![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, May 29, 2021, 5:34 PM IST
ಸಾಂದರ್ಭಿಕ ಚಿತ್ರ
ಪಣಜಿ: ಕೋವಿಡ್ ಲಾಕ್ನಿಂದಾಗಿ ಮದುವೆ ಸಮಾರಂಭ ನಡೆಸಲು ಸಾಧ್ಯವಾಗದ ಕಾರಣ ಮದುಮಗಳು ಮದುವೆಗೆ ಅನುಮತಿ ನೀಡುವಂತೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠದ ಮೆಟ್ಟಿಲೇರಿದ ಘಟನೆ ನಡೆದಿದೆ.
ಈ ಪ್ರಕರಣದಲ್ಲಿ ಮದುವೆಗೆ ಷರತ್ತುಬದ್ಧ ಪರವಾನಗಿ ನೀಡುವಂತೆ ನ್ಯಾಯಾಲಯವು ದಕ್ಷಿಣಗೋವಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಪೊಂಡಾದ ಶ್ರುತಿ ವೈದ್ಯ ಇವರ ವಿವಾಹವು ಮೇ 30 ರಂದು ಬೆಳಿಗ್ಗೆ 9.30 ಕ್ಕೆ ನಿಗದಿಯಾಗಿತ್ತು. ಆದರೆ ರಾಜ್ಯದಲ್ಲಿ ಮೇ 31 ರವರೆಗೆ ಕರ್ಫ್ಯೂ ಜಾರಿಯಾಗಿ ಮದುವೆ ಸಮಾರಂಭ ನಡೆಸಲು ನಿರ್ಬಂಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಗೆ ಪರವಾನಗಿ ಪಡೆಯಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು, ಆದರೆ ಜಿಲ್ಲಾಧಿಕಾರಿಗಳು ಮದುವೆ ಸಮಾರಂಭಕ್ಕೆ ಪರವಾನಗಿ ನೀಡಿರಲಿಲ್ಲ.
ಇದನ್ನೂ ಓದಿ : ವೆಂಟಿಲೇಟರ್ನಲ್ಲಿದ್ದು ಕೋವಿಡ್ ವಿರುದ್ಧ ಗೆಲುವು ಕಂಡ 75ರ ಅಜ್ಜಿ
ಈ ಹಿನ್ನೆಲೆಯಲ್ಲಿ ಮದುಮಗಳು ಶ್ರುತಿ ಮುಂಬಯಿ ಉಚ್ಛ ನ್ಯಶಾಯಾಲಯದ ಗೋವಾ ಪೀಠಕ್ಕೆ ಅರ್ಜಿ ಸಲ್ಲಿಸಿ ಮೇ 30 ರಂದು ತಮ್ಮ ಮದುವೆ ಸಮಾರಂಭಕ್ಕೆ ಪರವಾನಗಿ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯವು ಷರತ್ತುಬದ್ಧ ರೀತಿಯಲ್ಲಿ ಈ ಮದುವೆಗೆ ಸಮ್ಮತಿ ಸೂಚಿಸಿರುವುದರಿಂದ ಈ ಮದುವೆ ಸಮಾರಂಭವು ಕೇರಿ-ಪೊಂಡಾದ ಶ್ರೀ ವಿಜಯದುರ್ಗಾ ದೇವಸ್ಥಾನದ ಸಭಾಗೃಹದಲ್ಲಿ ಮೇ 30 ರಂದು ನಡೆಯಲಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.