Maharashtra; ಶಾಲೆಗಳಲ್ಲಿ ಮರಾಠಿ ಕಲಿಕೆ ಕಡ್ಡಾಯ!
3 ಮಾದರಿಯ ಮರಾಠಿ ಬೋಧನೆ ಜೂನಿಯರ್ ಕಾಲೇಜುಗಳಲ್ಲೂ ಕಡ್ಡಾಯ ಕಲಿಕೆ
Team Udayavani, Oct 18, 2024, 12:42 AM IST
ಮುಂಬಯಿ: ಮಹಾರಾಷ್ಟ್ರ ಸರಕಾರವು ರಾಜ್ಯದ ಎಲ್ಲ ಶಾಲೆಗಳಲ್ಲಿ ಮರಾಠಿ ಬೋಧನೆ ಮತ್ತು ಕಲಿಕೆಯನ್ನು ಕಡ್ಡಾಯ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಯ ಬಳಿಕ ವಿದ್ಯಾರ್ಥಿಗಳಿಗೆ ತಲಾ 100 ಅಂಕಗಳನ್ನು ಹೊಂದಿರುವ “ವೃತ್ತಿಪರ’, “ಕ್ರಿಯಾತ್ಮಕ’ ಮತ್ತು “ಸಾಮಾನ್ಯ ಮರಾಠಿ’ ಭಾಷೆಯನ್ನು ಕಲಿಸಲು ಶಿಫಾರಸು ಮಾಡಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ರಾಜ್ಯ ಪಠ್ಯಕ್ರಮ ಸಮಿತಿ (ಎಸ್ಸಿಎಫ್-ಎಸ್ಇ)ಗೆ ಶಿಫಾರಸು ಮಾಡಲು ತಜ್ಞರ ಪರಿಶೀಲನ ಸಮಿತಿಯನ್ನು ರಚಿಸಲಾಗಿತ್ತು. ಜೂನಿಯರ್ ಕಾಲೇಜುಗಳಲ್ಲಿ ಮರಾಠಿ ಭಾಷೆ ಕಡ್ಡಾಯದೊಂದಿಗೆ ಕನಿಷ್ಠ ಒಂದು ಮತ್ತು ಗರಿಷ್ಠ ಮೂರು ಭಾಷೆಗಳನ್ನು ಕಲಿಸಬೇಕು ಎಂದು ಶಿಕ್ಷಣ ತಜ್ಞರು ಶಿಫಾರಸು ಮಾಡಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ 11 ಮತ್ತು 12ನೇ ತರಗತಿಗಳಿಗೆ ಮರಾಠಿ ಭಾಷೆ ಕಲಿಕೆಯು ಕಡ್ಡಾಯವಲ್ಲ.
ಯಾವ ರೀತಿಯ ಕಲಿಕೆ?
ಸಮಿತಿಯ ಶಿಫಾರಸುಗಳ ಪ್ರಕಾರ ಮರಾಠಿ ಯನ್ನು ಮಾಧ್ಯಮವಾಗಿ ಕಲಿಯುವವರಿಗೆ ಶಾಲೆಯು “ವೃತ್ತಿಪರ ಮರಾಠಿ’ಯನ್ನು ಕಡ್ಡಾಯ ವಾಗಿ ಬೋಧಿಸಬೇಕು. 10ನೇ ತರಗತಿಯವರೆಗೆ ಮರಾಠಿಯನ್ನು ಅಧ್ಯಯನ ಮಾಡದ ವಿದ್ಯಾರ್ಥಿ ಗಳಿಗೆ “ಕ್ರಿಯಾತ್ಮಾಕ ಮರಾಠಿ’ಯನ್ನು ಪರಿ ಚಯಿಸಬೇಕು. ಮರಾಠಿಯೇತರ ಮಾಧ್ಯಮದ ಶಾಲೆಗಳ ವಿದ್ಯಾರ್ಥಿಗಳು “ಸಾಮಾನ್ಯ ಮರಾಠಿ’ ಕಲಿಯಬೇಕಾಗುತ್ತದೆ.
ರಾಜ್ಯ ಪಠ್ಯಪುಸ್ತಕ ಬ್ಯೂರೋ “ಬಾಲ ಭಾರತಿ’ಯು ವಿವಿಧ ಹಂತದ ವಿದ್ಯಾರ್ಥಿಗಳಿಗಾಗಿ ಸ್ವತಂತ್ರ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸುವಂತೆ ಸಮಿತಿಯು ಶಿಫಾರಸು ಮಾಡಿದೆ.
ಕೆಲವು ಶಾಲೆಗಳಿಗೆ ತೊಂದರೆ
ಸರಕಾರದ ಈ ನಿರ್ಧಾರದಿಂದ ಮರಾಠಿ ಭಾಷೆಯನ್ನು ಐಚ್ಛಿಕವಾಗಿ ಕಲಿಸುತ್ತಿದ್ದ ಜೂನಿಯರ್ ಕಾಲೇಜು ಹಾಗೂ ರಾಜ್ಯ ಪಠ್ಯಕ್ರಮ ಹೊರತುಪಡಿಸಿದ ಮಂಡಳಿಗಳಿಗೆ ತೊಂದರೆ ಎದುರಾಗಲಿದೆ. ಶಾಲೆಗಳಲ್ಲಿ ಮರಾಠಿ ಕಲಿಕೆ ಮತ್ತು ಬೋಧನೆ ಕಡ್ಡಾಯ ಕಾಯ್ದೆ 2020ರಲ್ಲೇ ಅನುಷ್ಠಾನಕ್ಕೆ ಬಂದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಶಾಲಾ ಶಿಕ್ಷಣ ಪಠ್ಯಕ್ರಮ ಕರಡಿನಲ್ಲಿ ಇಂಗ್ಲಿಷ್ ಕಡ್ಡಾಯ ಕಲಿಕೆಗೆ ಕೊಕ್ ನೀಡಿ ಕಡ್ಡಾಯ ಕಲಿಕೆಯ ಭಾಷೆಗಳಲ್ಲಿ ಮರಾಠಿಯನ್ನೂ ಸೇರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಅರಬಿ ಸಮುದ್ರದಲ್ಲಿ ರತನ್ ಟಾಟಾ ಚಿತಾ ಭಸ್ಮ ವಿಸರ್ಜನೆ
Bollywood Actor: ಸಲ್ಮಾನ್ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್: ಪೊಲೀಸ್
By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ
Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್
Direct Tax: ನೇರ ತೆರಿಗೆ ಸಂಗ್ರಹ 19.60 ಲಕ್ಷ ಕೋಟಿ ರೂ.ಗೆ ಏರಿಕೆ: ಕೇಂದ್ರ
MUST WATCH
ಹೊಸ ಸೇರ್ಪಡೆ
Mumbai: ಅರಬಿ ಸಮುದ್ರದಲ್ಲಿ ರತನ್ ಟಾಟಾ ಚಿತಾ ಭಸ್ಮ ವಿಸರ್ಜನೆ
Bollywood Actor: ಸಲ್ಮಾನ್ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್: ಪೊಲೀಸ್
By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ
Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ
Sullia; ಸ್ತ್ರೀಯರ ಬಗ್ಗೆ ತುತ್ಛ ಹೇಳಿಕೆ ಆರೋಪ: ಅರಣ್ಯಾಧಿಕಾರಿ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.