ಥೆಯ ಬಗ್ಗೆಯೂ ಗಮನವಿಡಲಾಗುವುದು ಎಂದು ದೇಗುಲ ಆಡಳಿತ ಹೇಳಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.