Modi ಸಂಪುಟ ಅನುಮೋದನೆ: ಆಹಾರ ಭದ್ರತೆಗೆ 1ಲಕ್ಷ ಕೋಟಿ ರೂ. ಯೋಜನೆ

ಚುನಾವಣೆ ಹೊಸ್ತಿಲಲ್ಲಿ ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ , ರೈಲ್ವೇ ಸಿಬಂದಿಗೆ ಬೋನಸ್‌, 2,029 ಕೋಟಿ ರೂ. ವೆಚ್ಚ!

Team Udayavani, Oct 4, 2024, 6:21 AM IST

modi (4)

ಹೊಸದಿಲ್ಲಿ: ರೈತರ ಆದಾಯ ಹೆಚ್ಚಳದೊಂದಿಗೆ, ದೇಶದ ಆಹಾರ ಭದ್ರತೆಯನ್ನು ಖಾತರಿ ಪಡಿಸಿಕೊಳ್ಳುವ 1 ಲಕ್ಷ ಕೋಟಿ ವೆಚ್ಚದ ಯೋಜನೆ, ಕಾರ್ಮಿಕ ಕಲ್ಯಾಣ ಸಂಬಂಧಿತ ಪ್ರಸ್ತಾವಗಳು, ಖಾದ್ಯ ತೈಲ ಉತ್ಪಾದನೆ ಉತ್ತೇಜಿಸುವ ಮಿಷನ್‌ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ-ಆರ್‌ಜೆವಿವೈ) ಹಾಗೂ ಕೃಷಿ ಯೋನ್ನತಿ ಯೋಜನೆಗೆ 1ಲಕ್ಷ ಕೋಟಿ ರೂ. ಅನುದಾನ ಹಂಚಿಕೆಗೆ ಅನುಮೋದಿಸಲಾಗಿದೆ. ಪಿಎಂ- ಆರ್‌ಜೆವಿವೈ ಯೋಜನೆಯು ಸುಸ್ಥಿರ ಕೃಷಿ ಉತ್ತೇ ಜಿಸುವ ಗುರಿ ಹೊಂದಿದ್ದು, ಕೃಷಿಯೋನ್ನತಿ ಯೋಜ ನೆ ಯು ಕೃಷಿ ಸ್ವಾವಲಂಬನೆಯ ಮೂಲಕ ರಾಷ್ಟ್ರದ ಆಹಾರ ಭದ್ರತೆಯನ್ನು ಖಾತರಿಪಡಿಸಿಕೊಳ್ಳು ವುದರ ಬಗ್ಗೆ ಗಮಹರಿಸಲಿದೆ. ಈ ಎರಡೂ ಯೋಜನೆ ಗಳು ಒಟ್ಟು 1,01,321 ಕೋಟಿ ರೂ.ವೆಚ್ಚದಲ್ಲಿ ಜಾರಿಯಾಗಲಿವೆ. ಜತೆಗೆ ಕೃಷಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಈ 2 ಯೋಜನೆಗಳ ಅಡಿಯಲ್ಲಿ ಸಂಯೋಜಿಸಲೂ ಸಮ್ಮತಿಸಲಾಗಿದೆ.

ಖಾದ್ಯ ತೈಲ ಉತ್ಪಾದನೆಗೆ 10,103 ಕೋ.ರೂ.: ಸಂಪುಟ
ಮುಂದಿನ 7 ವರ್ಷದಲ್ಲಿ ಖಾದ್ಯ ತೈಲಗಳ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿ ಯಾಗಿಸುವ ನಿಟ್ಟಿನಲ್ಲಿ 10,103 ಕೋಟಿ ರೂ.ವೆಚ್ಚದಲ್ಲಿ ಖಾದ್ಯ ತೈಲಗಳು- ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್‌ ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಪ್ರಸ್ತಾವಿತ ಯೋಜನೆಯು 2022-23ರಲ್ಲಿ 39 ಮಿಲಿಯನ್‌ ಟನ್‌ ಇರುವ ಖಾದ್ಯತೈಲ ಉತ್ಪಾದನೆಯನ್ನು 2030-31ರ ವೇಳೆಗೆ 69.7 ಮಿಲಿಯನ್‌ ಟನ್‌ಗೆ ಹೆಚ್ಚಿಸಲು ಉದ್ದೇಶಿಸಿದೆ.

