Manipur: ನದಿ ಕೊರೆತಕ್ಕೆ ತತ್ತರಿಸಿದ ಮಣಿಪುರ; ಜಮೀನು ನೀರು ಪಾಲು

ಫ‌ಲಭರಿತ ತೆಂಗು, ಫ‌ಲವತ್ತಾದ ಕೃಷಿ ಭೂಮಿ, ಶೆಡ್‌ಗಳು ನಾಶ; ನದಿ ದಂಡೆ ಯೋಜನೆ ಜಾರಿಗೆ ಆಗ್ರಹ

Team Udayavani, Jul 29, 2024, 5:21 PM IST

flood

ಕಟಪಾಡಿ: ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಣಿಪುರ ವೆಸ್ಟ್‌ ಬಳಿ ತೀವ್ರಗೊಂಡ ನದಿ ಕೊರೆತದಿಂದ ರೈತರ ಕೃಷಿ ಜಮೀನು, ತೋಟ, ರೈತರ ಪಂಪ್‌ಶೆಡ್‌ ನೀರು ಪಾಲಾಗುತ್ತಿದೆ.

ಮಣಿಪುರ ಗ್ರಾಮದಲ್ಲಿ ಹೊಳೆಯ ತಟದ ನಿವಾಸಿಗಳು ಕೃಷಿಯಿಂದಲೇ ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಚಕುಷ್ಮತಿ ಹೊಳೆಯ ನೆರೆಯಿಂದ ಕೃಷಿಗೆ ಹಾನಿಯಾಗುತ್ತದೆ. ಈ ಬಾರಿ ಹೊಳೆಯಕೊರೆತದಿಂದಾಗಿ ಕೃಷಿ ಭೂಮಿ ಕೂಡಾ ಹೊಳೆಯ ಒಡಲು ಸೇರುತ್ತಿದೆ. ಫಲವನ್ನು ಕೊಡುತ್ತಿರುವ ಬೃಹತ್‌ ಗಾತ್ರದ ತೆಂಗಿನ ಮರಗಳು ಹೊಳೆಯನೀರಿನ ಹರಿವಿನ ರಭಸಕ್ಕೆ ಮಣ್ಣು ಕುಸಿದು ನದಿ ಪಾಲಾಗುತ್ತಿದೆ. ಈ ಬಗ್ಗೆ ಕೆಲವು ವರ್ಷಗಳಿಂದ ಮನವಿಯನ್ನು ನೀಡಿದ್ದ ರೂಫಲಿತಾಂಶ ಮಾತ್ರ ಶೂನ್ಯವಾಗಿದೆ. ಪಂಪುಶೆಡ್‌ ಬಿರುಕು ಈ ಬಾರಿಯ ಪುನರ್ವಸು ಮಳೆಗೆ ಫಲ ಭರಿತ 2 ದೊಡ್ಡ ತೆಂಗಿನ ಮರ ಹೊಳೆ ಪಾಲಾಗಿದ್ದು, ಕೃಷಿಕ ಚಂದ್ರಶೇಖರ ಅವರ ಕೃಷಿ ವಿದ್ಯುತ್‌ ಪಂಪುಶೆಡ್‌ ಬಿರುಕು ಬಿಟ್ಟಿದ್ದು, ಪಂಚಾಂಗದ ಸನಿಹದವರೆಗೆ ಜಮೀನು ನದಿ ಪಾಲಾಗಿದೆ. ಇನ್ನು ಶೆಡ್‌ ಹೊಳೆ ಪಾಲಾಗಲು ಕ್ಷಣ ಗಣನೆ ನಡೆಸುತ್ತಿದೆ.

20 ಸೆಂಟ್ಸಲ್ಲಿ ಉಳಿದದ್ದು ಒಂದೇ ಸೆಂಟ್‌!
ನಮ್ಮ ಜಮೀನಿನ ಪಂಪ್‌ ಶೆಡ್‌, ಫಲ ಭರಿತ ತೆಂಗಿನ ಮರಗಳೂ ನದಿಯ ತೆಕ್ಕೆಗೆ ಸೇರಿದೆ. ಹಿರಿಯರ ಕಾಲದಿಂದಲೂ ಜೀವನ ಸಾಗಿಸುತ್ತಿದ್ದ ಕೃಷಿ – ತೋಟ ಪ್ರದೇಶವು ಹೊಳೆ ಪಾಲಾಗುತ್ತಿರುವುದು ಬೇಸರ ತರುತ್ತಿದೆ. 20 ಸೆಂಟ್ಸ್‌ ಇದ್ದ ಕೃಷಿ ಜಮೀನು ಹೊಳೆಯ ಪಾಲಾಗಿ ಈಗ ಸುಮಾರು ಒಂದು ಸೆಂಟ್ಸ್‌ ಮಾತ್ರ ಉಳಿದಿದೆ. ಇದಕ್ಕೆ ಪರಿಹಾರವೂ ಸಿಗುತ್ತಿಲ್ಲ.

