ನೋಡಿದ್ದೆಲ್ಲವೂ ತಲೆಕೆಳಗಾಗಿ ಕಂಡರೆ?
85 ವರ್ಷಗಳಿಂದಲೂ ವಿಚಿತ್ರ ಕಾಯಿಲೆ ಎದುರಿಸುತ್ತಿರುವ ಪೇಷೆಂಟ್ ಎಂ
Team Udayavani, May 17, 2023, 7:45 AM IST
ನವದೆಹಲಿ:ನಿಮ್ಮ ಸುತ್ತಮುತ್ತಲಿನ ವಸ್ತುಗಳು, ಮನುಷ್ಯರೆಲ್ಲರೂ ನಿಮಗೆ ತಲೆಕೆಳಗಾದಂತೆ ಕಂಡರೆ ಹೇಗಿರಬಹುದು? ಕಲ್ಪಿಸಿಕೊಂಡರೆ ತಲೆಸುತ್ತು ಬಂದಂತಾಗುತ್ತದೆ ಅಲ್ಲವೇ?
1938ರ ಸ್ಪೇನ್ ನಾಗರಿಕ ಯುದ್ಧದಲ್ಲಿ ತಲೆಗೆ ಗುಂಡು ಹೊಕ್ಕಿದ್ದ ಯೋಧರೊಬ್ಬರು ಇಂಥದ್ದೊಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಗ ಅವರಿಗೆ 25 ವರ್ಷ ವಯಸ್ಸಾಗಿತ್ತು. ಅವರಿಗೆ ಚಿಕಿತ್ಸೆ ನೀಡಿದ್ದ ಸೇನಾ ಆಸ್ಪತ್ರೆಯ ವೈದ್ಯರು ಆ ಯೋಧನನ್ನು “ಪೇಷೆಂಟ್ ಎಂ’ ಎಂದು ಕರೆಯುತ್ತಾರೆ. ಅಂದು ತಲೆಗೆ ಗುಂಡು ತಾಗಿ, ಗುಣಮುಖನಾದ ಬಳಿಕ, ಅವರಿಗೆ ಅವರ ಶರೀರವು ನಿರ್ದಿಷ್ಟ ಸ್ಥಿತಿಯಲ್ಲಿದ್ದಾಗ ಎದುರಿಗಿದ್ದ ಎಲ್ಲವೂ ತಲೆಕೆಳಗಾಗಿ ಕಾಣಿಸಲು ಆರಂಭಿಸಿತು.
ಈ ಘಟನೆ ನಡೆದು ಈಗ 85 ವರ್ಷಗಳೇ ಕಳೆದಿವೆ. ಆದರೆ, ಇಂಥದ್ದೊಂದು ವಿಚಿತ್ರವಾದ ನರಸಂಬಂಧಿಸಿ ಸಮಸ್ಯೆ ಕುರಿತು ಸಂಶೋಧಕರು ಈಗ ಮತ್ತಷ್ಟು ಅಧ್ಯಯನ ಆರಂಭಿಸಿದ್ದಾರೆ.
“ಪೇಷೆಂಟ್ ಎಂ’ ಅವರ ಶರೀರವು ವಿಶ್ರಾಂತಿಯಲ್ಲಿದ್ದಾಗ ಮತ್ತು ಯಾವುದೇ ಚಲನೆ ಇಲ್ಲದೇ ಇದ್ದಾಗ, ಅವರಿಗೆ ಇಡೀ ಜಗತ್ತೇ ತಲೆಕೆಳಗಾಗಿ ಕಾಣಿಸುತ್ತದತಂತೆ. ಈ ಕುರಿತು ಅಧ್ಯಯನ ನಡೆಸಿದಾಗ, ಅವರ ಮೆದುಳಿನ ಹೊರಪದರದ ಅಂಚುಗಳು ಧ್ವಂಸಗೊಂಡಿರುವುದು ತಿಳಿದುಬಂತು.
ಮನುಷ್ಯನ ಮೆದುಳಿನ ಹೊರಪದರ(ಸೆರೆಬ್ರಲ್ ಕಾರ್ಟೆಕ್ಸ್)ವು ನಮ್ಮ ಭಾವನೆಗಳು, ಪ್ರಜ್ಞೆ ಮತ್ತು ಸಂವೇದನೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುತ್ತದೆ. ಆದರೆ, ಈ ಪ್ರಕರಣದಲ್ಲಿ ತಲೆಗೆ ಹೊಕ್ಕ ಗುಂಡಿನಿಂದಾಗಿ ಯೋಧನ ಮೆದುಳಿನ ಹೊರಪದರದ ಅಂಚುಗಳಿಗೆ ಹಾನಿಯಾಗಿದೆ ಎಂದಿದ್ದಾರೆ ವೈದ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ
Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.