![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 19, 2019, 7:47 PM IST
ಡೆಹ್ರಾಡೂನ್: ಗೌರಿಕುಂಡ್-ಕೇದಾರನಾಥದ ವರೆಗಿನ 16 ಕಿ.ಮೀ ಚಾರಣ ಮಾರ್ಗದಲ್ಲಿ ಮುಂದಿನ ವರ್ಷದಿಂದ ಯಾತ್ರಾರ್ಥಿಗಳಿಗೆ ಮಸಾಜ್ ಸೌಲಭ್ಯ ದೊರೆಯಲಿದೆ. ಪ್ರಯಾಣದ ಸಮಯದಲ್ಲಿ ಆಯಾಸರಿಗೆ ಆಯಾಸವನ್ನು ಹೋಗಲಾಡಿಸಲು ಮುಂದಿನ ವರ್ಷದಿಂದ ದೇವಾಲಯಕ್ಕೆ ತೆರಳುವ ದಾರಿ ಮಧ್ಯೆ ಏಳು ಮಸಾಜ್ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಭೀಂಬಾಲಿ, ಲಿಂಚೋಲಿ, ರುದ್ರ ಪಾಯಿಂಟ್ ಮತ್ತು ಜಂಗ್ಲೆಚಟ್ಟಿ ಮೊದಲಾದ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತದೆ. ಕೇದಾರನಾಥಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಪರಿಚಯಿಸಲು ಮತ್ತು ದೇವಾಲಯಕ್ಕೆ ಭೇಟಿ ನೀಡಿದ ಅನುಭವವನ್ನು ನೆನಪಿನಲ್ಲಿಡುವಂತೆ ಮಾಡಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಲೂ ದೊರೆಯಲಿದೆ.
ಈ ವರ್ಷ 10 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಕೇದಾರನಾಥಕ್ಕೆ ಭೇಟಿ ನೀಡಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಇದು ಮೀರಿದೆ. ಈ ಹಿಂದಿಗಿಂತಲೂ ಈಗ ಯಾತ್ರಾರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳು ಸುಧಾರಿಸಿದೆ ಎಂದು ಜಿಲ್ಲಾಧಿಕಾರಿ ಮಂಗೇಶ್ ಚಿಲ್ದಿಯಾಲ್ ಹೇಳಿದ್ದಾರೆ. ಮುಂದಿನ ವರ್ಷಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಗೌರಿಕುಂಡ್ನಿಂದ ದೇಗುಲಕ್ಕೆ ಹೇಸರಗತ್ತೆ ಮತ್ತು ಕುದುರೆಗಳಲ್ಲಿ ಹೋಗುವ ಯಾತ್ರಾರ್ಥಿಗಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಹೇಸರಗತ್ತೆ ಮತ್ತು ಕುದುರೆ ನಿರ್ವಾಹಕರು ಕೇದಾರನಾಥಕ್ಕೆ ಚಾರಣದ ಉದ್ದಕ್ಕೂ ಹೆಲ್ಮೆಟ್ ಧರಿಸಬೇಕಾಗುತ್ತದೆ. ಯಾತ್ರೆಯ ಸಂದರ್ಭ ಭೂಕುಸಿತದದ ಪರಿಣಾಮ ಬೆಟ್ಟಗಳಿಂದ ಬೆಣಚುಕಲ್ಲುಗಳು ಮತ್ತು ಬಂಡೆಗಳು ಬೀಳುತ್ತಿವೆ. ಸಣ್ಣಪುಟ್ಟ ಕಲ್ಲುಗಳಿಂದ ರಕ್ಷಣೆಯಾಗಿ ಈ ಕ್ರಮ ಪರಿಚಯಿಸಲಾಗುತ್ತಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.