Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Team Udayavani, Oct 26, 2024, 1:25 PM IST
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ (Maharashtra Assembly Election) ಕಾವು ಪಡೆಯುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಅಂತಿಮಗೊಳಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷವು 23 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಪಟ್ಟಿ ಬಿಡುಗಡೆ ಮಾಡಿದೆ.
ಭೂಸಾವಲ್ ಕ್ಷೇತ್ರದಿಂದ ರಾಜೇಶ್ ತುಕಾರಾಂ ಮಾನ್ವಟ್ಕರ್, ಜಲಗಾಂವ್ (ಜಾಮೋದ್) ನಿಂದ ಸ್ವಾತಿ ಸಂದೀಪ್ ವಾಕೇಕರ್, ಅಕೋಟ್ನಿಂದ ಮಹೇಶ್ ಗಂಗನೆ, ವಾರ್ಧಾದಿಂದ ಶೇಖರ್ ಪ್ರಮೋದಬಾಬು ಶೆಂಡೆ, ಸಾವ್ನರ್ನಿಂದ ಅನುಜಾ ಸುನೀಲ್ ಕೇದಾರ್, ನಾಗ್ಪುರ ದಕ್ಷಿಣದಿಂದ ಗಿರೀಶ್ ಕೃಷ್ಣರಾವ್ ಪಾಂಡವ್, ಕಮ್ತಿಯಿಂದ ಸುರೇಶ್ ಯಾದವರಾವ್ ಭೋಯರ್, ಭಂಡಾರಾ ಕ್ಷೇತ್ರದಿಂದ ಪೂಜಾ ಗಣೇಶ್ ಥಾವ್ಕರ್, ಅರ್ಜುನಿ-ಮೋರ್ಗಾಂವ್ ಕ್ಷೇತ್ರದಿಂದ ದಲೀಪ್ ವಾಮನ್ ಬನ್ಸೋಡ್ ಅವರನ್ನು ಕಣಕ್ಕಿಳಿಸಿದೆ.
Congress releases another list of 23 candidates for the upcoming #MaharashtraAssemblyElections2024 pic.twitter.com/Cs0cthvcfD
— ANI (@ANI) October 26, 2024
ಅಮ್ಗಾಂವ್ ನಿಂದ ರಾಜ್ಕುಮಾರ್ ಲೋಟುಜಿ ಪುರಂ, ರಾಳೇಗಾಂವ್ನಿಂದ ವಸಂತ ಚಿಂದೂಜಿ ಪುರ್ಕೆ, ಯವತ್ಮಾಲ್ನಿಂದ ಬಾಳಾಸಾಹೇಬ್ ಶಂಕರರಾವ್ ಮಂಗೂಲ್ಕರ್, ಅಮಿಯಿಂದ ಜಿತೇಂದ್ರ ಶಿವಾಜಿರಾವ್ ಮೋಘೆ, ಉಮರ್ಖೇಡ್ನಿಂದ ಸಾಹೇಬರಾವ್ ದತ್ತರಾವ್ ಕಾಂಬಳೆ, ಉಮರ್ಖೇಡ್ ನಿಂದ ಸಾಹೇಬರಾವ್ ದತ್ತರಾವ್ ಕಾಂಬಳೆ, ಜಲ್ನಾದಿಂದ ಕಾಲಿಯಾಸ್ ಕಿಸನ್ರಾವ್ ಗೊರ್ತಂಟ್ಯಾಲ್, ಔರಂಗಾಬಾದ್ ಪೂರ್ವ ಕ್ಷೇತ್ರದಿಂದ ಮಧುಕರ್ ಕೃಷ್ಣರಾವ್ ದೇಶಮುಖ್ ಅವರಿಗೆ ಟಿಕೆಟ್ ನೀಡಲಾಗಿದೆ.
ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ 288 ಕ್ಷೇತ್ರಗಳಿಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ
Wooden Block: ರೈಲು ಹಳಿ ಮೇಲೆ ಮರದ ದಿಮ್ಮಿ ಇಟ್ಟು ದುಷ್ಕೃತ್ಯ… ತಪ್ಪಿದ ದುರಂತ
Lady don: ದೆಹಲಿಯ ಬರ್ಗರ್ ಕಿಂಗ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಲೇಡಿ ಡಾನ್ ಅರೆಸ್ಟ್
Ratan Tata; ಅಡುಗೆಯವರು, ನಾಯಿಗೂ ವಿಲ್ ಬರೆದಿರುವ ಟಾಟಾ!
Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ
MUST WATCH
ಹೊಸ ಸೇರ್ಪಡೆ
INDvsNZ: ಪುಣೆಯಲ್ಲಿ ಸ್ಪಿನ್ ಬಲೆಗೆ ಬಿದ್ದ ಭಾರತ; 12 ವರ್ಷಗಳ ಬಳಿಕ ತವರಲ್ಲಿ ಸರಣಿ ಸೋಲು
Sagara: ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ; ಜೆಡಿಎಸ್ ಬೆಂಬಲ
Coldplay, Diljit ಕಾರ್ಯಕ್ರಮದ ನಕಲಿ ಟಿಕೆಟ್ ಮಾರಾಟ: ಬೆಂಗಳೂರು ಸೇರಿ ಹಲವೆಡೆ ಇ.ಡಿ ದಾಳಿ!
Bengaluru: ಕಟ್ಟಡ ಕುಸಿತಕ್ಕೆ ಗುತ್ತಿಗೆದಾರನೂ ಬಲಿ!
Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.