ಅಧಿಕಾರಿಗೆ ಕ್ರಿಮಿನಲ್ ಬೆದರಿಕೆ: ರಾಜ್ಯಪಾಲರ ನಕಲಿ ಪುತ್ರ ಅರೆಸ್ಟ್
Team Udayavani, Apr 27, 2017, 3:29 PM IST
ಹೈದರಾಬಾದ್ : ಮಹಾರಾಷ್ಟ್ರ ರಾಜ್ಯಪಾಲ ಸಿಎಚ್ ವಿದ್ಯಾಸಾಗರ ರಾವ್ ಅವರ ಪುತ್ರ ತಾನೆಂದು ಹೇಳಿಕೊಂಡು ಸರಕಾರಿ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿ ನಿವೇಶನವೊಂದರ ಮೇಲಿನ ಹಕ್ಕನ್ನು ತನಗೆ ಬಿಟ್ಟುಕೊಡುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಶ್ರೀಧರ ರಾವ್ ಎಂದು ಗುರುತಿಸಲಾಗಿದೆ. ಈತನಿಗೂ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ಪುತ್ರ ವಿವೇಕ್ ಅವರಿಗೂ ಯಾವದೇ ಸಂಬಂಧ ಇಲ್ಲವೆಂದು ಖಚಿತವಾಗಿದೆ.
ಆರೋಪಿ ಶ್ರೀಧರ ರಾವ್ ತಾನು ರಾಜ್ಯಪಾಲರ ಪುತ್ರ ವಿವೇಕ್ ಎಂದು ಹೇಳಿಕೊಂಡು ಸರಕಾರಿ ಕಚೇರಿಯೊಂದರಲ್ಲಿ ಆಫೀಸ್ ಸುಪರಿಂಟೆಂಡೆಂಟ್ ಆಗಿ ದುಡಿಯುತ್ತಿರುವ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ 1800 ಚದರಡಿಯ ನಿವೇಶನವೊಂದರ ಮೇಲಿನ ಹಕ್ಕನ್ನು ತನಗೆ ಬಿಟ್ಟುಕೊಡಬೇಕೆಂದು ಬೆದರಿಕೆ ಒಡ್ಡಿ ಮಾನಸಿಕ ಕಿರುಕುಳ ನೀಡಿದ್ದ. ಸಂತ್ರಸ್ತ ಸುಪರಿಂಟೆಂಡೆಂಟ್ ಅಧಿಕಾರಿ ಬೊವೇನಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದರು.
ಪೊಲೀಸರು ಈ ದೂರಿನ ಆಧಾರದಲ್ಲಿ ರಾಜ್ಯಪಾಲರ ನಕಲಿ ಪುತ್ರನಾದ ಆರೋಪಿ ಶ್ರೀಧರ ರಾವ್ ನನ್ನು ಚಾಣಾಕ್ಷತನಿಂದ ಪತ್ತೆ ಹಚ್ಚಿ ಬಂಧಿಸಿದರು. ಆತನ ವಿರುದ್ಧ ಪೊಲೀಸರು ಐಪಿಸಿ ಸೆ.506ರ ಪ್ರಕಾರ (ಕ್ರಿಮಿನಲ್ ಬೆದರಿಕೆ) ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.