ಚುನಾವಣೆ ಹೊಸ್ತಿಲಲ್ಲಿ ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ
ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬ ಮಹಾರಾಷ್ಟ್ರದ ಬಹುದಿನಗಳ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಗುರುವಾರ ಸಮ್ಮತಿ ನೀಡಿದೆ. ಮರಾಠಿ ಜತೆಗೆ ಬೆಂಗಾಲಿ, ಪಾಲಿ, ಪಾಕೃತಿ, ಅಸ್ಸಾಮಿ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನ ನೀಡಲು ಸಂಪುಟ ಅನುಮೋದಿಸಿದೆ. ಇದರೊಂದಿಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳ ಸಂಖ್ಯೆ ಕನ್ನಡವೂ ಸೇರಿ 11ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ಚುನಾವಣೆ ಹೊಸ್ತಿಲಿನಲ್ಲೇ ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದು ಮಹತ್ವ ಪಡೆದಿದೆ. ಮೊದಲಿಗೆ ತಮಿಳು (2004) ಅನಂತರ ಸಂಸ್ಕೃತ (2005), ಕನ್ನಡ ಮತ್ತು ತೆಲುಗು (2008), ಮಲಯಾಳ (2013) ಮತ್ತು ಒಡಿಯಾ (2014)ಭಾಷೆಗಳು ಶಾಸ್ತ್ರೀಯ ಸ್ಥಾನಮಾನ ಪಡೆದಿದ್ದವು.

ರೈಲ್ವೇ ಸಿಬಂದಿಗೆ ಬೋನಸ್‌, 2,029 ಕೋಟಿ ರೂ. ವೆಚ್ಚ!
11.72 ಲಕ್ಷಕ್ಕೂ ಅಧಿಕ ರೈಲ್ವೇ ಸಿಬಂದಿಗೆ 78ದಿನಗಳ ವೇತನಕ್ಕೆ ಸಮನಾಗಿ ಉತ್ಪಾದಕತೆ ಆಧಾರಿತ ಬೋನಸ್‌ ಪಾವತಿಗೂ ಸಮ್ಮತಿಸಲಾಗಿದೆ. ಇದಕ್ಕಾಗಿ 2,029 ಕೋಟಿ ರೂ. ವೆಚ್ಚವಾಗಲಿದೆ. ಇದರ ಜತೆಗೆ ಪ್ರಮುಖ ಬಂದರು ಅಧಿಕಾರಿಗಳು, ಡಾಕ್‌ ಲೇಬರ್‌ ಬೋರ್ಡ್‌ ನೌಕರರು ಸೇರಿದಂತೆ 20,704 ಉದ್ಯೋಗಿಗಳಿಗೂ ಉತ್ಪಾದಕತೆ ಆಧಾರಿತವಾಗಿ 200 ಕೋಟಿ ರೂ.ವೆಚ್ಚದಲ್ಲಿ ಆರ್ಥಿಕ ನೆರವು ನೀಡಲು ಸಮ್ಮತಿಸಿದೆ.

ಟಾಪ್ ನ್ಯೂಸ್

Hashem

Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

Horoscope

Daily Horoscope: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ

ರಾಜೀನಾಮೆಗೆ ಸಿದ್ಧ , ನೀವೂ ಕೊಡುತ್ತೀರಾ?: ಅಶೋಕ್‌ ಸವಾಲು

BJP: ರಾಜೀನಾಮೆಗೆ ಸಿದ್ಧ , ನೀವೂ ಕೊಡುತ್ತೀರಾ?: ಅಶೋಕ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

1-treee

Google ಜತೆ ಬೆಂಗಳೂರಿನ ಕ್ಲೀನ್‌ಮ್ಯಾಕ್ಸ್‌ ಸಹಯೋಗ: ಪವನ ವಿದ್ಯುತ್‌ ಉತ್ಪಾದನೆ

train-track

Railway; 5 ವರ್ಷದಲ್ಲಿ 200 ರೈಲು ಅಪಘಾ*ತಗಳು, 351 ಮಂದಿ ಸಾ*ವು: ವರದಿ

Supreme Court: ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿ

Supreme Court: ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿ

supreem

ವೈವಾಹಿಕ ಅತ್ಯಾಚಾ*ರ ಅಪರಾಧ: ಕೇಂದ್ರ ಸರಕಾರದಿಂದ ವಿರೋಧ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

Hashem

Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.