Mumbai: ದಹಿ ಹಂಡಿ ಆಚರಣೆ ವೇಳೆ ಗಾಯಗೊಂಡ 245 ಮಂದಿ!
Team Udayavani, Aug 28, 2024, 11:32 AM IST
ಮುಂಬಯಿ: ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ಬಳಿಕದ ಸಂಭ್ರಮದ ‘ದಹಿ ಹಂಡಿ'(ಮೊಸರು ಕುಡಿಕೆ) ಆಚರಣೆಯ ಭಾಗವಾಗಿ ಮೊಸರು ಕುಡಿಕೆ ಉತ್ಸವದಲ್ಲಿ ಮಾನವ ಪಿರಮಿಡ್ಗಳನ್ನು ರೂಪಿಸುವಲ್ಲಿ ತೊಡಗಿದ್ದ ಒಟ್ಟು 245 ಯುವಕರು (ಗೋವಿಂದಾಸ್) ಗಾಯಗೊಂಡಿದ್ದಾರೆ ಎಂದು ನಾಗರಿಕ ಅಧಿಕಾರಿಗಳು ಬುಧವಾರ(ಆ 28) ತಿಳಿಸಿದ್ದಾರೆ.
ಈ ಗಾಯಾಳುಗಳಲ್ಲಿ 32 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, 213 ಮಂದಿಯನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೊಸರು ಕುಡಿಕೆ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.
ಮೊಸರು ತುಂಬಿದ ಮಣ್ಣಿನ ಪಾತ್ರೆಗಳನ್ನು ಒಡೆಯಲು ಸಾಹಸ ತೋರಿ ಬಹು-ಹಂತದ ಮಾನವ ಪಿರಮಿಡ್ಗಳನ್ನು ರಚಿಸುವ ವೇಳೆ ಹಲವಾರು ಯುವಕರು ಕೆಳ ಬಿದ್ದು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ಹನ್ನೊಂದು ಮಂದಿಯನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಡೆಸುತ್ತಿರುವ ಕೆಇಎಂ ಆಸ್ಪತ್ರೆಗೆ, ತಲಾ ನಾಲ್ವರನ್ನು ರಾಜವಾಡಿ ಮತ್ತು ಸಿಯಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯದಲ್ಲಿ, ಒಬ್ಬರನ್ನು ಜೆಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ಸವದ ಸಂದರ್ಭದಲ್ಲಿ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಮಹಾನಗರದಲ್ಲಿ 11,000 ಕ್ಕೂ ಹೆಚ್ಚು ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh ಕ್ಯಾತೆ: ದುರ್ಗಾ ಪೂಜೆಗೆ ಹಿಲ್ಸಾ ಮೀನಿಲ್ಲ!
Missile;ದಿನದಲ್ಲಿ 2 ಸೀಮಿತ ವ್ಯಾಪ್ತಿ ಪ್ರಯೋಗ ಯಶಸ್ವಿ:ಏನಿದು ಸೀಮಿತ ವ್ಯಾಪ್ತಿಯ ಕ್ಷಿಪಣಿ?
Adani Group 2,610 ಕೋ.ರೂ. ವಶ; ತನಿಖೆ ಸುಪ್ರೀಂ ವಹಿಸಲಿ: ಕಾಂಗ್ರೆಸ್
PM Modi ಹುಟ್ಟುಹಬ್ಬಕ್ಕೆ ದರ್ಗಾದಲ್ಲಿ 4,000 ಕೆ.ಜಿ. ಖಾದ್ಯ
PM Modi ಯಿಂದ ಪಶ್ಚಿಮ ಬಂಗಾಲಕ್ಕೆ ಸ್ವಾತಂತ್ರ್ಯ ಘೋಷಿಸಿ: ಬಾಂಗ್ಲಾ ಉಗ್ರ
MUST WATCH
ಹೊಸ ಸೇರ್ಪಡೆ
Udupi: ಕರ್ತವ್ಯಲೋಪ: 80 ಪೊಲೀಸ್ ಸಿಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Officers Meeting: ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ
Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.