![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 6, 2020, 2:06 PM IST
ಹೊಸದಿಲ್ಲಿ: ರಾಜಕೀಯ ಪ್ರಚಾರಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿ ನಿಮಗೆ ಟ್ರೇಲರ್ ಆಗಿರಬಹುದು. ಆದರೆ ನಮಗೆ ಅವರು ಜೀವನ ಎಂದು ಪ್ರಧಾನಿ ಮೋದಿಯವರು ಲೋಕಸಭೆಯಲ್ಲಿ ವಿರೋಧಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ವೇಳೆ ಸಂಸದ ಅನಂತ್ ಕುಮಾರ ಹೆಗಡೆ ಹೇಳಿಕೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿ ಸದನಲ್ಲಿ ಕೋಲಾಹಲವೆಬ್ಬಿಸಿದವು. ಈ ವೇಳೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್, ಇದು ಟ್ರೇಲರ್ ಮಾತ್ರ ಎಂದರು. ಇದಕ್ಕೆ ತಿರುಗೇಟು ನೀಡಿದ ಮೋದಿ, ನಿಮಗೆ ಗಾಂಧಿ ಟ್ರೇಲರ್ ಆಗಿರಬಹುದು ಆದರೆ ನಮಗೆ ಅವರು ಜೀವನ ಎಂದರು.
ನಂತರ ಭಾಷಣ ಮುಂದುವರಿಸಿದ ಅವರು, ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ನಮಗೆ ಸ್ಪೂರ್ತಿ ತುಂಬಿದ್ದು, ಮುಂದಿನ ದಿನಗಳಲ್ಲಿ ದೇಶ ಮುನ್ನಡೆಸುವ ನೀಲನಕ್ಷೆ ಹಾಕಿಕೊಟ್ಟಿದೆ ಎಂದರು.
ಈ ಹಿಂದಿನ ಸರಕಾರದ ರೀತಿಯಲ್ಲಿ ನಾವು ಆಲೋಚನೆ ಮಾಡಿದರೆ ರಾಮಜನ್ಮ ಭೂಮಿ ವಿವಾದ ಬಗೆಹರಿಯುತ್ತಿರಲಿಲ್ಲ. ಕರ್ತಾಪು ಕಾರಿಡಾರ್ ಯೋಜನೆ ಪೂರ್ಣವಾಗುತ್ತಿರಲಿಲ್ಲ. ಆರ್ಟಿಕಲ್ 370 ರದ್ದಾಗುತ್ತಿರಲಿಲ್ಲ. ತ್ರಿವಳಿ ತಲಾಖ್ ರದ್ದಾಗುತ್ತಿರಲಿಲ್ಲಎಂದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.