– ಚಂದ್ರಶೇಖರ್‌,ಮಣಿಪುರ

ಮನವಿ ನಿಷ್ಪ್ರಯೋಜಕ

ತಡೆ ಗೋಡೆ ನಿರ್ಮಿಸಿ, ಜಮೀನು ರಕ್ಷಿಸಿ ಈ ಭಾಗದಲ್ಲಿ ಹರಿಯುತ್ತಿರುವ ಚಕುಷ್ಮತಿ ಹೊಳೆಯು ಅವಾಂತರ ಸೃಷ್ಟಿಸುತ್ತಿದೆ. ಮನವಿ ಸಲ್ಲಿಸಿದರೂ ನಿಷ್ಪ್ರಯೋಜಕವಾಗಿದೆ. ಅಧಿಕಾರಿಗಳು ಎಚ್ಚೆತ್ತು ಕೂಡಲೇ ನದಿ ದಂಡೆ -ತಡೆಗೋಡೆ ನಿರ್ಮಿಸಿ ನಮ್ಮ ಕೃಷಿ ಜಮೀನುಗೆ ರಕ್ಷಣೆ ನೀಡಲಿ.

–  ಸಂತೋಷ್‌ ಕೋಟ್ಯಾನ್‌, ಮಣಿಪುರ

ನದಿ ದಂಡೆ ನಿರ್ಮಾಣ

ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಗೊಂಡಿಲ್ಲ. ಈಗಾಗಲೇ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಫಾಲೋ ಅಪ್‌ ಮಾಡಿ ರೈತರ ಕೃಷಿ ಜಮೀನುವಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ನದಿ ದಂಡೆ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.

– ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

ಅನುದಾನ ಬಿಡುಗಡೆಗೊಂಡಿಲ್ಲ
ಯಾವುದೇ ಅನುದಾನ ಇದುವರೆಗೆ ಬಿಡುಗಡೆಗೊಂಡಿಲ್ಲ. ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ.

– ಸುಧಾಕರ್‌ ಶೆಟ್ಟಿ, ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ

10 ಎಕರೆ ಭೂಮಿ ಅಪಾಯದಲ್ಲಿ
ನದಿ ಕೊರೆತದಿಂದ ಈಗಾಗಲೇ ಒಂದು ಎಕರೆಗೂ ಮಿಕ್ಕಿದ ಕೃಷಿ ಭೂಮಿ ಹೊಳೆಪಾಲಾಗಿದೆ. ನಿವೃತ್ತ ಅಧ್ಯಾಪಕ ಭೋಜ ಶೆಟ್ಟಿ ಮನೆಯಿಂದ ಆರಂಭಗೊಂಡು ದಿ|ಪ್ರೇಮ ಶೆಟ್ಟಿ, ಅಂಬಾ ಶೆಡ್ತಿ, ಕೊರಗ ಶೆಟ್ಟಿ, ಸಂತೋಷ್‌ ಕೋಟ್ಯಾನ್‌, ದಿ|ರತಿ ಶಡ್ತಿ, ದಿ|ಕುಟ್ಟಿ ಪೂಜಾರಿ, ಉಷಾ ಹಾಗೂ ಚಂದ್ರಶೇಖರ್‌ ರವರ ಕೃಷಿ ಭೂಮಿಯನ್ನು ಕಬಳಿಸುತ್ತಾ ನದಿಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಮಾರು 10 ಎಕರೆಗೂ ಅಧಿಕ ಕೃಷಿ ಜಮೀನು ಹೊಳೆಯ ಪಾಲಾಗುವ ಅಪಾಯ ಕಂಡು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ನದಿ ದಂಡೆ – ತಡೆಗೋಡೆ ನಿರ್ಮಾಣ ಮಾಡಿ ಕೃಷಿ ಭೂಮಿ ರಕ್ಷಿಸಲು ಕೃಷಿಕರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

 

ಟಾಪ್ ನ್ಯೂಸ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

2-bbk11

BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!

Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!

Cyclone Dana: 10ಲಕ್ಷ ಜನ ಸ್ಥಳಾಂತರ… ಅಪಾಯದ ಭೀತಿಯಲ್ಲಿ ಒಡಿಶಾದ 3,000ಗ್ರಾಮಗಳು

Cyclone Dana: 10ಲಕ್ಷ ಜನ ಸ್ಥಳಾಂತರ… ಅಪಾಯದ ಭೀತಿಯಲ್ಲಿ ಒಡಿಶಾದ 3,000 ಗ್ರಾಮಗಳು

Threats To Airlines: ಬಾಂಬ್‌ ಬೆದರಿಕೆ… ಟ್ವಿಟರ್‌ಗೆ ಕೇಂದ್ರ ಸರಕಾರ ತರಾಟೆ !

Threats To Airlines: ಬಾಂಬ್‌ ಬೆದರಿಕೆ… ಟ್ವಿಟರ್‌ಗೆ ಕೇಂದ್ರ ಸರಕಾರ ತರಾಟೆ !

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

2-bbk11

BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.