![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Sep 14, 2018, 4:39 PM IST
ಹೊಸದಿಲ್ಲಿ : ಮದ್ಯ ದೊರೆ ವಿಜಯ್ ಮಲ್ಯ ಒಂಬತ್ತು ಸಾವಿರ ಕೋಟಿ ರೂ. ಬ್ಯಾಂಕ್ ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡುವಲ್ಲಿ ಆತನಿಗೆ ಸಿಬಿಐ ನೆರವಾಗಿದೆ ಮತ್ತು ಮಲ್ಯ ವಿರುದ್ಧದ ಲುಕ್ ಔಟ್ ನೊಟೀಸನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅನುಮತಿ ಮೇರೆಗೆ ಬದಲಾಯಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಮಲ್ಯ ಗ್ರೇಟ್ ಎಸ್ಕೇಪ್ಗೆ ಸಿಬಿಐ ನೆರವಾಗಿದೆ; ಆತನನ್ನು ವಶಕ್ಕೆ ತೆಗೆದುಕೊಳ್ಳಿ ಎನ್ನುವ ಲುಕ್ ಔಟ್ ನೊಟೀಸನ್ನು ಪ್ರಧಾನಿ ಮೋದಿ ಸೂಚನೆ ಪ್ರಕಾರ “ಮಾಹಿತಿ ನೀಡಿ’ ಎಂದು ಬದಲಾಯಿಸಲಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
“ಸಿಬಿಐ ನೇರವಾಗಿ ಪ್ರಧಾನಿ ಕೈಕೆಳಗೆ ಕೆಲಸ ಮಾಡುತ್ತದೆ. ಪ್ರಧಾನಿ ಅನುಮತಿ ಇಲ್ಲದೆ ವಿಜಯ್ ಮಲ್ಯ ರಂತಹ ಹೈ ಪ್ರೊಫೈಲ್ ಮತ್ತು ವಿವಾದಾತ್ಮಕ ಕೇಸಿನಲ್ಲಿ ಹೊರಡಿಸಲಾಗಿದ್ದ ಲುಕ್ ಔಟ್ ನೊಟೀಸನ್ನು ಸಿಬಿಐ, ಮೋದಿ ಸೂಚನೆ ಇಲ್ಲದೆ, ಬದಲಾಯಿಸಬಹುದು ಎನ್ನುವುದನ್ನು ಯಾರೂ ಊಹಿಸಲಾರರು’ ಎಂದು ರಾಹುಲ್ ಹೇಳಿದ್ದಾರೆ.
“ವಿಜಯ್ ಮಲ್ಯ ಅವರನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಹೇಳುವ ಲುಕ್ ಔಟ್ ನೊಟೀಸನ್ನು “ಆತನ ಚಲನವಲನಗಳನ್ನು ತಿಳಿಸಿ’ ಎಂಬ ರೀತಿಯಲ್ಲಿ ತಾನು ಬದಲಾಯಿಸಿರುವುದು ತನ್ನ ತೀರ್ಮಾನದಲ್ಲಾಗಿರುವ ಪ್ರಮಾದ ಎಂದು ಸಿಬಿಐ ನಿನ್ನೆ ಗುರುವಾರ ಹೇಳಿತ್ತು. ಮಲ್ಯ ವಿರುದ್ಧ ಮೊದಲ ಎಲ್ಓಸಿಯನ್ನು 2015ರ ಅಕ್ಟೋಬರ್ 12ರಂದು ಹೊರಡಿಸಲಾಗಿತ್ತು; ಮಲ್ಯ ಅದಾಗಲೇ ವಿದೇಶದಲ್ಲಿದ್ದರು’ ಎಂದು ಸಿಬಿಐ ಹೇಳಿತ್ತು.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.